- ವಿವಾದಕ್ಕೀಡಾದ 100 ಎಕ್ರೆ ಅರಣ್ಯ ನಾಶ (Forest destruction)
- ಅಧಿಕಾರಿಗಳ ಅನುಮತಿಯಿಲ್ಲದೆ ಆತುರಾತುರವಾಗಿ ಅರಣ್ಯ (Reestablish 100 acres of forest in Telangana) ನಾಶ ಮಾಡಿರುವುದರ ಕುರಿತಾಗಿ ತೆಲಂಗಾಣ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ತರಾಟೆ
- ಅರಣ್ಯವನ್ನು ಪುನಃ ಸ್ಥಾಪಿಸಿ ಇಲ್ಲವೇ ಜೈಲು ಶಿಕ್ಷೆಗೆ ಸಿದ್ಧರಾಗಿ ಎಂದ ಸುಪ್ರಿಂ ಕೋರ್ಟ್
Hyderabad: ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ (Hyderabad Central University) ಪಕ್ಕದಲ್ಲಿರುವ ಕಂಚ ಗಚ್ಚಿಬೌಲಿಯ ಸುಮಾರು 100 ಎಕರೆಗಳನ್ನು ಪುನರಾಭಿವೃದ್ಧಿ ಮಾಡುವ ಕಾಂಗ್ರೆಸ್ನ (Congress) ಯೋಜನೆಗಳ ಸುತ್ತ ಇದೀಗ ವಿವಾದ ಸುತ್ತಿಕೊಂಡಿದೆ.
ಅಧಿಕಾರಿಗಳ ಅನುಮತಿಯಿಲ್ಲದೆ ಆತುರಾತುರವಾಗಿ ಅರಣ್ಯ ನಾಶ ಮಾಡಿರುವುದರ ಬಗ್ಗೆ ಬುಧವಾರ ಸುಪ್ರೀಂ ಕೋರ್ಟ್ (Supreme Court) ತೆಲಂಗಾಣ ಸರ್ಕಾರವನ್ನು (Telangana government) ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ನ್ಯಾಯಮೂರ್ತಿ ಬಿ.ಆರ್. ಗವಾಯಿ (B.R. Gawai) ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ (A.G. Messiah) ಅವರ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಹೈದರಾಬಾದ್ನ ಕಂಚ ಗಚ್ಚಿಬೌಲಿಯ ಪ್ರದೇಶದಲ್ಲಿ (Gachibowli area) ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದ ಪಕ್ಕದಲ್ಲಿರುವ ಸುಮಾರು 100 ಎಕರೆ ಅರಣ್ಯವನ್ನು ಅಧಿಕಾರಿಗಳ (Forest officials) ಅನುಮತಿಯಿಲ್ಲದೆ ನಾಶ ಮಾಡಲಾಗುತ್ತಿದೆ.
ಇಲ್ಲಿ ಏನಾದರೂ ನಿರ್ಮಾಣ ಕಾರ್ಯ (Construction work) ನಡೆಸಬೇಕಿದ್ದರೆ ಮೊದಲು ಅನುಮತಿಯನ್ನು ಪಡೆಯಬೇಕಿತ್ತು ಎಂದು ಪೀಠವು ಹೇಳಿದೆ.ಈ ಅರಣ್ಯದೊಳಗೆ ಇದ್ದ ಪ್ರಾಣಿಗಳು ಆಶ್ರಯಕ್ಕಾಗಿ ಓಡಾಡುತ್ತಿವೆ. ಬೀದಿ ನಾಯಿಗಳಿಂದ ಕಚ್ಚಲ್ಪಡುತ್ತಿವೆ ಎಂದು ನ್ಯಾಯಾಧೀಶರು ವಿಡಿಯೊ ಸಹಿತ ಪ್ರಸ್ತುತಪಡಿಸಿ, ತೊಂದರೆಗೊಳಗಾದ ಪ್ರಾಣಿಗಳ (Animals) ಪರವಾಗಿ ವಾದ ಮಂಡಿಸಿದರು.

ರಾಜ್ಯದ ವನ್ಯಜೀವಿ ವಿಭಾಗಗಳಿಗೆ (Wildlife sections) ಪ್ರಾಣಿಗಳನ್ನು ರಕ್ಷಿಸುವಂತೆ ಆದೇಶಿಸಿದ ನ್ಯಾಯಾಲಯ ಈ ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳುವಂತೆ ಸೂಚಿಸಿತು.
ನಾಶವಾದ ಅರಣ್ಯ ಪ್ರದೇಶದಲ್ಲಿ ಸ್ಥಾಪನೆಯಾಗುವ ಕಟ್ಟಡ ಯೋಜನೆಯನ್ನು (Building plan) ಶೀಘ್ರದಲ್ಲಿ ಮಂಡಿಸದೇ ಇದ್ದರೆ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಕೆಳಗಿನ ಹಂತದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ (Supreme Court) ಈ ಸಂದರ್ಭದಲ್ಲಿ ಎಚ್ಚರಿಕೆಯನ್ನು ನೀಡಿದೆ.
ಈ ಪ್ರಕರಣದ ಮುಂದಿನ ವಿಚಾರಣೆ ಮೇ 15ರಂದು ನಡೆಯಲಿದೆ ಎಂದು ನ್ಯಾಯಾಧೀಶರು (Judge) ಈ ಸಂದರ್ಭದಲ್ಲಿ ತಿಳಿಸಿದರು.ಆ 100 ಎಕರೆಗಳನ್ನು ಹೇಗೆ ಪುನಃ ಸ್ಥಾಪಿಸುತ್ತೀರಿ ಎಂದು ತಿಳಿಸಿ. ಒಂದು ಯೋಜನೆಯನ್ನು ರೂಪಿಸಿ. ಇಲ್ಲದಿದ್ದರೆ ಎಷ್ಟು ಅಧಿಕಾರಿಗಳು ತಾತ್ಕಾಲಿಕವಾಗಿ ಜೈಲಿಗೆ ಹೋಗುತ್ತಾರೆಂದು ನಮಗೆ ತಿಳಿದಿಲ್ಲ. ಮೂರು ದಿನಗಳ ರಜಾ ಸಂದರ್ಭದಲ್ಲಿ ಇದನ್ನು ಮಾಡುವ ತುರ್ತು ಪರಿಸ್ಥಿತಿ (Emergency situation) ಏನಿತ್ತು ಎಂದು ನ್ಯಾಯಮೂರ್ತಿ ಗವಾಯಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: http://ಇದು ಜಾತಿಗಣತಿಯಲ್ಲ ದ್ವೇಷಗಣತಿ : ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿ
ಏಪ್ರಿಲ್ 3ರಂದು 100 ಎಕರೆಗಳಲ್ಲಿನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಲು ನ್ಯಾಯಾಲಯ ಆದೇಶಿಸಿತ್ತು. ಅದನ್ನು ಮತ್ತೆ ಪುನರುಚ್ಚರಿಸಿದ ನ್ಯಾಯಾಧೀಶರು, ದೊಡ್ಡ ಪ್ರಮಾಣದಲ್ಲಿ ಮರ (Reestablish 100 acres of forest in Telangana) ಕಡಿಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು.