Bengaluru: 2023 ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 24ನೇ ಪಂದ್ಯದಲ್ಲಿ ಬಹುನಿರೀಕ್ಷಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)ಹಾಗೂ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡಗಳು ಸೆಣಸಲು (rcb vs csk) ಸಜ್ಜಾಗುತ್ತಿವೆ.
ಈ ಮಹತ್ವದ ಪಂದ್ಯವು ಇಂದು (ಸೋಮವಾರ) ಸಂಜೆ 07: 30ಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಈವರೆಗೆ ಸತತವಾಗಿ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 23 ರನ್ಗಳ ಭರ್ಜರಿ ಗೆಲುವು ಸಾಧಿಸಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಯಾವಾಗಲೂ ಹೈವೋಲ್ಟೇಜ್ನಿಂದ ಕೂಡಿರುತ್ತದೆ.
ವಿರಾಟ್ ಕೊಹ್ಲಿ (Virat Kohil) ಅಭಿಮಾನಿಗಳು ಆರ್ಸಿಬಿಗೆ ಹಾಗೂ ಎಂ.ಎಸ್. ಧೋನಿ (M.S.Dhoni) ಅಭಿಮಾನಿಗಳು ಸಿಎಸ್ಕೆಗೆ ಬೆಂಬಲ ಸೂಚಿಸುತ್ತಾರೆ.
ಆರ್ಸಿಬಿಗೆ ಹೋಂ ಪಿಚ್ ಆಗಿರುವುದರಿಂದ ಗೆಲ್ಲಲೇ ಬೇಕು ಎನ್ನುವ ಹಂಬಲದಲ್ಲಿದೆ. ಇನ್ನು, ಹೋಂ ಗ್ರೌಂಡ್ನಲ್ಲಿ ಬೆಂಗಳೂರು ತಂಡವನ್ನು ಸೋಲಿಸಬೇಕು ಎಂಬ ನಿರೀಕ್ಷೆಯಲ್ಲಿ ಚೆನ್ನೈ ತಂಡ ಕೂಡ ಇದೆ.
ಅಂತಿಮವಾಗಿ ಯಾರಿಗೆ ಗೆಲುವಿನ ಮಾಲೆ ಬೀಳುತ್ತದೆ ಎಂಬುದನ್ನು ಈಗ ಕಾದು ನೋಡಬೇಕಿದೆ.
ಧೋನಿ-ಕೊಹ್ಲಿಯ ಕೊನೆಯ ಮುಖಾಮುಖಿ!
ಇಲ್ಲಿಯವರೆಗೆ ಸಿಎಸ್ಕೆ ಹಾಗೂ ಆರ್ಸಿಬಿ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿವೆ.
ಇಂದು 31ನೇ ಪಂದ್ಯವಾಗಿದ್ದು ಇದು ಧೋನಿ (Dhoni) ಹಾಗೂ ವಿರಾಟ್ ಕೊಹ್ಲಿ (Virat Kohil) ನಡುವಿನ ಕೊನೆಯ ಪಂದ್ಯ ಆಗಿರಬಹುದು ಎಂದು ಹೇಳಲಾಗುತ್ತಿದೆ.
ಈ ಐಪಿಎಲ್ ಟೂರ್ನಿಯ ಬಳಿಕ ಧೋನಿ ನಿವೃತ್ತಿ ಹೊಂದುವ ಸಾಧ್ಯತೆ ಇದೆ. ಹಾಗಾಗಿ ಇಂದಿನ ಪಂದ್ಯ ವಿಶ್ವದ ಇಬ್ಬರು ಯಶಸ್ವಿ ನಾಯಕರ ನಡುವಿನ ಸ್ಪರ್ಧೆಯಾಗಿದೆ.
ಪಂದ್ಯದ ವಿವರಗಳು:
ಐಪಿಎಲ್ 2023, 24ನೇ ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್
ದಿನಾಂಕ: ಏಪ್ರಿಲ್ 17, 2023
ಸಮಯ: ಸಂಜೆ 07: 30ಕ್ಕೆ ಆರಂಭ
ಸ್ಥಳ: ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್(Star Sports Network)
ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ

ಈವರೆಗೆ ಸಿಎಸ್ಕೆ ಹಾಗೂ ಆರ್ಸಿಬಿ ತಂಡಗಳು ಐಪಿಎಲ್ನಲ್ಲಿ ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್ಸಿಬಿ ಗೆದ್ದಿರುವುದು ಕೇವಲ 10 ಬಾರಿ ಮಾತ್ರ,ಆದರೆ 19 ಬಾರಿ ಸಿಎಸ್ಕೆ ತಂಡ ಗೆದ್ದಿದೆ.
ಇನ್ನು ಒಂದು ಪಂದ್ಯ ರದ್ದಾಗಿತ್ತು. ಈ 2023 ಸೀಸನ್ನಲ್ಲಿ ಸಿಎಸ್ಕೆ (CSK) ಹಾಗೂ ಆರ್ಸಿಬಿ (RCB) ತಲಾ 4 ಪಂದ್ಯಗಳನ್ನಾಡಿ ಎರಡು ಗೆದ್ದಿವೆ.
ಈ ಮೂಲಕವಾಗಿ ನಾಲ್ಕು ಅಂಕ ಗಳಿಸಿ ಅನುಕ್ರಮವಾಗಿ ಆರು ಹಾಗೂ ಏಳನೇ ಸ್ಥಾನದಲ್ಲಿವೆ.
ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ದೀಪಕ್ ಚಹರ್ (Deepak Chahar), ಬೆನ್ ಸ್ಟೋಕ್ಸ್(Ben Stokes),
ಹಾಗೂ ಸಿಸಾಂಡ ಮಗಾಲ ಅವರು ಗಾಯದಿಂದಾಗಿ ಆರ್ಸಿಬಿ ವಿರುದ್ದದ ಪಂದ್ಯಕ್ಕೆ ಇಂದು ಅಲಭ್ಯರಾಗಿದ್ದಾರೆ.
ಇನ್ನೊಂದೆಡೆ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ.
ಪಂದ್ಯದ ಹವಾಮಾನ ವರದಿ:
ಕರ್ನಾಟಕ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ
ಚೆನ್ನೈ ಸೂಪರ್ ಕಿಂಗ್ಸ್ ನಡುವಣ (rcb vs csk) ಪಂದ್ಯಕ್ಕೆ ಮಳೆ ಅಡ್ಡಿ ಮಾಡುವುದಿಲ್ಲ ಎಂದು ಮಾಹಿತಿ ನೀಡಿದೆ.
ಕರ್ನಾಟಕ ಹವಾಮಾನ ಇಲಾಖೆಯು” ಆಲ್ ದಿ ಬೆಸ್ಟ್ ಆರ್ಸಿಬಿ” (All The Best RCB) ಎಂದು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶುಭ ಹಾರೈಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬ್ಯಾಟ್ಸಮನ್ಗಳಿಗೆ ಸಹಕಾರಿ ಆಗಿದೆ. ಹೀಗಾಗಿ ದೊಡ್ಡ ಸ್ಕೋರ್ ನಿರೀಕ್ಷೆ ಮಾಡಬಹುದು.
ಹಾಗಾಗಿ ಟಾಸ್ ಗೆದ್ದವರು ಚೇಸಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಕೂಡ ಹೆಚ್ಚು. ಹಾಗಾಗಿ, ಇಂದಿನ ಪಂದ್ಯದಲ್ಲಿ ಟಾಸ್ ಗೆಲ್ಲೋದು ಕೂಡ ತುಂಬಾನೇ ಮುಖ್ಯ.