- ಸೂಪರ್-8ನಲ್ಲಿ (South Africa defeat india) ಭಾರತಕ್ಕೆ ಸೋಲು
- ಭಾರತ 187 ರನ್ ಗುರಿಯನ್ನು ಬೆನ್ನತ್ತುವ ಪ್ರಯತ್ನದಲ್ಲಿ 111 ರನ್ ಗಳಿಗೇ ಆಲ್ ಔಟ್,ಅಭಿಮಾನಿಗಳಲ್ಲಿ ನಿರಾಸೆ
- ಮಿಲ್ಲರ್, ಬ್ರೇವಿಸ್ ಮತ್ತು ಸ್ಟಬ್ಸ್ ಭರ್ಜರಿ ಆಟದಿಂದ ಭಾರತದ ವಿರುದ್ಧ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ
ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ 2026ರ ಸೂಪರ್-8ರ (South Africa defeat india) ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಭಾರೀ ಸೋಲು ಅನುಭವಿಸಿತು.
187 ರನ್ ಗಳ ಗುರಿಯನ್ನು ಬೆನ್ನತ್ತಿದ ಭಾರತ ಕೇವಲ 111 ರನ್ ಗಳಿಗೇ ಆಲ್ ಔಟ್ (All Out) ಆಗಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು. ಈ ಸೋಲು ಭಾರತ ತಂಡಕ್ಕೆ ಮುಂದಿನ ಪಂದ್ಯಗಳಿಗಾಗಿ ಹೆಚ್ಚಿನ ಪ್ರಯತ್ನ ಅಗತ್ಯವಿದೆ ಎಂಬುದನ್ನು ಹೇಳಿದೆ.

ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಗಳನ್ನು ಕಲೆಹಾಕಿತು.
ಆರಂಭದಲ್ಲಿ ಭಾರತ 20 ರನ್ ಗಳಿಗೇ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಕ್ವಿಂಟನ್ ಡಿಕಾಕ್ (Quinton DeKock) (6), ಐಡೆನ್ ಮಾರ್ಕ್ರಮ್ (4), ರಯಾನ್ ರಿಕಲ್ಟನ್ (7) ಮುಂತಾದ ಆಟಗಾರರು ಬೇಗನೆ ಹೊರಗೊಂಡರು.
ಆದರೆ ಡೆವಾಲ್ಡ್ ಬ್ರೇವಿಸ್ (45), ಡೆವಿಡ್ ಮಿಲ್ಲರ್ (63) ಮತ್ತು ಟ್ರಿಸ್ಟನ್ ಸ್ಟಬ್ಸ್ (Tristan Stubbs) (44) ಉತ್ತಮ ಬ್ಯಾಟಿಂಗ್ (Batting) ನೀಡಿದರು.
ಈ ಮೂವರ ಬ್ಯಾಟಿಂಗ್ನಿಂದ ತಂಡ 180 ರನ್ ಮೊತ್ತವನ್ನು ದಾಖಲಿಸಿತು. ಭಾರತದ ಬೌಲಿಂಗ್ನಲ್ಲಿ ಭುಮ್ರಾ ಶ್ರೇಷ್ಠ ಪ್ರದರ್ಶನ ತೋರಿದರು.
4 ಓವರ್ ಗಳಲ್ಲಿ ಕೇವಲ (South Africa defeat india) 15 ರನ್ ನೀಡುತ್ತ, 3 ವಿಕೆಟ್ ಗಳನ್ನು ಪಡೆದುಕೊಂಡರು.
ಅರ್ಷದೀಪ್ ಸಿಂಗ್ 2 ವಿಕೆಟ್, ವರುಣ್ ಮತ್ತು ಶಿವಂ ದುಬೇ ಒಬ್ಬೊಬ್ಬ ವಿಕೆಟ್ ಗೆದ್ದರು. ಆದರೆ ಇತರ ಬೌಲರ್ ಗಳು ಹೆಚ್ಚು ರನ್ ನೀಡಿದ ಕಾರಣ ಭಾರತ ತೀವ್ರ ಒತ್ತಡದಲ್ಲಿ ಇರುವಂತಾಯಿತು .
ವಿಶೇಷವಾಗಿ ವರುಣ್ 4 ಓವರ್ ನಲ್ಲಿ 47 ರನ್ ನೀಡಿದ್ದು, ತಂಡಕ್ಕೆ ಸಮಸ್ಯೆ ತಂದಿತು. ಹಾರ್ದಿಕ್ ಪಾಂಡ್ಯ ಸಹ 4 ಓವರ್ ನಲ್ಲಿ 45 ರನ್ ನೀಡಿದ್ದಾರೆ.
ಬ್ಯಾಟಿಂಗ್ನಲ್ಲಿ ಭಾರತ ಸಂಪೂರ್ಣ ಮುಗ್ಗರಿಸಿತು. ಶಿವಂ ದುಬೇ 42 ರನ್ ಗಳಿಸಿದರೂ, ಇತರ ಬ್ಯಾಟರ್ ಗಳು ಕ್ರೀಸ್ನಲ್ಲಿ ಹೆಚ್ಚು ಕಾಲ ಇರಲಿಲ್ಲ ಸೂರ್ಯಕುಮಾರ್ ