- ಉಚಿತ ಪಾಸ್ ಇಂದಲೇ ಉಂಟಾದ ಆವಾಂತರ (RCB Victory Stampede in stadium)
- 35 ಸಾವಿರ ಜನಕ್ಕೆ ಕುಳಿತುಕೊಳ್ಳಲು ವ್ಯವಸ್ಥೆ ಸೇರಿದ್ದು ಸುಮಾರು 2 ಲಕ್ಷ ಜನ
- ಪ್ರೀ ಪ್ಲಾನ್ ಮಾಡದೆ ಆರಂಭಿಸಿದ ವಿಜಯೋತ್ಸವ ಮೆರವಣಿಗೆ
Bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bangalore) ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತಕ್ಕೆ
ಸಿಲುಕಿ 11ಕ್ಕೂ ಹೆಚ್ಚು ಮಂದಿ ಸಾ*ನ್ನಪ್ಪಿದ್ದಾರೆ. ಬೆಂಗಳೂರಿಗೆ ಆಗಮಿಸಿದ ವಿಜೇತ ಆರ್ಸಿಬಿ (Winner RCB) ತಂಡವು ಚಿನ್ನಸ್ವಾಮಿ ಕ್ರೀಡಾಂಗಣ ವನ್ನು ಪ್ರವೇಶಿಸುವ ಸಂದರ್ಭದಲ್ಲಿ,
ಸುತ್ತಮುತ್ತ (Around) ಜಮಾವಣೆಗೊಂಡಿದ್ದ ಅಗಾಧ ಸಂಖ್ಯೆಯ ಜನರನ್ನು ಪೊಲೀಸರು ನಿಯಂತ್ರಿಸಲಾಗದೆ (Police cannot control) ಈ ಕಾಲ್ತುಳಿತ ಸಂಭವಿಸಿದೆ.
ಒಟ್ಟಿನಲ್ಲಿ, ಸಂಭ್ರಮಾಚರಣೆಗೆಂದು (Celebration) ತವಕಿಸುತ್ತಿದ್ದವರು ಸಮಾಧಿಯೆಡೆಗೆ ಸಾಗುವಂತಾಗಿದ್ದು ನಿಜಕ್ಕೂ ನೋವಿನ (Really painful) ಸಂಗತಿ.
ಅಗಾಧ ಸಂಖ್ಯೆಯಲ್ಲಿ ನೆರೆದಿರುವ ಜನರಲ್ಲಿ ಆಕ್ರೋಶವೇ (Outrage) ತುಂಬಿರಲಿ ಅಥವಾ ಸಂಭ್ರಮವೇ ಕೆನೆಗಟ್ಟಿರಲಿ,
ಅವರನ್ನು ವ್ಯವಸ್ಥಿತವಾಗಿ ನಿರ್ವಹಣೆ (Management) ಮಾಡದಿದ್ದರೆ ಮತ್ತು ಅದಕ್ಕೆಂದು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಉದ್ದೇಶಿತ ವಾತಾವರಣ (Environment) ಹೇಗೆ ಬದಲಾಗಬಹುದು ಎಂಬುದಕ್ಕೆ ಈ ನಿದರ್ಶನ ಸಾಕ್ಷಿಯಾಗಬಲ್ಲದು.
ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಆರ್ಸಿಬಿ ವಿಜಯೋತ್ಸವಕ್ಕೆ ಸುಮಾರು 30,000 ದಿಂದ 40,000 ಜನರು ಆಗಮಿಸುವ ನಿರೀಕ್ಷೆ (Expect to arrive) ನಗರ ಪೊಲೀಸರಿಗಿತ್ತು ಎಂದು ಮೂಲಗಳು ತಿಳಿಸಿವೆ.
ಆದರೆ, ಅಂದಾಜು ಎರಡು ಲಕ್ಷಕ್ಕೂ (Two lakhs) ಹೆಚ್ಚು ಜನ ಬಂದಿದ್ದರು. ಸ್ಟೇಡಿಯಂ ಒಳಗೆ ನುಗ್ಗಲು ಯತ್ನಿಸಿದ್ದರು. ಇದರಿಂದ ಪರಿಸ್ಥಿತಿ ವಿಕೋಪಕ್ಕೆ (Situation is dire) ತಿರುಗಿ 11 ಜನ ಸಾವನ್ನಪ್ಪಿದರು ಮತ್ತು

ಹಲವಾರು ಮಂದಿ ಗಾಯಗೊಂಡರು (Injured) .ಕ್ರೀಡಾಂಗಣದ 35,000 ಆಸನ ಸಾಮರ್ಥ್ಯಕ್ಕೆ ಅನುಗುಣವಾಗಿ ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು(Police personnel) ಸ್ಥಳದಲ್ಲಿ ನಿಯೋಜಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು (Police officers) ತಿಳಿಸಿದ್ದಾರೆ
ಕ್ರೀಡಾಂಗಣಕ್ಕೆ ಪ್ರವೇಶ ಟಿಕೆಟ್ (Entry ticket) ಸಿಗದ ಹಲವಾರು ಅಭಿಮಾನಿಗಳು ಟಿಕೆಟ್ (Ticket) ಹೊಂದಿದ್ದವರೊಂದಿಗೆ ಆವರಣಕ್ಕೆ ನುಗ್ಗಲು ಪ್ರಯತ್ನಿಸಿದಾಗ ಆರಂಭಿಕ ಅವ್ಯವಸ್ಥೆ (Early chaos) ನಂತರ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಪೊಲೀಸ್ ಮೂಲಗಳು (Police sources) ತಿಳಿಸಿವೆ.
ಹೀಗೆ ಗೊಂದಲ ಉಂಟಾದಾಗ, ಕೆಲವರು ನೆಲಕ್ಕೆ ಬಿದ್ದರು, ಕೆಲವರು ಕ್ರೀಡಾಂಗಣಕ್ಕೆ (Stadium) ಪ್ರವೇಶಿಸಲು ಬೃಹತ್ ಗೇಟ್ಗಳನ್ನು ಹತ್ತಲು ಪ್ರಯತ್ನಿಸುವಾಗ ಗಾಯಗೊಂಡರು .
ಟಿಕೆಟ್ಗಳನ್ನು ಹೊಂದಿದ್ದವರಿಗೆ ಕ್ರೀಡಾಂಗಣಕ್ಕೆ ಪ್ರವೇಶಿಸಲು (Enter the stadium) ಅವಕಾಶ ನೀಡಲಾಗಿದ್ದರೂ,
ಅನೇಕರು ಉಚಿತ ಪಾಸ್ಗಳು ಮತ್ತು ಟಿಕೆಟ್ಗಳನ್ನು ಹೊಂದಿರುವವರೊಂದಿಗೆ ನುಗ್ಗಲು ಪ್ರಯತ್ನಿಸಿದರು (Tried) .
ಪ್ರವೇಶ ಪಡೆಯುವ ಪ್ರಯತ್ನದಲ್ಲಿ, ಅವರಲ್ಲಿ ಕೆಲವರು ಪರಸ್ಪರ ತಳ್ಳಲು ಪ್ರಾರಂಭಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು (Police officer) ಹೇಳಿದರು.
ಪೊಲೀಸರ ಪ್ರಕಾರ, ಸುಮಾರು 50 ಸಾ*ರ ಜನರು 1 ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದರು, ನಂತರ ಆ ಸಂಖ್ಯೆ ಹೆಚ್ಚಾಗುತ್ತಲೇ ಇದ್ದಿದ್ದರಿಂದ ಈ ಘಟನೆ ಸಂಭವಿಸಿದೆ (Incident occurred) .
ಇದನ್ನು ಓದಿ : ಇಂದು ಆರ್ಸಿಬಿ vs ಪಂಜಾಬ್ ಫೈನಲ್ ಫೈಟ್; ಅಂತ್ಯವಾಗಲಿದೆಯಾ 18 ವರ್ಷಗಳ ಕಾಯುವಿಕೆ?
ಒಟ್ಟಿನಲ್ಲಿ ಸ್ಟೇಡಿಯಂ ಹೊರಭಾಗದಲ್ಲಿ ರಾಶಿ (RCB Victory Stampede in stadium) ರಾಶಿಯಾಗಿ ಬಿದ್ದಿರುವ ಚಪ್ಪಲಿಗಳು (Slippers) ದುರಂತಕ್ಕೆ ಸಾಕ್ಷಿ ನುಡಿಯುತ್ತಿವೆ.