• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಮಾಫಿಯಾಕ್ಕೆ ಬಲಿಯಾಯ್ತು ಬೀದರ್‌ ಮಕ್ಕಳ ಶಿಕ್ಷಣ ! ಗಣ್ಯ ವ್ಯಕ್ತಿಗಳ ಮರಳು ಮಾಫಿಯಾಕ್ಕೆ ಬೆಚ್ಚಿ ಬಿದ್ದಿದೆ ಔರಾದ್

Preetham Kumar P by Preetham Kumar P
in Vijaya Time
ಮಾಫಿಯಾಕ್ಕೆ ಬಲಿಯಾಯ್ತು ಬೀದರ್‌ ಮಕ್ಕಳ ಶಿಕ್ಷಣ ! ಗಣ್ಯ ವ್ಯಕ್ತಿಗಳ ಮರಳು ಮಾಫಿಯಾಕ್ಕೆ ಬೆಚ್ಚಿ ಬಿದ್ದಿದೆ ಔರಾದ್
0
SHARES
0
VIEWS
Share on FacebookShare on Twitter

ಬೀದರ್ ಸೆ 20 : ಜಿಲ್ಲೆಯ ಔರಾದ್‌ ಪಟ್ಟಣದ ಹೋರವಲಯದಲ್ಲಿ ಬರುವ ನರಸಿಂಗ್ ತಾಂಡದ ಬಳಿ ಎಲ್ಲಿ ಕಣ್ಣು ಹಾಯಿಸಿದ್ರೂ ಮರಳಿನ ರಾಶಿ. ಕೃಷಿ ಭೂಮಿ ತುಂಬಾ ಗುಡ್ಡದೆತ್ತರಕ್ಕೆ ಹಬ್ಬಿರೋ ಮರಳ ದಿಬ್ಬಗಳು. ಹೂಂಕರಿಸುತ್ತಾ, ಬೊಬ್ಬಿರಿಯುತ್ತಾ ಓಡಾಡೋ ರಕ್ಕಸ ಗಾತ್ರದ ಲಾರಿಗಳು ಸ್ಳಳೀಯರ ನಿದ್ದೆಗೆಡಿಸಿದೆ. ಇಲ್ಲಿನ ಅಕ್ರಮ ಮರಳುಗಾರಿಕೆಯ ದೃಶ್ಯಗಳು ಜನರನ್ನು ಬೆಚ್ಚಿ ಬೀಳಿಸುತ್ತೆ.

ಔರಾದ್‌ ಪಟ್ಟಣದಲ್ಲಿ ಅಕ್ರಮ ಮರಳುಗಾರಿಕೆಯ ಅಬ್ಬರ ಹೆಚ್ಚಿದೆ. ಈ ದಂಧೆಕೋರರು ತಾವು ಕಾನೂನು ಬಾಹಿರವಾಗಿ ತೆಗೆಯುವ ಮರಳನ್ನ ನರಸಿಂಗ್‌ ತಾಂಡದ ಬಳಿ ಇರುವ ಕೃಷಿ ಭೂಮಿಯಲ್ಲಿ ತಂದು ಅನಧಿಕೃತವಾಗಿ  ಸಂಗ್ರಹಿಸುತ್ತಿದ್ದಾರೆ. ಇಲ್ಲಿ ಸಂಗ್ರಹ ಮಾಡಿ ಮತ್ತೆ ಮಾರಾಟ ಮಾಡುತ್ತಿದ್ದಾರೆ.

ಪ್ರತಿನಿತ್ಯ ನೂರಾರು ಲೋಡ್‌ ಲಾರಿಗಳು ಗ್ರಾಮದ ರಸ್ತೆಯಲ್ಲಿ ಓಡಾಡುತ್ತಿರೋದ್ರಿಂದ ರಸ್ತೆಯೆಲ್ಲಾ ಸರ್ವನಾಶ ಆಗಿದೆ. ರಸ್ತೆ ತುಂಬಾ ಬರೀ ಹೊಂಡ ಗುಂಡಿಗಳಿಂದಲೇ ತುಂಬಿದೆ. ಗುಂಡಿಗಳಲ್ಲಿ ಲಾರಿ ಬಿಟ್ರೆ ಬೇರೆ ವಾಹನಗಳು ಓಡಾಡೋದೇ ಕಷ್ಟ ಸಾಧ್ಯ ಆಗಿದೆ. ಹಾಗಾಗಿ ಇಲ್ಲಿನ ಜನ ಈ ರಸ್ತೆಯಲ್ಲಿ ಓಡಾಡೋದಕ್ಕೆ ಭಯ ಬೀಳುತ್ತಿದ್ದಾರೆ.

