ಬಳ್ಳಾರಿ : ತೀವ್ರ ಕುತೂಹಲ ಕೆರಳಿಸಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ (Sandur Assembly Constituency) ಉಪಚುನಾವಣೆಯಲ್ಲಿ ಹಾಲಿ ಸಂಸದ (MP) ಹಾಗೂ ಮಾಜಿ ಶಾಸಕ (MLA) ತುಕಾರಾಂ ಕುಟುಂಬಕ್ಕೆ ಮತದಾರ ಮತ್ತೊಮ್ಮೆ ಜೈ ಎಂದಿದ್ದು, ತುಕಾರಾಂ ಅವರ ಪತ್ನಿ ಅನ್ನಪೂರ್ಣಾ ಅವರು ಭರ್ಜರಿ ಗೆಲುವು ದಾಖಲಿಸಿದ್ಧಾರೆ.
ಬಿಜೆಪಿಯ (BJP) ಬಂಗಾರು ಹನುಮಂತ ಅವರ ವಿರುದ್ದ 9000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಅನ್ನಪೂರ್ಣ ಅವರು ಗೆಲುವು ದಾಖಲಿಸುತ್ತಿದ್ದಂತೆ ಕಾಂಗ್ರೆಸ್ (Congress) ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ (Minister) ಸಂತೋಷ ಲಾಡ್ ಪರ ಜೈಕಾರ ಹಾಕಿದ್ದಾರೆ.

ಇನ್ನೊಂದೆಡೆ ಸೋಲೊಪ್ಪಿಕೊಂಡಿರುವ ಬಿಜೆಪಿಯ (BJP) ಬಂಗಾರು ಹನುಮಂತ, ಧರ್ಮದ ವಿರುದ್ಧ ಅಧರ್ಮ ಗೆದ್ದಿದೆ. ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ. 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾವು ಮತ್ತೆ ಹೋರಾಡುತ್ತೇವೆ. ಆದರೆ ಈ ಬಾರಿಯ ಚುಣಾವಣೆಯಲ್ಲಿ ಕಾಂಗ್ರೆಸ್ (Congress) ಹಣ ಬಲದಿಂದ ಗೆದ್ದಿದೆ. ಮತದಾನಕ್ಕೂ ಮುನ್ನ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ಹಾಕಿದೆ. ಇದು ಮತದಾರರ ಮೇಲೆ ಪ್ರಭಾವ ಬೀರಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.