ಕೊಡಗು, ಡಿ. 04: ಕೊರೊನಾ ಹಿನ್ನೆಲೆಯಲ್ಲಿ ಕುಶಾಲನಗರ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ಸರಳ, ಸಂಪ್ರಾದಾಯಿಕವಾಗಿ ಜರುಗಿತು.
ಕೋವಿಡ್ ಮಾರ್ಗಸೂಚಿ ಅನ್ವಯ ಜನಜಂಗುಳಿ ಇಲ್ಲದೆ ಸರಳವಾಗಿ ರಥೋತ್ಸವ ನಡೆಸಲಾಯಿತು. ಮಧ್ಯಾಹ್ನದ ಬದಲಾಗಿ ಬೆಳಗ್ಗೆ 8.30ಕ್ಕೆ ರಥೋತ್ಸವದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಭಾಗಿಯಾಗಿದ್ದರು.
ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುತ್ತಿದ್ದ ರಥೋತ್ಸವದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿತ್ತು. ಆದರೆ ಕೋವಿಡ್-೧೯ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರೆ, ಗೋಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ.