- ಕೇಂದ್ರದ ತೆರಿಗೆ ನೀತಿಯ ವಿರುದ್ಧ ಬೇಸರ (siddaramaiah against centre’s tax policy) ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
- ಸೆಸ್–ಸರ್ಚಾರ್ಜ್ ಮಿತಿಗೊಳಿಸಿ ರಾಜ್ಯಗಳಿಗೆ ನ್ಯಾಯ ನೀಡುವಂತೆ ಕೇಂದ್ರಕ್ಕೆ ಮನವಿ
- ಮೂಲಸೌಕರ್ಯ, ಪರಿಸರ ಸಂರಕ್ಷಣೆ ಮತ್ತು ಸಮತೋಲನ ಅಭಿವೃದ್ಧಿಗೆ ಕೇಂದ್ರದ ನೆರವು ಅಗತ್ಯ
Bengaluru: ರಾಜ್ಯಗಳ ಹಣಕಾಸು ಹಂಚಿಕೆ ಕುರಿತಂತೆ ಕೇಂದ್ರ–ರಾಜ್ಯ (siddaramaiah against centre’s tax policy) ಸಂಬಂಧಗಳು ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿವೆ.
16ನೇ ಹಣಕಾಸು ಆಯೋಗದ ಮುಂದೆ ಕರ್ನಾಟಕ ಸರ್ಕಾರ ಮಂಡಿಸಿರುವ ಬೇಡಿಕೆಗಳು ರಾಜ್ಯದ ನ್ಯಾಯಯುತ ತೆರಿಗೆ ಪಾಲು, ಪ್ರಕೃತಿ ವಿಕೋಪ ಪರಿಹಾರ ಹಾಗೂ ವಿಶೇಷ ಅನುದಾನಗಳ ಸುತ್ತ ಹೆಣೆದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂವಿಧಾನಾತ್ಮಕ ತತ್ವಗಳಿಗೆ ಅನುಗುಣವಾಗಿ ಸಮಾನ ಹಂಚಿಕೆಯೇ ಸದೃಢ ಒಕ್ಕೂಟದ ಅಡಿಪಾಯ ಎಂದು ಒತ್ತಿ ಹೇಳಿದ್ದಾರೆ.

ಕೇಂದ್ರದಿಂದ ಸಂಗ್ರಹವಾಗುವ ತೆರಿಗೆಯಲ್ಲಿನ ರಾಜ್ಯಗಳ ಪಾಲು ಇಳಿಮುಖವಾಗುತ್ತಿರುವುದರಿಂದ (siddaramaiah against centre’s tax policy) ಅಭಿವೃದ್ಧಿ ಯೋಜನೆಗಳು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಮೂಲ ಸೌಕರ್ಯ ಹೂಡಿಕೆಗಳಿಗೆ ಅಡಚಣೆ ಉಂಟಾಗುತ್ತಿದೆ ಎಂಬುದು ಅವರ ಪ್ರಮುಖ ವಾದ.
ಈ ಹಿನ್ನೆಲೆಯಲ್ಲಿ ‘ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ’ ಎಂಬ ಅಭಿಯಾನವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಮುನ್ನಡೆಸುತ್ತಾ, ರಾಜ್ಯದ ಜನರಿಂದ ಬೆಂಬಲ ಕೋರಲಾಗಿದೆ.
ರಾಜ್ಯಗಳಿಗೆ ಹಂಚಿಕೆ ಮಾಡಲಾಗುವ ಕೇಂದ್ರದ ತೆರಿಗೆ ಪಾಲನ್ನು ಶೇ.41ರಿಂದ ಶೇ.50ಕ್ಕೆ ಏರಿಸಬೇಕೆಂಬುದು ಸರ್ಕಾರದ ಪ್ರಮುಖ ಬೇಡಿಕೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದರು ಎಂಬುದನ್ನು ಸಿದ್ದರಾಮಯ್ಯ ನೆನಪಿಸಿದ್ದಾರೆ.
