ಬೆಂಗಳೂರು, ಮಾ. 30: ತಮ್ಮ ಸರಳತೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಲವರ ಮನಗೆದ್ದಿರುವ ನಟ ಶಿವರಾಜ್ ಕುಮಾರ್, ಇದೀಗ ನೇತ್ರದಾನಕ್ಕೆ ಸಹಿ ಮಾಡುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ.
ಬೆಂಗಳೂರಿನ ನಾರಾಯಣ ಮಂಗಳವಾರ ‘ಅಕ್ಷಿ’ ಚಿತ್ರ ತಂಡದೊಂದಿಗೆ ನಡೆದ ನೇತ್ರದಾನ ಕುರಿತು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನೇತ್ರಾಲಯದಲ್ಲಿ ಮರಣಾ ನಂತರ ನೇತ್ರದಾನ ಮಾಡುವುದಕ್ಕೆ ಸಮ್ಮತಿ ಪತ್ರಕ್ಕೆ ಸಹಿ ಮಾಡಿದರು. ಆ ಮೂಲಕ ಅಪ್ಪನ ಹಾದಿಯಲ್ಲೇ ಹೆಜ್ಜೆ ಹಾಕಿದ್ದಾರೆ.
2016ರಲ್ಲಿ ವರನಟ ಡಾ. ರಾಜ್ ಕುಮಾರ್ ಮರಣದ ನಂತರ ಅವರ ಕಣ್ಣುಗಳನ್ನು ಇದೇ ಆಸ್ಪತ್ರೆಯಲ್ಲಿ ಮಾಡಲಾಗಿತ್ತು. ಅಲ್ಲದೇ 1994ರಲ್ಲಿ ಡಾ. ರಾಜ್ ಕುಮಾರ್ ಈ ನೇತ್ರ ಬ್ಯಾಂಕ್ ಅನ್ನು ಉದ್ಘಾಟಿಸಿದ್ದರು. ಇದೀಗ ಅದೇ ಡಾ.ರಾಜ್ ಕುಮಾರ್ ನೇತ್ರದಾನದ ಬ್ಯಾಂಕಿಗೆ ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ಶಿವರಾಜ್ ಕುಮಾರ್ ಹೇಳಿದ್ದಾರೆ.