India : ನೀವು ತಪ್ಪು ರೀತಿಯ ಆಹಾರವನ್ನು ಸೇವಿಸಿದರೆ, ಅದು ನಿಮ್ಮನ್ನು ತಪ್ಪು ದಾರಿಗೆ ಕರೆದೊಯ್ಯುತ್ತದೆ.ಹೀಗಾಗಿ, ಹೆಚ್ಚು ಹಿಂಸೆಯನ್ನು ಒಳಗೊಂಡಿರುವ `ತಾಮಸಿಕ್’ ಆಹಾರವನ್ನು ಸೇವಿಸಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagawat) ಅವರು ಅಭಿಪ್ರಾಯಪಟ್ಟಿದ್ದಾರೆ(RSS Mohan Bhagawat Statement).

ಭಾರತ್ ವಿಕಾಸ್ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಪ್ಪು ರೀತಿಯ ಆಹಾರವನ್ನು ಸೇವಿಸಬಾರದು ಮತ್ತು ಅತಿಯಾದ ಹಿಂಸಾಚಾರವನ್ನು(Voilence) ಒಳಗೊಂಡಿರುವ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು.
ಇನ್ನು ವಿಶ್ವದ ಇತರೆಡೆಗಳಲ್ಲಿ ಇರುವಂತೆ ಮಾಂಸವನ್ನು ತಿನ್ನುವ ಜನರು ಭಾರತದಲ್ಲಿದ್ದಾರೆ.
ಇದನ್ನೂ ಓದಿ : https://vijayatimes.com/rbi-hiked-repo-rates/
ಆದರೆ ನಮ್ಮ ದೇಶದಲ್ಲಿ ಮಾಂಸಾಹಾರಿಗಳು ಸಹ ಸಂಯಮವನ್ನು ಅನುಸರಿಸುತ್ತಾರೆ ಮತ್ತು ಕೆಲವು ನಿಯಮಗಳನ್ನು ಅನುಸರಿಸುತ್ತಾರೆ.
ಇಲ್ಲಿ ಮಾಂಸಾಹಾರ ಸೇವಿಸುವ ಜನರು ಇಡೀ ಶ್ರಾವಣ ಮಾಸದಲ್ಲಿ ಮಾಂಸ ತಿನ್ನುವುದಿಲ್ಲ. ಸೋಮವಾರ, ಮಂಗಳವಾರ, ಗುರುವಾರ ಅಥವಾ ಶನಿವಾರದಂದು ಅವರು ಮಾಂಸ ತಿನ್ನುವುದಿಲ್ಲ ಎಂದರು(RSS Mohan Bhagawat Statement).

ಇನ್ನು ‘ಆಧ್ಯಾತ್ಮಿಕತೆ ಭಾರತದ ಆತ್ಮ’ ಎಂದ ಅವರು, ಭಾರತವು ಏನು ಮಾಡಬೇಕಾಗಿದೆ? ಈ ಆಧ್ಯಾತ್ಮಿಕತೆಯ ಆಧಾರದ ಮೇಲೆ ಜೀವನವನ್ನು ಹೇಗೆ ಬದುಕಬೇಕು? ಎಂಬುದನ್ನು ನಾವು ಶೋಧಿಸಬೇಕಿದೆ.
“ಅಹಂ ಇಲ್ಲದೆ ಜೀವನ ನಡೆಸುವುದು” ಭಾರತದ ಆತ್ಮ. ಹೀಗಾಗಿ ನಮ್ಮ ಆಧ್ಯಾತ್ಮಿಕತೆ ನಮ್ಮ ಬದುಕಿನ ಭಾಗವಾಗಬೇಕಿದೆ ಎಂದರು.
ಇದನ್ನೂ ಓದಿ : https://vijayatimes.com/chethan-ahimsa-reacts-to-pfi-ban/
ಇದೇ ವೇಳೆ ಶ್ರೀಲಂಕಾ(Sri Lanka) ಮತ್ತು ಮಾಲ್ಡೀವ್ಸ್(Maldives) ದೇಶಗಳು ಸಂಕಷ್ಟದಲ್ಲಿದ್ದಾಗ ಇತರ ದೇಶಗಳು ಸಹಾಯ ಮಾಡಲು ಹಿಂದೆ ಸರಿದಾಗ, ಸಹಾಯ ಮಾಡಿದ್ದು ಭಾರತ ಮಾತ್ರ.
ಚೀನಾ, ಯುನೈಟೆಡ್ ಸ್ಟೇಟ್ಸ್ ಮತ್ತು ಪಾಕಿಸ್ತಾನದಂತಹ ದೇಶಗಳು ಶ್ರೀಲಂಕಾದಲ್ಲಿ ವ್ಯಾಪಾರ ಅವಕಾಶಗಳನ್ನು ಕಂಡಾಗ ತಮ್ಮ ಗಮನವನ್ನು ಹರಿಸಿದವು.
ಆದರೆ ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿದಾಗ ಹಿಂದೆ ಸರಿದವು ಎಂದು ಟೀಕಿಸಿದರು.
- ಮಹೇಶ್.ಪಿ.ಎಚ್