ಜೊತೆಗೆ ಸೆಸ್ ಮತ್ತು ಸರ್ಚಾರ್ಜ್ಗಳ ಮೂಲಕ ಕೇಂದ್ರದ ಆದಾಯ ಹೆಚ್ಚಾಗುತ್ತಿದರೂ, ಆ ಮೊತ್ತ ರಾಜ್ಯಗಳಿಗೆ ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.
ಸೆಸ್ ಮತ್ತು ಸರ್ಚಾರ್ಜ್ಗಳನ್ನು ಕೇಂದ್ರದ ಒಟ್ಟು ಆದಾಯದ ಶೇ.5ಕ್ಕೆ ಮಾತ್ರ ಸೀಮಿತಗೊಳಿಸಿ, ಉಳಿದ ಮೊತ್ತವನ್ನು ರಾಜ್ಯಗಳಿಗೆ ಹಂಚಬೇಕೆಂಬುದು ಕರ್ನಾಟಕದ ಆಗ್ರಹ.
ಇದರಿಂದ ಹಣಕಾಸು ಸ್ವಾಯತ್ತತೆ ಬಲಗೊಳ್ಳುವುದರ ಜೊತೆಗೆ ರಾಜ್ಯಗಳ ಅಭಿವೃದ್ಧಿ ವೇಗ ಪಡೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
15ನೇ ಹಣಕಾಸು ಆಯೋಗದ ವರದಿಯಿಂದ ಕರ್ನಾಟಕಕ್ಕೆ ಸುಮಾರು 80 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂಬ ಅಂದಾಜನ್ನು ಸರ್ಕಾರ ಮುಂದಿಟ್ಟಿದೆ.
14ನೇ ಆಯೋಗದಲ್ಲಿ ಶೇ.4.71ರಷ್ಟು ತೆರಿಗೆ ಪಾಲು ದೊರೆತಿದ್ದರೆ, ನಂತರದ ಆಯೋಗದಲ್ಲಿ ತಲಾ ಆದಾಯ ಹೆಚ್ಚಿದೆ ಎಂಬ ಕಾರಣ ನೀಡಿ ಪಾಲು ಕಡಿತಗೊಳಿಸಲಾಯಿತು.
ತಲಾ ಆದಾಯ ಆರ್ಥಿಕತೆಯ ಒಂದು ಸೂಚಕ ಮಾತ್ರ; ಅದು ಸಮಗ್ರ ಅಭಿವೃದ್ಧಿಯ ಅಳತೆಯಾಗಲಾರದು ಎಂಬುದು ರಾಜ್ಯದ ವಾದ. ಕಲ್ಯಾಣ ಕರ್ನಾಟಕ ಸೇರಿ ಹಲವಾರು ಜಿಲ್ಲೆಗಳ ತಲಾ ಆದಾಯ ರಾಷ್ಟ್ರದ ಸರಾಸರಿಗಿಂತ ಕಡಿಮೆ ಇರುವುದನ್ನು 16ನೇ ಹಣಕಾಸು ಆಯೋಗದ ಗಮನಕ್ಕೆ ತರಲಾಗಿದೆ.
ಆದಾಯ ಅಂತರ (Income Distance) ಸೂತ್ರಕ್ಕೆ ನೀಡಿರುವ ಶೇ.45 ತೂಕವನ್ನು ಶೇ.25ಕ್ಕೆ ಇಳಿಸಬೇಕು ಎಂಬ ಬೇಡಿಕೆಯೂ ಇದೇ ಹಿನ್ನೆಲೆಯಲ್ಲಿ ಮುಂದಿಡಲಾಗಿದೆ.
ಜನಸಂಖ್ಯಾ ನಿಯಂತ್ರಣ ಸಾಧಿಸಿದ ರಾಜ್ಯಗಳಿಗೆ ಪ್ರೋತ್ಸಾಹ ನೀಡುವ ಬದಲು 15ನೇ ಹಣಕಾಸು ಆಯೋಗದಲ್ಲಿ ದಂಡನೆಯಂತಾಗಿರುವ ವ್ಯವಸ್ಥೆ ಜಾರಿಯಾಯಿತು ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಇದನ್ನು ಸರಿಪಡಿಸಲು 1971ರ ಜನಸಂಖ್ಯೆಯನ್ನು ಮಾನದಂಡವನ್ನಾಗಿ ಪರಿಗಣಿಸಬೇಕು ಎಂದು ಸರ್ಕಾರ ಒತ್ತಾಯಿಸಿದೆ.
