ಬೆಂಗಳೂರು, ಏ. 12: ರಮೇಶ್ ಜಾರಕಿಹೊಳಿ ವಿರುದ್ಧದ ಹೇಳಿಕೆ ಸತ್ಯವಾದುದಲ್ಲ. ನನ್ನನ್ನು ನರೇಶ್, ಶ್ರವಣ್ ಬಳಸಿಕೊಂಡ್ರು. ಹನಿಟ್ರ್ಯಾಪ್ಗೆ ಬಳಸಿಕೊಂಡು ಹೀಗೆ ಮಾಡಿದ್ದಾರೆ ಎಂಬುದಾಗಿ ಎಸ್ಐಟಿ ಅಧಿಕಾರಿಗಳ ಮುಂದೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಯನ್ನು ಕೇಳಿದಂತ ಎಸ್ಐಟಿ ಅಧಿಕಾರಿಗಳೇ ಸಿಡಿ ಸಂತ್ರಸ್ತ ಯುವತಿಯ ಹೇಳಿಕೆ ಕೇಳಿ ಶಾಕ್ ಆಗಿದ್ದಾರೆ.
ಇಂದು ಮತ್ತೊಂದು ಸುತ್ತಿನ ವಿಚಾರಣೆಗಾಗಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿನ ಸಂತ್ರಸ್ತ ಯುವತಿ, ಎಸ್ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಈ ವೇಳೆ ಎಸ್ಐಟಿ ಅಧಿಕಾರಿ ಕವಿತಾ ವಿಚಾರಣೆ ನಡೆಸಿದರು. ಇಂತಹ ಸಂದರ್ಭದಲ್ಲಿ ಎಸ್ಐಟಿ ಅಧಿಕಾರಿಗಳ ಮಾಹಿತಿ ನೀಡಿದಂತ ಸಂತ್ರಸ್ತೆ, ನನ್ನನ್ನು ನರೇಶ್ ಹಾಗೂ ಶ್ರವಣ್ ಅವರು ಹನಿಟ್ರ್ಯಾಫ್ ಗಾಗಿ ಬಳಸಿಕೊಂಡರು. ರಮೇಶ್ ಜಾರಕಿಹೊಳಿ ವಿರುದ್ಧದ ಹೇಳಿಕೆ ಸತ್ಯವಾದುದ್ದಲ್ಲ. ನನ್ನನ್ನು ಹನಿಟ್ರ್ಯಾಫ್ ಗೆ ಬಳಿಸಿಕೊಂಡೇ, ಈ ಕೃತ್ಯ ನಡೆಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಸಿಆರ್ ಪಿ ಸಿ 161 ಅಡಿಯಲ್ಲಿ ಸಿಡಿ ಸಂತ್ರಸ್ತ ಯುವತಿ ಹೇಳಿದಂತ ಹೇಳಿಕೆಯನ್ನು ಕೇಳಿದ ಎಸ್ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಈ ಮೂಲಕ ಉಲ್ಟಾ ಹೊಡೆದಂತ ಸಿಡಿ ಸಂತ್ರಸ್ತೆಯ ಹೇಳಿಕೆಯನ್ನು ವೀಡಿಯೋ ರೆಕಾರ್ಡಿಂಗ್ ಮಾಡಿಕೊಂಡು ದಾಖಲಿಸಿದ್ದಾರೆ. ಈ ಬಳಿಕ ಮತ್ತೊಮ್ಮ ನ್ಯಾಯಾಧೀಶರ ಎದುರು ಸಿಡಿ ಸಂತ್ರಸ್ತ ಯುವತಿಯನ್ನು ಸಿ ಆರ್ ಪಿ ಸಿ 164 ಅಡಿಯಲ್ಲಿ ಹೇಳಿಕೆ ದಾಖಲಿಸಲು ಹಾಜರು ಪಡಿಸಲಿದ್ದಾರೆ ಎನ್ನಲಾಗುತ್ತಿದೆ.