- ಕೊನೆಗೂ ಚಿನ್ನಸ್ವಾಮಿಯಲ್ಲಿ ಆರ್ಸಿಬಿಗೆ ಗೆಲುವು
- ರಾಜಸ್ಥಾನ್ ವಿರುದ್ಧ 11 ರನ್ಗಳ ರೋಚಕ ಜಯ (RCB sealed victory at home)
- ಕೊನೆಯ 2 ಓವರ್ನಲ್ಲಿ ತಿರುವು
Bengaluru: ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ಆರ್ಸಿಬಿ (RCB) 11 ರನ್ಗಳ ರೋಚಕ ಜಯ ಸಾಧಿಸಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ನಿನ್ನೆ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ, 205 ರನ್ಗಳ ಬೃಹತ್ ಸ್ಕೋರ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ರಾಜಸ್ಥಾನ 20 ಓವರ್ಗಳಲ್ಲಿ 194 ರನ್ ಗಳಿಸಿ ಸೋಲಿಗೆ ಶರಣಾಯ್ತು (Surrendered to defeat) .206 ರನ್ಗಳ ಗುರಿ ಬೆನ್ನು ಹತ್ತಿದ್ದ ಆರ್ಆರ್ (RR) , ಉತ್ತಮ ಆರಂಭ ಪಡೆಯಿತು. ಜೈಸ್ವಾಲ್ ಮತ್ತು ವೈಭವ್ (Jaiswal and Vaibhav) ಉತ್ತಮ ಸ್ಟಾರ್ಟ್ ನೀಡಿದರು.
52 ರನ್ಗಳ ಆರಂಭಿಕ ಪಾಲುದಾರಿಕೆ ನೀಡಿದರು. ಆದರೆ ಸೂರ್ಯವಂಶಿ 16 ರನ್ ಗಳಿಸಿ ಔಟಾದರು (Got out.) . ಆದರೂ ಜೈಸ್ವಾಲ್ ಬಿರುಗಾಳಿಯ ರೀತಿಯಲ್ಲಿ ತಮ್ಮ ಆಟ ಮುಂದುವರಿಸಿದರು. ಕೊನೆಗೆ 19 ಎಸೆತಗಳಲ್ಲಿ 49 ರನ್ ಗಳಿಸಿ ಔಟಾದರು. ಜೈಸ್ವಾಲ್ ನಂತರ ರಾಣಾ ಮತ್ತು ಪರಾಗ್ (Rana and Parag) ಜವಾಬ್ದಾರಿ ತೆಗೆದುಕೊಂಡರು. ಇವರಿಬ್ಬರು ಸೇರಿ 38 ರನ್ಗಳ ಪಾರ್ಟ್ನರ್ಶಿಪ್ ನೀಡಿದರು. ಒಂದು ಹಂತದಲ್ಲಿ ಆರ್ಆರ್ 2 ವಿಕೆಟ್ (RR 2 wickets) ನಷ್ಟಕ್ಕೆ 110 ರನ್ ಗಳಿಸಿತ್ತು. ಮುಂದಿನ 24 ರನ್ಗಳಿಗೆ ಪ್ರಮುಖ ಮತ್ತೆರಡು ವಿಕೆಟ್ ಬಿದ್ದವು. ಪರಾಗ್ ಕೇವಲ 10 ಎಸೆತದಲ್ಲಿ 22 ರನ್ ಗಳಿಸಿ ಔಟಾದರೆ, ರಾಣಾ 28 ರನ್ ಗಳಿಸಿ ಪೆವಿಲಿಯನ್ ಸೇರಿದರು.
ರಾಜಸ್ಥಾನ್ ರಾಯಲ್ಸ್ ಸುಲಭ ಗೆಲುವಿನತ್ತ ಸಾಗುತ್ತಿತ್ತು (Moving towards victory) . 12ನೇ ಓವರ್ ಮುಗಿದ ನಂತರ ರಾಜಸ್ಥಾನ್ ತಂಡಕ್ಕೆ ಇನ್ನೂ 7 ವಿಕೆಟ್ ಹೊಂದಿತ್ತು. ಗೆಲ್ಲಲು 8 ಓವರ್ಗಳಲ್ಲಿ (8 overs) 78 ರನ್ಗಳನ್ನು (78 runs) ಅಗತ್ಯವಿತ್ತು. ಆದರೆ ಮುಂದಿನ 5 ಓವರ್ಗಳಲ್ಲಿ ಆರ್ಸಿಬಿ ಬೌಲರ್ಗಳು ಪ್ರಾಬಲ್ಯ ಸಾಧಿಸಿದರು.

