• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಸ್ಯಾಂಟ್ರೋ ರವಿ ರಹಸ್ಯಲೀಲೆ ಕೆದಕಿದಷ್ಟು ಆಳ ಸೇರುತ್ತಿದೆ ; ಈ ಹೆಣ್ಣುಬಾಕನ ಜಾಲದಲ್ಲಿ ಸಿಲುಕಿದ ಮಾಡೆಲ್ ಗಳೆಷ್ಟು ಗೊತ್ತಾ?

Pankaja by Pankaja
in ಪ್ರಮುಖ ಸುದ್ದಿ
ಸ್ಯಾಂಟ್ರೋ ರವಿ ರಹಸ್ಯಲೀಲೆ ಕೆದಕಿದಷ್ಟು ಆಳ ಸೇರುತ್ತಿದೆ ; ಈ ಹೆಣ್ಣುಬಾಕನ ಜಾಲದಲ್ಲಿ ಸಿಲುಕಿದ ಮಾಡೆಲ್ ಗಳೆಷ್ಟು ಗೊತ್ತಾ?
0
SHARES
80
VIEWS
Share on FacebookShare on Twitter

Bengaluru : ರಾಜ್ಯದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ರಾಜಕೀಯ ದಲ್ಲಾಳಿ ಸ್ಯಾಂಟ್ರೋ ರವಿಯ (Santro Ravi investigation) ರಹಸ್ಯಲೀಲೆಗಳು ಬಗೆದಷ್ಟು ಮುಗಿಯುತ್ತಲೆ ಇಲ್ಲ.

ತನಿಖೆಗಿಳಿದಷ್ಟು ಕರಾಳ ಮುಖವಾಡ ಬಯಲಾಗುತ್ತಲೇ ಇವೆ. ಈತನ ರಾಸಲೀಲೆಯ ಬಣ್ಣಗಳು ಬಯಲಾಗುತ್ತಿದ್ದಂತೆ ದೊಡ್ಡ ದೊಡ್ಡ ರಾಜಕಾರಣಿಗಳ,

santro ravi

ಅಧಿಕಾರಿಗಳ ಎದೆಯಲ್ಲಿ ನಡುಕ ಪ್ರಾರಂಭ ಆಗಿದೆ. ಅಷ್ಟೇ ಅಲ್ಲ ಇವನ ಕುರಿತ ತನಿಖೆ ಚುರುಕಾಗುತ್ತಿದ್ದಂತೆ ಈತನ ರಂಗಿನಾಟ ಪುಟದಲ್ಲಿ ನಾನಾ ಮಾಡೆಲ್‌ಗಳ ಹೆಸರುಗಳು ಕಾಣಿಸಿಕೊಳ್ಳುತ್ತಿವೆ.

ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಸರ್ವಿಸ್ ಹಿಂದೆ ಅಡಗಿದೆ ದೊಡ್ಡ (Santro Ravi investigation) ದೊಡ್ಡ ಸೀಕ್ರೆಟ್.

ಕುಮಾರಕೃಪಾದ ಬಳಿ ಧೀರನಂತೆ ಓಡಾಡ್ತಿದ್ದವನ ದಗ್ಬಾಲಜಿತನ ಒಂದೊಂದಾಗಿ ಹೊರ ಬೀಳ್ತಿದ್ದು ಅದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡವನ ಕಥೆಯೇ ರಣ ರೋಚಕವಾಗಿದೆ. ಸ್ಯಾಂಟ್ರೋ ರವಿಯ ಪತ್ನಿ ದೂರು ನೀಡಿದ್ದೆ ತಡ, ಇವನ ಮತಿಗೇಡಿ ಕೆಲಸ ಒಂದೇ ಸಮ ಬಯಲಾಗುತ್ತಾ ಹೋಗುತ್ತಿದೆ.

ಇದನ್ನೂ ಓದಿ : https://vijayatimes.com/ajiths-film-overtook-warisu/

ಈತ ಮಾಡಿದ ಮೋಸ ಒಂದಾ ಎರಡಾ? ಪೊಲೀಸ್ ತನಿಖಾ ವರದಿಯಿಂದ (Police investigation report) ಒಂದಷ್ಟು ಸತ್ಯಗಳು ಹೊರಬೀಳುತ್ತಿದ್ದರೆ, ಮತ್ತೊಂದು ಕಡೆ ಈತನಿಗೆ ಮನೆ ಕೊಟ್ಟ ಮಾಲೀಕನಿಂದ ದೊಡ್ಡ ದೊಡ್ಡ ಬಾಂಬ್ಗ ಳೇ ಸಿಡಿಯುತ್ತಿದೆ.

ಸ್ಯಾಂಟ್ರೋ ರವಿ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆ ಇದ್ದ ಆ ಮನೆಗೆ ನಟಿಯರು, ಮಾಡೆಲ್, ಸರ್ಕಾರಿ ಅಧಿಕಾರಿಗಳು ಬರುತ್ತಿದ್ದ ಎಂದು ಮನೆ ಮಾಲೀಕ ಆರೋಪ ಮಾಡಿದ್ದಾರೆ.

