ಕನ್ನಡ ಚಿತ್ರರಂಗ ಲಾಕ್ಡೌನ್ ಕಾರಣದಿಂದಾಗಿ ಸಂಪೂರ್ಣ ನಿಷ್ಕ್ರಿಯವಾಗಿದೆ. ಈ ಸಂದರ್ಭದಲ್ಲಿ ನಟ ಉಪೇಂದ್ರ ಸೇರಿದಂತೆ ಒಂದಿಷ್ಟು ಮಂದಿ ಕಲಾವಿದರು ಮತ್ತು ತಾರೆಯರ ಅಭಿಮಾನಿ ಸಂಘಗಳು ತಮ್ಮ ನೇತೃತ್ವದಲ್ಲಿ ದಿನಸಿ ವಿತರಿಸುವ ಕೆಲಸ ಮಾಡುತ್ತಿವೆ. ಆದರೆ ಚಿತ್ರರಂಗದವರಿಗೆ ಲಸಿಕೆಯ ಲಭ್ಯತೆ ಇನ್ನೂ ಆಗಿಲ್ಲ. ಹಾಗಾಗಿ ಆ ಬಗ್ಗೆ ಗಮನ ಹರಿಸುವಂತೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸಾ ರ ಗೋವಿಂದು ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ನೀಡಲಾಗಿದೆ.
ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ ಸಾ ರಾ ಗೋವಿಂದು ಅವರ ತಂಡದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯ ಉಪಾಧ್ಯಕ್ಷ ನಾಗಣ್ಣ, ಕೋಶಾಧಿಕಾರಿ ವೆಂಕಟೇಶ್, ಕೆ ಎಂ ವೀರೇಶ್ ಮೊದಲಾದವರು ಇದ್ದರು.