ಅಲ್ಲದೆ, 2018ರಿಂದ 2024ರವರೆಗೆ ಕರ್ನಾಟಕವು ಅತಿವೃಷ್ಟಿ, ಬರ, ಪ್ರವಾಹಗಳಂತಹ ಪ್ರಕೃತಿ ವಿಕೋಪಗಳಿಂದ ಸುಮಾರು 1.56 ಲಕ್ಷ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ.
ಆದ್ದರಿಂದ ರಾಜ್ಯಕ್ಕೆ ನೀಡಲಾಗಿರುವ ಕೇವಲ 5 ರಿಸ್ಕ್ ಫ್ಯಾಕ್ಟರ್ ಅಂಕವನ್ನು 15ಕ್ಕೆ ಹೆಚ್ಚಿಸಬೇಕು ಎಂದು ಕೋರಲಾಗಿದೆ.
ವಿಕೇಂದ್ರೀಕರಣದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳನ್ನು ಪ್ರೋತ್ಸಾಹಿಸಲು ಪಂಚಾಯತ್ ಅಧಿಕಾರ ಹಂಚಿಕೆ ಸೂಚ್ಯಂಕವನ್ನು ಮಾನದಂಡಗಳೊಳಗೆ ಸೇರಿಸುವ ಸಲಹೆಯೂ ನೀಡಲಾಗಿದೆ.
ಪ್ರಾದೇಶಿಕ ಅಸಮತೋಲನ ನಿವಾರಣೆಗೂ ಸರ್ಕಾರ ವಿಶೇಷ ಒತ್ತು ನೀಡಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ರಾಜ್ಯವು ಐದು ವರ್ಷಗಳಲ್ಲಿ 25 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಕೇಂದ್ರವೂ ಅದೇ ಪ್ರಮಾಣದ ಮ್ಯಾಚಿಂಗ್ ಗ್ರ್ಯಾಂಟ್ (Matching Grant) ನೀಡಬೇಕು ಎಂಬ ಬೇಡಿಕೆ ಇದೆ.
ಜೊತೆಗೆ ಪರಿಸರ ಸಂರಕ್ಷಣೆ ಹಾಗೂ ವಿಪತ್ತು ನಿರ್ವಹಣೆಗೆ 10 ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಅಗತ್ಯವೆಂದು ಹೇಳಲಾಗಿದೆ.
ಮಲೆನಾಡು, ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಕೃಷಿಕರ ಸಂಕಷ್ಟ ನಿವಾರಣೆ, ಒಣಭೂಮಿ ಪ್ರದೇಶಗಳಿಗೆ ನೀರಾವರಿ ವ್ಯವಸ್ಥೆ ಹಾಗೂ ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಮುಂದಿನ ಐದು ವರ್ಷಗಳಲ್ಲಿ 1.15 ಲಕ್ಷ ಕೋಟಿ ರೂಪಾಯಿ ಹೂಡಿಕೆ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ 16ನೇ ಹಣಕಾಸು ಆಯೋಗವು ಕನಿಷ್ಠ 27,793 ಕೋಟಿ ರೂಪಾಯಿ ಅನುದಾನ ಶಿಫಾರಸು ಮಾಡಬೇಕು ಎಂಬುದು ಸರ್ಕಾರದ ನಿರೀಕ್ಷೆ. ಒಟ್ಟಾರೆ, ಈ ಬೇಡಿಕೆಗಳು ರಾಜ್ಯದ ಅಭಿವೃದ್ಧಿ ಮತ್ತು ಸಮಾನ ಹಂಚಿಕೆಯ ಮೂಲಕ ಒಕ್ಕೂಟವನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಚರ್ಚೆಗೆ ದಾರಿ ಮಾಡಿಕೊಡು