ಬೆಂಗಳೂರು, ಆ. 10: ಕರ್ನಾಟಕದ ಸುಮಾರು ಶೇ70% ರಷ್ಟು ವಿಧಾನ ಪರಿಷತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರು ಲೋಕಾಯುಕ್ತಕ್ಕೆ ಆಸ್ತಿವಿವರ ಸಲ್ಲಿಸದಿರುವುದರ ಬಗ್ಗೆ ವರದಿ ಲಭ್ಯವಾಗಿದೆ. ಲೋಕಾಯುಕ್ತವು ಜೂನ್ 30ರ ಒಳಗೆ ಆಸ್ತಿವಿವರ ಸಲ್ಲಿಸಲು ವಿಧಾನ ಪರಿಷತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರಿಗೆ ಸೂಚಿಸಿತ್ತು. ಆದರೆ 2 ಸದನಗಳಿಂದ ಸುಮಾರು 207 ಸದಸ್ಯರು ತಮ್ಮ ಆಸ್ತಿವಿವಿರಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ.
ವರದಿಯ ಪ್ರಕಾರ ಕರ್ನಾಟಕ 147 ವಿಧಾನ ಸಭಾ ಸದಸ್ಯರು ಹಾಗೂ 60 ವಿಧಾನ ಪರಿಷತ್ ಸದಸ್ಯರು ಅವರ ಆಸ್ತಿಯನ್ನು ಇದೂವರಗೂ ಬಹಿರಂಗ ಗೊಳಿಸಿಲ್ಲ ಇದರಲ್ಲಿ ಮುಖ್ಯವಾಗಿ ಬಿ.ಸಿ. ಪಾಟೀಲ್ , ಶ್ರೀರಾಮುಲು, ಎಂ.ಪಿ. ರೇಣುಕಾಚಾರ್ಯ, ದಿನೇಶ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ರಾಮಲಿಂಗ ರೆಡ್ಡಿ, ಅನಿತಾ ಕುಮಾರ ಸ್ವಾಮಿ, ಡಿ,ಕೆ ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ ಹಾಗೂ ಇನ್ನಿತರ ರಾಜಕಾರಣಿಗಳು ಅವರ ಆಸ್ತಿವಿವರಗಳನ್ನು ಸಲ್ಲಿಸಲಾಗಿಲ್ಲ ಎಂಬ ವರದಿ ಬಹಿರಂಗವಾಗಿದೆ. ವಿಧಾನ ಸಭಾ ಸದಸ್ಯರ ಪೈಕಿ 224 ಮಂದಿಯಲ್ಲಿ 147 ಶಾಸಕರು ತಮ್ಮ ಆಸ್ತಿಯ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ. ಜೊತೆಗೆ ವಿಧಾನ ಪರಿಷತ್ ಸದಸ್ಯರ ಪೈಕಿ 75 ಸದಸ್ಯರಲ್ಲಿ ಕೇವಲ 15 ಜನ ಮಾತ್ರ ಲೋಕಾಯುಕ್ತಕ್ಕೆ ಅವರ ಆಸ್ತಿ ವರದಿಯನ್ನು ಸಲ್ಲಿಸಿದ್ದಾರೆ.