- ಕೊನೆಗೂ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್
- ಕನ್ನಡ ಚಲನಚಿತ್ರದಿಂದ ಸೋನು ನಿಗಮ್ ಬ್ಯಾನ್
- ನಿಷೇಧದ ಬಳಿಕವೂ ತೇಪೆ ಹಚ್ಚಲು ಪ್ರಯತ್ನ
Mumbai: ಬೆಂಗಳೂರಿನಲ್ಲಿ ಕನ್ನಡ ಹಾಡು (Kannada song) ಹಾಡಿ ಅಂದಿದ್ದಕ್ಕೆ ಇದಕ್ಕೆ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಾಗಿದ್ದು (Sonu Nigam apologize kannadigas) ಎಂದು ಹೇಳಿದ್ದ ಗಾಯಕ ಸೋನು ನಿಗಮ್ ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದಿದ್ದಾರೆ. ಸೋನು ನಿಗಮ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದರೂ ನಾನು ತಪ್ಪೇ ಮಾಡಿಲ್ಲ, ಕಾರ್ಯಕ್ರಮದಲ್ಲಿ ಕೆಲವರು ಕೆರಳಿಸಿದ್ದಕ್ಕೆ ಆ ರೀತಿ ಉತ್ತರ ಕೊಟ್ಟಿದ್ದೆ (Answered) ಎಂದು ತೇಪೆ ಹಾಕಲು ಪ್ರಯತ್ನಿಸಿದ್ದರು.
ಸೋನು ನಿಗಮ್ (Sonu Nigam) ಉದ್ಧಟತನದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸೋಮವಾರ ಕರ್ನಾಟಕ ಚಲನಚಿತ್ರ (Carnatic movie) ವಾಣಿಜ್ಯ ಮಂಡಳಿ ಸಭೆ ನಡೆಸಿ ಸೋನು ನಿಗಮ್ ಅವರನ್ನು ಕನ್ನಡ ಚಲನಚಿತ್ರದಿಂದ ಬ್ಯಾನ್ ಮಾಡಲು ನಿರ್ಧಾರ ಮಾಡಲಾಯಿತು. ಕರ್ನಾಟಕದಲ್ಲಿ ಕಾರ್ಯಕ್ರಮ (program in Karnataka) ಕೂಡ ನಡೆಸುವಂತಿಲ್ಲ ಎಂದು ತೀರ್ಮಾನಿಸಲಾಗಿತ್ತು.
ಇನ್ನು ನಿಷೇಧದ ಬಳಿಕ ಕೂಡ ಉದ್ದನೆ ಪೋಸ್ಟ್ (Post) ಹಾಕಿದ್ದ ಸೋನು ನಿಗಮ್ ತಾನು ತಪ್ಪೇ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ತಮ್ಮ ಪೋಸ್ಟ್ನಲ್ಲಿ “ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲದೆ ಜಗತ್ತಿನ ಬೇರೆಡೆಯೂ ಭಾಷೆ, ಸಂಸ್ಕೃತಿ, ಸಂಗೀತ, (culture, music,) ಸಂಗೀತಗಾರರು, ರಾಜ್ಯ ಮತ್ತು ಜನರಿಗೆ ಅಭೂತಪೂರ್ವ ಪ್ರೀತಿಯನ್ನು ನೀಡಿದ್ದೇನೆ.
ವಾಸ್ತವವಾಗಿ, ಹಿಂದಿ ಸೇರಿದಂತೆ (including Hindi) ಇತರ ಭಾಷೆಗಳ ಹಾಡುಗಳಿಗಿಂತ ನನ್ನ ಕನ್ನಡ ಹಾಡುಗಳನ್ನು (Kannada songs) ನಾನು ಹೆಚ್ಚು ಗೌರವಿಸಿದ್ದೇನೆ. ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಮಾಧ್ಯಮದಲ್ಲಿ 100 ಕ್ಕೂ ಹೆಚ್ಚು (More than 100) ವೀಡಿಯೊಗಳು ಪ್ರಸಾರವಾಗುತ್ತಿವೆ. ಕರ್ನಾಟಕದಲ್ಲಿ ಪ್ರತಿ ಸಂಗೀತ ಕಚೇರಿಗೆ ನಾನು ಸಿದ್ಧಪಡಿಸುವ ಕನ್ನಡ ಹಾಡುಗಳು ನನ್ನ ಬಳಿ ಇವೆ.

ಯಾರಿಂದಲೂ ಅವಮಾನವನ್ನು ಸಹಿಸಿಕೊಳ್ಳುವವನು ನಾನಲ್ಲ. ನನಗೆ 51 ವರ್ಷ, (51 Years) ನನ್ನ ಜೀವನದ ದ್ವಿತೀಯಾರ್ಧ ಮತ್ತು ನನ್ನ ಮಗನಂತಹ ಚಿಕ್ಕವನು ಭಾಷೆಯ ಹೆಸರಿನಲ್ಲಿ (Name of language) ಸಾವಿರಾರು ಜನರ ಮುಂದೆ ನೇರವಾಗಿ ನನ್ನನ್ನು ಬೆದರಿಸಿದ್ದಕ್ಕಾಗಿ (Bullying) ಕೋಪಗೊಳ್ಳುವ ಹಕ್ಕಿದೆ. ಇದು ನನ್ನ ಮೊದಲ ಹಾಡು ಮತ್ತು ನಾನು ಅವರನ್ನು ನಿರಾಸೆಗೊಳಿಸುವುದಿಲ್ಲ (Disappoint) ಎಂದು ಹೇಳಿದೆ, ಆದರೆ ನಾನು ಯೋಜಿಸಿದ ರೀತಿಯಲ್ಲಿ (Planned) ಅವರು ಸಂಗೀತ ಕಚೇರಿಯನ್ನು ಮುಂದುವರಿಸಲು ನನಗೆ ಅವಕಾಶ ನೀಡಬೇಕು.
ಪ್ರತಿಯೊಬ್ಬ ಕಲಾವಿದರು ಹಾಡಿನ ಪಟ್ಟಿಯನ್ನು ಸಿದ್ಧಪಡಿಸಿರುತ್ತಾರೆ ಆದ್ದರಿಂದ ಸಂಗೀತಗಾರರು ಮತ್ತು ತಂತ್ರಜ್ಞರು ಸಿಂಕ್ ಆಗಿರುತ್ತಾರೆ. ಆದರೆ ಅವರು ಗದ್ದಲ ಸೃಷ್ಟಿಸಲು ಮತ್ತು ನನ್ನನ್ನು ಹುಚ್ಚುಚ್ಚಾಗಿ ಬೆದರಿಸಲು ಹಠ ಹಿಡಿದಿದ್ದರು. ತಪ್ಪು ಯಾರದು ಎಂದು ಕೇಳಿದ್ದರು.ಕನ್ನಡ ಹಾಡು (Kannada song) ಕೇಳಿದ್ದಕ್ಕೆ ಆಮೇಲೆ ಹಾಡುತ್ತೇನೆ ಎನ್ನುವುದು ಸರಿ, ಅವರು ಗೂಂಡಾಗಳಂತೆ (Hooligans) ವರ್ತಿಸಿದ್ದರೆ ಅವರಿಗೆ ಬುದ್ದಿ ಹೇಳುವುದು ಸರಿ.
ಇದನ್ನು ಓದಿ : http://ಯತ್ನಾಳ್ ಸವಾಲ್ ಗೆ ಟಕ್ಕರ್ : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಾನಂದ ಪಾಟೀಲ್
ಆದರೆ ಕನ್ನಡ ಹಾಡು ಕೇಳಿದ್ದಕ್ಕೆ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಾಯಿತು (Terrorist attack) ಎಂದು ಹೇಳುವುದು ಯಾವ ಲಾಜಿಕ್ ಎಂದು ಜನ (Sonu Nigam apologize kannadigas) ಪ್ರಶ್ನಿಸಿದ ಬೆನ್ನಲ್ಲೇ ಸೋನು ನಿಗಮ್ ಕೊನೆಗೂ ಕ್ಷಮೆ ಕೇಳಿದ್ದಾರೆ. ಕ್ಷಮಿಸು ಕರ್ನಾಟಕ, ನಿಮ್ಮ ಮೇಲಿನ ಪ್ರೀತಿ, ನನ್ನ ಅಹಂಗಿಂತ ದೊಡ್ಡದು, ಯಾವಾಗಲೂ ಪ್ರೀತಿಸುತ್ತೇನೆ ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.