ಅಷ್ಟೆ ಅಲ್ಲದೆ ಸ್ಯಾಂಟ್ರೋ ರವಿ ಆರ್.ಆರ್ ನಗರ ಪೊಲೀಸರ ಎದುರೇ ” ನಾನು ಬಿಜೆಪಿ(BJP) ಕಾರ್ಯಕರ್ತ, ಸರಿ ಸುಮಾರು 3-4 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಮಾಡುತ್ತಿದ್ದೇನೆ ” ಎಂದು ಹೇಳಿಕೊಂಡಿದ್ದನಂತೆ.

ರವಿ ಏನೆಲ್ಲಾ ಹೇಳಿದ್ದಾನೋ ಅವೆಲ್ಲವನ್ನೂ ಪೊಲೀಸರು ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ತನಿಖಾ ವರದಿ ತಿಳಿಸಿದೆ.

model

ಇದು ಒಂದು ಕಡೆ ಆದರೆ, ಇದೇ ರವಿ ವಿರುದ್ಧ ಆರ್.ಆರ್ ನಗರ ನಿವಾಸಿ ಜಗದೀಶ್ ಎಂಬಾತ 2022ರಲ್ಲಿ ದೂರು ನೀಡಿದ್ದು, ಈ ದೂರಿನ ಅಂಶಗಳು ಈಗ ದಂಗು ಬಡಿಸುವಂತ್ತಿವೆ.

2000ರಿಂದ 2005ರವರೆಗೆ ಮಂಡ್ಯ, ಮೈಸೂರಿನಲ್ಲಿ ವೃತ್ತಿ ಆರಂಭಿಸಿದ್ದ ಸ್ಯಾಂಟ್ರೋ ರವಿ, ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನ ಕಳುಹಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಈತನ ಅನೈತಿಕ ಚಟುವಟಿಕೆಗಳಿಂದ ಮುಖಂಡರ ಗೌರವಕ್ಕೆ ಧಕ್ಕೆ ತಂದಿದ್ದಲ್ಲದೇ, ಅಕ್ರಮ ದಂಧೆಗಳಿಂದ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾನೆ ಎಂದು ರವಿ ವಿರುದ್ಧ ಜಗದೀಶ್ ದೂರಿದ್ದಾರೆ.

ಇಷ್ಟೇ ಅಲ್ಲ ತನ್ನ ಪತ್ನಿ ವಕೀಲೆ ಎಂದು ಹೇಳಿಕಂಡು ಹಲವರಿಗೆ ವಂಚಿಸಿದ್ದಾನೆ. ಶೋಕಿಗಾಗಿ ಮೂರ್ನಾಲ್ಕು ಕಾರುಗಳನ್ನ ಇಟ್ಟುಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/santro-ravi-bjp-worker/


ಈ ಹೆಣ್ಣುಬಾಕ ರವಿಯ ಕಥೆಗಳು ಇಷ್ಟಕ್ಕೆ ನಿಂತಿಲ್ಲ ಬದಲಾಗಿ, ಪೊಲೀಸರ ವರ್ಗಾವಣೆಯಲ್ಲಿ ಭಾಗಿಯಾಗಿರೋದಕ್ಕೆ ಸಾಕಷ್ಟು ಸಾಕ್ಷಿ ಸಿಕ್ಕಿವೆಯಂತೆ.

ಇದಕ್ಕೆಲ್ಲ ಸಾಕ್ಷಿಯಾಗಿ ಆಡಿಯೋಗಳು ಇರುವುದ್ದಲ್ಲದೆ ಈತನೇ ಖುದ್ದಾಗಿ R.R. ನಗರದಲ್ಲಿ ಈ ಬಗ್ಗೆ ಬಾಯ್ಬಿಟ್ಟಿದ್ದಾನಂತೆ. ಸ್ಯಾಂಟ್ರೋ ರವಿ ನಾಪತ್ತೆಯಾಗಿ ಇವತ್ತಿಗೆ 9 ದಿನಗಳೇ ಕಳೆದಿವೆ.

ಆದರು ಸಹ ರವಿ ಎಲ್ಲಿದ್ದಾನೆ ಎಂಬುದು ಪೊಲೀಸ್ ಅಧಿಕಾರಿಗಳಿಗೆ ಇನ್ನೂ ಪತ್ತೆಗೆ ಸಿಕ್ಕಿಲ್ಲ. ಈ ನಡುವೆ ಸ್ಯಾಂಟ್ರೋ ರವಿಗೆ ಅನಾರೋಗ್ಯ ಕಾಡುತ್ತಿದೆ, ಮತ್ತೊಂದು ಕಡೆ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಮೈಸೂರಿಗೆ ಹೋಗಿ ಬಂದಾಗಿನಿಂದ ರವಿಗೆ ಎನ್ಕೌಂಟರ್ ಭಯ ಕಾಡುತ್ತಿದೆಯಂತೆ.

ಈ ಎಲ್ಲ ಹಿನ್ನೆಲೆಯಿಂದಾಗಿ ನ್ಯಾಯಾಲಯದ ಮೂಲಕ ಸ್ಯಾಂಟ್ರೋ ರವಿ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  • ಪಂಕಜಾ.ಎಸ್
Tags: bengaluruPolice Casesantro ravi

Related News

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 29, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 28, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.