ಬನ್ನೇರುಘಟ್ಟಕ್ಕೆ 4 ಆಫ್ರಿಕನ್ (South Africa cheetahs in Bannerghatta Zoo) ಚೀತಾಗಳ ಎಂಟ್ರಿ
ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ
ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ವಿಶೇಷ ಕ್ರಮ:ಕ್ವಾರಂಟೈನ್ನಲ್ಲಿ ಕಟ್ಟು ನಿಟ್ಟಿನ ನಿಗಾ
Bengaluru: ಬೆಂಗಳೂರು ನಗರವು ಮತ್ತೊಮ್ಮೆ ವಿಶಿಷ್ಟ ಸುದ್ದಿಗೆ ಸಾಕ್ಷಿಯಾಗಿದ್ದು ದಕ್ಷಿಣ ಆಫ್ರಿಕಾದಿಂದ (South Africa cheetahs in Bannerghatta Zoo) ನಾಲ್ಕು ಚೀತಾಗಳು ನಗರಕ್ಕೆ ಆಗಮಿಸಿದ್ದು, ಪ್ರಕೃತಿ ಪ್ರೇಮಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಅಪಾರ ಕುತೂಹಲ ಹುಟ್ಟಿಸಿದೆ.
ಈ ಚೀತಾಗಳನ್ನು ನಗರದ ಪ್ರಸಿದ್ಧ ಬನ್ನೇರುಘಟ್ಟ ಪಾರ್ಕ್ ( Bannerghatta Biological Park)ಗೆ ತರಲಾಗಿದ್ದು, ಕರ್ನಾಟಕ ಅರಣ್ಯ ಇಲಾಖೆಯ ವಿಶೇಷ ಯೋಜನೆಯಡಿ ಈ
ಕಾರ್ಯಾಚರಣೆ ನಡೆದಿದೆ. ಎರಡು ಗಂಡು ಮತ್ತು ಎರಡು ಹೆಣ್ಣು ಚೀತಾಗಳನ್ನು ಸುರಕ್ಷಿತವಾಗಿ ತರಲಾಗಿದ್ದು, ಅವುಗಳ ಆರೈಕೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಿನ್ನೆ ಮಧ್ಯರಾತ್ರಿ ಈ ಚೀತಾಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ( Kempegowda International Airport)ಗೆ ಬಂದಿಳಿದವು. ತಡರಾತ್ರಿ ಆಗಿದ್ದರೂ,
ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar Khandre) ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವತಃ ಹಾಜರಾಗಿ ಅವುಗಳನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ವಿಮಾನದಿಂದ ಇಳಿದ ಕ್ಷಣದಿಂದಲೇ ಅವುಗಳನ್ನು ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳೊಂದಿಗೆ ಮೃಗಾಲಯದ ಕಡೆಗೆ ಸಾಗಿಸಲಾಯಿತು.
ಈ ಪ್ರಕ್ರಿಯೆ ಸಂಪೂರ್ಣವಾಗಿ ನಿಯಮಾನುಸಾರ ಹಾಗೂ ವೈದ್ಯಕೀಯ ಮಾರ್ಗಸೂಚಿಗಳ ಪ್ರಕಾರ ನಡೆದಿರುವುದು ಗಮನಾರ್ಹ.
ದೂರದ ದೇಶದಿಂದ ಬಂದಿರುವ ಪ್ರಾಣಿಗಳಿಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದು (South Africa cheetahs in Bannerghatta Zoo) ದೊಡ್ಡ ಸವಾಲಾಗಿರುತ್ತದೆ.
ಹವಾಮಾನ, ಆಹಾರ ಪದ್ಧತಿ, ನೀರಿನ ಗುಣಮಟ್ಟ ಮತ್ತು ವಾತಾವರಣದ ಬದಲಾವಣೆಗಳು ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಚೀತಾಗಳಿಗೆ ವಿಶೇಷ ಆರೈಕೆ ವ್ಯವಸ್ಥೆ ಕಲ್ಪಿಸಿದೆ.
ವೈದ್ಯಕೀಯ ತಂಡವು 24 ಗಂಟೆಗಳ ನಿಗಾದಲ್ಲಿ ಇಟ್ಟುಕೊಂಡು ಅವುಗಳ ಆರೋಗ್ಯವನ್ನು ಪರಿಶೀಲಿಸುತ್ತಿದ್ದು, ಯಾವುದೇ ತೊಂದರೆ ಉಂಟಾಗದಂತೆ ಗಮನ ಹರಿಸುತ್ತಿದೆ.
ಇನ್ನು, ನಿಯಮಾನುಸಾರ ಈ ಚೀತಾಗಳನ್ನು ತಕ್ಷಣವೇ ಸಾರ್ವಜನಿಕ ವೀಕ್ಷಣೆಗೆ ಬಿಡದೇ, 30 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತಿದೆ.
ಈ ಅವಧಿಯಲ್ಲಿ ಅವುಗಳನ್ನು ಪ್ರತ್ಯೇಕವಾಗಿ ಇರಿಸಿ, ಆಹಾರ ಪದ್ಧತಿ, ನಡೆ-ನುಡಿಗಳು ಹಾಗೂ ಆರೋಗ್ಯ ಸ್ಥಿತಿಯನ್ನು ನಿಖರವಾಗಿ ಗಮನಿಸಲಾಗುತ್ತದೆ.
ಹವಾಮಾನ ಬದಲಾವಣೆಯಿಂದ ಯಾವುದೇ ಒತ್ತಡ ಉಂಟಾಗದಂತೆ ವಿಶೇಷ ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳಿಗೆ ಸೂಕ್ತವಾದ ತಾಪಮಾನ ಹಾಗೂ
ವಾತಾವರಣವನ್ನು ಕಾಪಾಡಲಾಗುತ್ತಿದೆ. ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸಿ, ದಿನದ 24 ಗಂಟೆಗಳಲ್ಲೂ ನಿಗಾ ವಹಿಸುವ ವ್ಯವಸ್ಥೆಯೂ ಮಾಡಲಾಗಿದೆ.
ಈ ನಾಲ್ಕು ಚೀತಾಗಳ ಆಗಮನದಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ಹೊಸ ಆಕರ್ಷಣೆ ಸೇರ್ಪಡೆಯಾಗಿದೆ. ಕ್ವಾರಂಟೈನ್ ಅವಧಿ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಅವುಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಆದರೆ ಅದಕ್ಕೂ ಮೊದಲು ಅವುಗಳ ಆರೋಗ್ಯ ಮತ್ತು ಸುರಕ್ಷತೆ ಮುಖ್ಯ ಆದ್ಯತೆಯಾಗಿದ್ದು, ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ದಕ್ಷಿಣ ಆಫ್ರಿಕಾದಿಂದ ಬಂದ ಈ ಚೀತಾಗಳು ಈಗ ಬೆಂಗಳೂರಿನ ಹೊಸ ಅತಿಥಿಗಳಾಗಿ ಎಲ್ಲರ ಮನಸೆಳೆಯಲು ಸಿದ್ಧವಾಗಿವೆ.