ಇನ್ನೊಂದು ನೋವಿನ ಸಂಗತಿ ಅಂದ್ರೆ ಈ ರಸ್ತೆ ಅವ್ಯವಸ್ಥೆಯಿಂದ ತಾಂಡದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವೇ ಆಗುತ್ತಿಲ್ಲ. ಕೊರೋನಾದಿಂದ ಎರಡು ವರ್ಷ ಮಕ್ಕಳು ಶಾಲೆಗೇ ಹೋಗಲಿಲ್ಲ. ಈಗ ಶಾಲೆ ಪ್ರಾರಂಭ ಆಗಿದೆ ಆದ್ರೆ ಈ ರಸ್ತೆ ಹಾಳಾಗಿರುವುದರಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ

ರಸ್ತೆ ಸಂಪೂರ್ಣ ಹಾಳಾಗಿ ಹೋಗಿರುವುದರಿಂದ  ಹೆತ್ತವರು ತಮ್ಮ  ಖಾಸಗಿ ವಾಹನಗಳಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಡ್ರಾಪ್‌ ಮಾಡಲು ಭಯ ಬೀಳುತ್ತಿದ್ದಾರೆ. ಎಲ್ಲಿ ರಸ್ತೆ ಗುಂಡಿಗಳಿಂದ ರಸ್ತೆ ಅಪಘಾತವಾಗಿ ಮಕ್ಕಳು ಬಲಿಯಾಗ್ತಾರೋ ಅನ್ನೋ ಭಯ ತಂದೆ ತಾಯಿಯನ್ನು ಕಾಡುತ್ತಿದೆ. ಹಾಗಾಗಿ ತಾಂಡಾದ ಮಕ್ಕಳು‌ ಶಾಲಾ‌ ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದುರಂತ ಅಂದ್ರೆ ಈ ಅಕ್ರಮ ಮರಳುಗಾರಿಕೆ ದಂಧೆಯನ್ನು ಗ್ರಾಮದ ಪ್ರಭಾವಿಗಳೇ ಮಾಡುತ್ತಿದ್ದಾರೆ. ಹಾಗಾಗಿ ಪಂಚಾಯತ್‌ ಸದಸ್ಯರು ಇವರ ವಿರುದ್ಧ ಕ್ರಮಕೈಗೊಳ್ಳಲು ಭಯ ಬೀಳುತ್ತಿದ್ದಾರೆ. ಆದ್ರಿಂದ ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾದ  ಪ್ರಭು ಚವ್ಹಾಣ ಅವರು ಮಧ್ಯಪ್ರವೇಶಿಸಿ ಅಕ್ರಮದಾರರ ವಿರುದ್ಧ ಕ್ರಮ ಕೈಗೊಳ್ಳಲಿ. ಜಿಲ್ಲಾಧಿಕಾರಿಗಳು ಹಾಳಾದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ವಾಹನ ಗಳನ್ನು ಓಡಾಡಲು ಅನುಕೂಲ ಮಾಡಿ ಶಿಕ್ಷಣ ದಿಂದ ವಚಿತರಾದ ಮಕ್ಕಳಿಗೆ ಶಿಕ್ಷಣ ಕೊಡಲು ಮುಂದಾಗಬೇಕು ಅನ್ನೋದು ಸ್ಥಳೀಯರ ಕಳಕಳೀಯ ಮನವಿ

Tags: aurad mafiabidarKarnatakaSand Mining

Related News

ಹೆಬ್ಬಾಳದಲ್ಲಿ ಪಂಚರತ್ನಯಾತ್ರೆ: ರಾಜಧಾನಿಯಲ್ಲಿ ಮೊಳಗಲಿದೆ ಜೆಡಿಎಸ್‌ ರಣಕಹಳೆ
Vijaya Time

ಹೆಬ್ಬಾಳದಲ್ಲಿ ಪಂಚರತ್ನಯಾತ್ರೆ: ರಾಜಧಾನಿಯಲ್ಲಿ ಮೊಳಗಲಿದೆ ಜೆಡಿಎಸ್‌ ರಣಕಹಳೆ

March 21, 2023
ಎಂ.ಎಸ್‌ ಧೋನಿ ಅವರಿಗೆ ನಿಜವಾದ ವಯಸ್ಸು41. ಧೋನಿ ಅವರ ಬೈಸಿಪ್ ಕಂಡು ಫಿದಾ ಆದ ನೆಟ್ಟಿಗರು
Sports

ಎಂ.ಎಸ್‌ ಧೋನಿ ಅವರಿಗೆ ನಿಜವಾದ ವಯಸ್ಸು41. ಧೋನಿ ಅವರ ಬೈಸಿಪ್ ಕಂಡು ಫಿದಾ ಆದ ನೆಟ್ಟಿಗರು

March 17, 2023
ರೈಲಲ್ಲಿ ರಾತ್ರಿ ಪ್ರಯಾಣಿಸುತ್ತೀರಾ? ಹಾಗಾದ್ರೆ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ
Vijaya Time

ರೈಲಲ್ಲಿ ರಾತ್ರಿ ಪ್ರಯಾಣಿಸುತ್ತೀರಾ? ಹಾಗಾದ್ರೆ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ

March 11, 2023
ಈ ಮೊಬೈಲ್‌ಗೆ 100 ದಿನಗಳ ಬ್ಯಾಟರಿ ಚಾರ್ಜ್ ಮಾಡುವ ಅಗತ್ಯವೇ ಇಲ್ಲ: ಯಾವ ಮೊಬೈಲ್‌ ಗೊತ್ತಾ?
Vijaya Time

ಈ ಮೊಬೈಲ್‌ಗೆ 100 ದಿನಗಳ ಬ್ಯಾಟರಿ ಚಾರ್ಜ್ ಮಾಡುವ ಅಗತ್ಯವೇ ಇಲ್ಲ: ಯಾವ ಮೊಬೈಲ್‌ ಗೊತ್ತಾ?

March 11, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.