ಇದರ ಮಧ್ಯೆ ಭುವಿ 18ನೇ ಓವರ್ನಲ್ಲಿ (Bhuvi in the 18th over) 22 ರನ್ಸ್ ಬಿಟ್ಟುಕೊಟ್ಟರು. ಇದರಿಂದ ರಾಜಸ್ಥಾನ ಗೇಮ್ಗೆ ಮತ್ತೆ ಕಂಬ್ಯಾಕ್ (Comeback to the game) ಮಾಡಿತು.ಕೊನೆಯ 2 ಓವರ್ಗಳಲ್ಲಿ ರಾಜಸ್ಥಾನ್ ಗೆಲ್ಲಲು 18 ರನ್ಗಳ ಅಗತ್ಯ ಇತ್ತು. 19ನೇ ಓವರ್ನಲ್ಲಿ ಹೇಜಲ್ವುಡ್ (Hazelwood) 2 ವಿಕೆಟ್ ಪಡೆದಿದ್ದಲ್ಲದೆ, ಕೇವಲ ಒಂದು ರನ್ ನೀಡಿದರು. ಇನ್ನು ಕೊನೆಯ ಓವರ್ನಲ್ಲಿ ದಯಾಳ್, 16 ರನ್ಸ್ ಡಿಪೆಂಟ್ ಮಾಡಿಕೊಳ್ಳಬೇಕಾಗಿತ್ತು. ಅದ್ಭುತವಾಗಿ ಬೌಲಿಂಗ್ (Bowling brilliantly) ಮಾಡಿದ ದಯಾಳ್ ಐದು ರನ್ ಮಾತ್ರ ನೀಡಿದರು. ಪರಿಣಾಮ ರಾಜಸ್ಥಾನ್ ರಾಯಲ್ಸ್ (Rajasthan Royals) , 11 ರನ್ಗಳಿಂದ ಸೋಲನ್ನು ಕಂಡಿತು.
ಇನ್ನು ಆರ್ಸಿಬಿ (RCB) ವಿರುದ್ಧದ ಪಂದ್ಯವನ್ನು 11 ರನ್ಗಳಿಂದ ಸೋತಿರುವ ರಾಜಸ್ಥಾನ್ ರಾಯಲ್ಸ್ (RCB vs RR) ತಂಡಕ್ಕೆ 2025 ರ ಐಪಿಎಲ್ (IPL 2025) ಇನ್ನು ಮುಂದೆ ಕೇವಲ ಔಪಚಾರಿಕವಾಗಿದೆ. ಏಕೆಂದರೆ ಈಗಾಗಲೇ ಆಡಿರುವ 9 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋತಿರುವ ರಾಜಸ್ಥಾನ್ ಪ್ರಸ್ತುತ 8ನೇ ಸ್ಥಾನದಲ್ಲಿದ್ದು (Currently in 8th place) , ತಂಡದ ಪ್ರದರ್ಶನವನ್ನು ನೋಡಿದರೆ, ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಅಸಾಧ್ಯದ ಮಾತಾಗಿದೆ. ಹೀಗಾಗಿಯೇ ರಾಜಸ್ಥಾನ್ ಪ್ಲೇ ಆಫ್ ಕನಸು ನುಚ್ಚು ನೂರಾಗಿದೆ.
ಇದನ್ನು ಓದಿ : http://ಪಹಲ್ಗಾಮ್ ಅಲ್ಲಿ ದಾಳಿ ನಡೆಸಿದ ನಾಲ್ವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ ಭದ್ರತಾಪಡೆ
ತಂಡದ ಈ ಕಳಪೆ ಪ್ರದರ್ಶನಕ್ಕೆ ಮಧ್ಯಮ ಕ್ರಮಾಂಕದ ವೈಫಲ್ಯವೇ ಪ್ರಮುಖ (Failure is key) ಕಾರಣ ಎನ್ನಬಹುದು. ಸತತ ಮೂರು ಪಂದ್ಯಗಳಲ್ಲಿ ರಾಜಸ್ಥಾನ್ (Rajasthan) ತಾನು ಮಾಡಿದ ತಪ್ಪುಗಳಿಂದಲೇ ಸೋತಿದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲೂ ರಾಜಸ್ಥಾನ್ ಅದೇ (RCB sealed victory at home) ತಪ್ಪನ್ನು ಮಾಡಿ ಸೋತಿತ್ತಾದರೂ ಇಲ್ಲಿ ಆರ್ಸಿಬಿ ವಿಕೆಟ್ ಕೀಪರ್ (RCB wicketkeeper) ಜಿತೇಶ್ ಶರ್ಮಾ (Jitesh Sharma) ತೋರಿದ ಚಾಣಾಕ್ಷತೆ ಆರ್ಸಿಬಿ ಗೆಲುವಿಗೆ ಪ್ರಮುಖ ಕಾರಣವಾಯಿತು.