• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಮಕ್ಕಳಿಗೆ ಸತ್ಯ ಕಲಿಸಿ, ಐಡಿಯಾಲಜಿ ಅಲ್ಲ : ಎಸ್.ಎಲ್.ಭೈರಪ್ಪ!

Mohan Shetty by Mohan Shetty
in ರಾಜ್ಯ
SL Byrappa
0
SHARES
0
VIEWS
Share on FacebookShare on Twitter

ರಾಜ್ಯದಲ್ಲಾದ ಪಠ್ಯಪರಿಷ್ಕರಣೆ ಕುರಿತು ಕೆಲವರು ವಿವಾದ ಸೃಷ್ಟಿಸಿದ್ದಾರೆ. ಅನಗತ್ಯ ವಿವಾದಗಳಿಂದ ಸಹಜವಾಗಿಯೇ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ.

SL Byrappa

ಆದರೆ ಮಕ್ಕಳಿಗೆ ಸತ್ಯ ಕಲಿಸಬೇಕೆ ಹೊರತು, ಐಡಿಯಾಲಜಿ ಅಲ್ಲ ಎಂದು ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ(SL Byrappa) ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಮಕ್ಕಳಿಗೆ ಶಿಕ್ಷಣದಲ್ಲಿ ಸತ್ಯ ಹೇಳಬೇಕು ಎಂದಷ್ಟೇ ನಾನು ಹೇಳುತ್ತೇನೆ. ಆದರೆ ಈಗ ಪರಿಷ್ಕರಣೆ ಮಾಡಿರುವ ಪಠ್ಯವನ್ನು ವಾಪಸ್ ಪಡೆಯಬೇಕೋ..ಬೇಡವೋ ಎಂಬ ವಿಷಯದ ಬಗ್ಗೆ ನಾನು ಯಾವ ಸಲಹೆಯನ್ನು ನೀಡುವುದಿಲ್ಲ ಎಂದರು.

ಇದನ್ನೂ ಓದಿ : https://vijayatimes.com/multiple-cases-on-k-annamalai/

ಇನ್ನು ಶಿಕ್ಷಣ ಸಚಿವ(Education Minister) ಬಿ.ಸಿ.ನಾಗೇಶ್(BC Nagesh) ಅವರ ಮನೆ ಮೇಲೆ ದಾಳಿ ಮಾಡಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಬಲವಿದ್ದವರೆ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಹೀಗಾದರೆ ದೇಶದಲ್ಲಿ ಸಮಾನತೆ, ಏಕತೆ ಬರುವುದು ಯಾವಾಗ..? ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳುವುದು ಯಾವಾಗ..? ಎಂದು ಪ್ರಶ್ನಿಸಿದರು. ಇನ್ನು ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ‘ಪ್ರಶಸ್ತಿ ವಾಪಸ್’ ಚಳುವಳಿ ಪ್ರಾರಂಭಿಸಿದ್ದರು. ನಂತರ ಅದು ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.

education minister

ಆಗ ಪ್ರಶಸ್ತಿ ವಾಪಸ್ ನೀಡಿದವರು, ಪ್ರಶಸ್ತಿಯೊಂದಿಗೆ ಬಂದಿದ್ದ ಹಣವನ್ನು ವಾಪಸ್ ಮಾಡಬೇಕೆಂದು ಪ್ರತಿಪಾದಿಸಿದ್ದೆ. ಈಗ ಪಠ್ಯ ವಾಪಸ್ ಅದರ ರೂಪವಷ್ಟೇ ಎಂದರು. ಇನ್ನು ನಾನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಪಠ್ಯಪರಿಷ್ಕರಣೆಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಅವರು ಪಾರ್ಥಸಾರಥಿ ನೇತೃತ್ವದಲ್ಲಿ ರಚಿಸಿದ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದೆ. ಆಗ ಪಾರ್ಥಸಾರಥಿ ಅವರು “ನಮ್ಮ ಪಠ್ಯ ಕಲುಷಿತವಾಗಿದೆ. ಅದನ್ನು ಸ್ವಚ್ಚಗೊಳಿಸಬೇಕಿದೆ” ಎಂದು ಹೇಳಿದ್ದರು.

