ಬೆಂಗಳೂರು, ಮಾ. 25: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿಯಿಂದ 2ನೇ ವಿಡಿಯೋ ಬಿಡುಗಡೆ ಮಾಡಿದ್ದು, ಎಸ್ ಐಟಿ ಯಾರ ಪರ ಇದೆ ಅಂತ ಪ್ರಶ್ನೆ ಮಾಡಿರೋ ಸಿಡಿ ಲೇಡಿ, ಇಲ್ಲಿ ಯಾರನ್ನ ಸೇಫ್ ಮಾಡ್ತಿದ್ದಾರೆ ಅಂತ ಗೊತ್ತಾಗ್ತಿಲ್ಲ ಎಂದಿದ್ದಾಳೆ.
ಅಲ್ಲದೇ, ನನಗೆ ನನ್ನ ತಂದೆ ತಾಯಿ ಸುರಕ್ಷತೆಯೇ ಮುಖ್ಯ. ನನ್ನ ತಂದೆ ತಾಯಿಗೆ ರಕ್ಷಣೆ ಕೊಡಬೇಕು. ನನ್ನ ತಂದೆ ತಾಯಿ ಸ್ವಚ್ಛೆಯಿಂದ ದೂರು ಕೊಟ್ಟಿಲ್ಲ. ಅವರ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೇ ಆಗ ನಾನು ಎಸ್ ಐಟಿ ಮುಂದೆ ಹಾಜರಾಗುವೆ. ನಾನು ಏನು ಹೇಳಿಕೆ ನೀಡಬೇಕೋ ಅದನ್ನ ನೀಡುತ್ತೇನೆ ಎಂದು ಯುವತಿ ತನ್ನ ಎರಡನೇ ವಿಡಿಯೋದಲ್ಲಿ ತಿಳಿಸಿದ್ದಾಳೆ.
ಇನ್ನೂ, ಹಾಗೆಯೇ ಮಹಿಳಾ ಸಂಘಟನೆಗಳು ಸಿದ್ದರಾಮಯ್ಯ, ರಮೇಶ್ ಕುಮಾರ್, ಡಿಕೆ ಶಿವಕುಮಾರ್ ರಲ್ಲಿ ಕೇಳಿಕೊಳ್ಳುತ್ತೇನೆ. ಮಾರ್ಚ್ 12 ರಂದೇ ನಗರ ಪೊಲೀಸ್ ಆಯುಕ್ತರು, ಎಸ್ ಐಟಿಗೆ ವಿಡಿಯೋ ಕಳಿಸಿದ್ದೆ. ಆದರೆ ನಾನು ವಿಡಿಯೋ ಕಳಿಸಿದ್ದ ದಿನ ವಿಡಿಯೋ ಬಿಡುಗಡೆ ಆಗಲಿಲ್ಲ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ. ದೂರು ನೀಡಿದ ಅರ್ಧ ಗಂಟೆ ಬಳಿಕ ವಿಡಿಯೋ ರಿಲೀಸ್ ಆಗಿದೆ. ಹೀಗಾಗಿ ನನಗೆ ಏನಾಗುತ್ತಿದೆಯೋ ಗೊತ್ತಿಲ್ಲ. ಎಸ್ ಐಟಿ ಯಾರ ಪರವಾಗಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಯುವತಿ SIT ಹಾಗೂ ಪೊಲೀಸ್ ಆಯುಕ್ತರ ವಿರುದ್ಧ ಭಾರೀ ಆರೋಪ ಮಾಡಿದ್ದಾಳೆ.