- ಯತ್ನಾಳ್ ಸವಾಲ್ ಸ್ವೀಕರಿಸಿದ ಶಿವಾನಂದ ಪಾಟೀಲ್
- ಶಾಸಕ ಸ್ಥಾನಕ್ಕೆ ರಾಜೀನಾಮೆ, ಸ್ಪರ್ಧೆಗೆ ಸಿದ್ದ ಎಂದ ಸಚಿವ
- ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ಗೆ ಪತ್ರ
Bengaluru: ರಾಜ್ಯ ರಾಜಕೀಯದಲ್ಲಿ (State politics) ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. (Shivanand Patil resigns as MLA) ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ (Minister Shivanand Patil) ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿಟ್ಟಿನಲ್ಲಿ ಸ್ಪೀಕರ್ ಯು.ಟಿ ಖಾದರ್ (U.T. Khader) ಅವರಿಗೆ ಪತ್ರ ರವಾನಿಸಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಅವರ ಸವಾಲನ್ನು ಸ್ವೀಕಾರ ಮಾಡಿ ತಮ್ಮ ಶಾಸಕ ಸ್ಥಾನಕ್ಕೆ (MLA position) ರಾಜೀನಾಮೆ ನೀಡಿ ಸ್ಪರ್ಧೆಗೆ ಸಿದ್ಧ ಎಂದಿದ್ದಾರೆ.
ವಿಜಯಪುರ ನಗರ ಶಾಸಕರಾದ ಶ್ರೀ ಬಸನಗೌಡ ಆರ್. ಪಾಟೀಲ ಯತ್ನಾಳ್ ರವರು ತಮ್ಮ ವಿಜಯಪುರ ಮತಕ್ಷೇತ್ರದ ಶಾಸಕ (MLA from Vijayapura constituency) ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ. ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ (Basavanabagewadi constituency) ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ.
ಹಾಗಾಗಿ ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ (Bagewadi Assembly Constituency) ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದುದರಿಂದ. ಶ್ರೀ ಬಸನಗೌಡ ಆರ್. ಪಾಟೀಲ್ ಯತ್ನಾಳ್ ರವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ (Submit your resignation) , ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ ಎಂದಿದ್ದಾರೆ. ಆದರೆ ಸಚಿವ ಶಿವಾನಂದ ಪಾಟೀಲ್ (Minister Shivanand Patil) ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಿದರೂ ಸ್ಪೀಕರ್ ಅದನ್ನು ಅಂಗೀಕಾರ ಮಾಡಿಲ್ಲ.

ಇನ್ನು ಶಿವಾನಂದ್ ಪಾಟೀಲ್ ಅವರಪ್ಪನಿಗೆ ಹುಟ್ಟಿದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ನನ್ನ ವಿರುದ್ಧ ಮಾಡಿದ ಹೋರಾಟದಲ್ಲಿ ಒಬ್ಬನಾದರೂ ಭಾರತ ಮಾತಾಕಿ ಜೈ ಎಂದರಾ (“Bharat Mataki Jai”) , ಪಾಕಿಸ್ತಾನ ಮುರ್ದಾಬಾದ್ (Murdabad) ಎಂದರಾ ಅಲ್ಲಿ ಸೇರಿದ್ದವರೆಲ್ಲ ಹಲಾಲ್ ಕೋರರು ಎಂದು ಯತ್ನಾಳ್ ಕಿಡಿಕಾರಿದ್ದರು.
ಇವರೆಲ್ಲರಿಗೂ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇನೆ (Teach a lesson in elections) ಎಂದು ಹೇಳಿದರು. ಹಿಂದೂ ಸನಾತನ ಧರ್ಮದ ವ್ಯಕ್ತಿಗೆ ಏನಾದರೂ ಆದಾಗ ನೀವು ಬರದಿದ್ದರೆ ನೀವು ಮುಸ್ಲಿಂಮರಿಗೆ ಹುಟ್ಟಿದಂಗೆ (Born to Muslims) , ಶಿವಾನಂದ ಪಾಟೀಲ್ ಹಾಗೂ ಕಾಶಪ್ಪನವರ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ದಿಸಿ ನಾನು ಭಾಗವಾ ಧ್ವಜ (Bhagava flag) ತೆಗೆದುಕೊಂಡು ಪಕ್ಷೇತರನಾಗಿ ಎರಡೂ ಕಡೆ ಆಯ್ಕೆಯಾಗುತ್ತೇನೆ ಎಂದು ಸವಾಲು ಹಾಕಿದರು, ಪಾಕ್ ಪರ ಮಾತನಾಡುವವರು (Pro-Pakistani speakers) ದೇಶದ್ರೋಹಿಗಳು,
ಇದನ್ನು ಓದಿ : http://ಜಮ್ಮು-ಕಾಶ್ಮೀರದಲ್ಲಿ ಉಗ್ರ ದಾಳಿಯ ಹೈ ಅಲರ್ಟ್: 48 ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ
ಪಾಕ್ ವಿರುದ್ಧ ಯುದ್ದ ನಡೆದರೆ ಸಚಿವ ಶಿವಾನಂದ ಪಾಟೀಲ್ ಕಾಶಪ್ಪನವರ ಯಶವಂತರಾಯಗೌಡ ಪಾಟೀಲ್ (Yashwant Rayagouda Patil) ಅಂತ ಹರಾಮಖೋರರು ಪಾಕ್ ಪರ ಮಾತನಾಡುತ್ತಾರೆ ಎಂದು ಹೇಳಿದ್ದರು. ಇದೀಗ ಯತ್ನಾಳ್ (Yatnal’s) ಮಾತನ್ನು ಸವಾಲಾಗಿ (Shivanand Patil resigns as MLA) ಸ್ವೀಕರಿಸಿ ಶಿವಾನಂದ ಪಾಟೀಲ ರಾಜಿನಾಮೆ ನೀಡಿದ್ದಾರೆ.