https://fb.watch/dpB2Y2KsfB/

ಹಾಗೆಂದರೇನು ಎಂದು ನಾನು ಕೇಳಿದ್ದೆ. “ಔರಂಗಜೇಬ್ ದೇಗುಲ ಕೆಡವಿದ, ಮಸೀದಿ ಕಟ್ಟಿಸಿದ ಎಂದೆಲ್ಲಾ ಪಠ್ಯದಲ್ಲಿದೆ. ಈ ರೀತಿಯ ಸಂಗತಿಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬುವುದು ಬೇಕಾ..?” ಎಂದಿದ್ದರು. ‘ಮಸೀದಿಯ ಮುಂದೆ ಬಸವಣ್ಣನ ಮೂರ್ತಿ ಮಸೀದಿ ನೋಡುತ್ತಾ ಕುಳಿತಿದ್ದರೆ, ಅಲ್ಲಿ ದೇವಾಲಯ ಇತ್ತು ಎಂದೇ ಅರ್ಥ’ ಎಂದು ಹೇಳಿದ್ದೆ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅದಾಗಿ 15 ದಿನಗಳಲ್ಲಿ ನನ್ನನ್ನು ಸಮಿತಿಯಿಂದ ಕೈಬಿಟ್ಟಿದ್ದರು ಎಂದು ತಿಳಿಸಿದರು.

Tags: KarnatakapoliticalSL ByrappasyllabusTectbook

Related News

ವಿಚ್ಛೇದನದ ಪ್ರಕ್ರಿಯೆ ಆರಂಭಿಸಿದ ನಂತರ ದಾಖಲಿಸಿದ ದೂರಿಗೆ ಯಾವುದೇ ಮಹತ್ವವಿಲ್ಲ: ಹೈಕೋರ್ಟ್
ರಾಜ್ಯ

ವಿಚ್ಛೇದನದ ಪ್ರಕ್ರಿಯೆ ಆರಂಭಿಸಿದ ನಂತರ ದಾಖಲಿಸಿದ ದೂರಿಗೆ ಯಾವುದೇ ಮಹತ್ವವಿಲ್ಲ: ಹೈಕೋರ್ಟ್

June 6, 2023
ಯಾವುದೇ ಸಮಯದಲ್ಲಿ ಬಿಬಿಎಂಪಿ ಚುನಾವಣೆ ಆಗಬಹುದು: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ರಾಜ್ಯ

ಯಾವುದೇ ಸಮಯದಲ್ಲಿ ಬಿಬಿಎಂಪಿ ಚುನಾವಣೆ ಆಗಬಹುದು: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

June 6, 2023
ಜಿರೋ ಟ್ರಾಫಿಕ್ ಬೇಡ ಅಂತಾ ಹೇಳಿ ; ಸದ್ದಿಲ್ಲದೇ ಸವಾರಿ ಮಾಡುತ್ತಿರುವ ಸಿದ್ದರಾಮಯ್ಯ
ರಾಜಕೀಯ

ಜಿರೋ ಟ್ರಾಫಿಕ್ ಬೇಡ ಅಂತಾ ಹೇಳಿ ; ಸದ್ದಿಲ್ಲದೇ ಸವಾರಿ ಮಾಡುತ್ತಿರುವ ಸಿದ್ದರಾಮಯ್ಯ

June 6, 2023
ರಾಜ್ಯ ಆಹಾರ ಇಲಾಖೆಯು ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸ್ವೀಕರಿಸಲಿದೆ
ರಾಜ್ಯ

ರಾಜ್ಯ ಆಹಾರ ಇಲಾಖೆಯು ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸ್ವೀಕರಿಸಲಿದೆ

June 6, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.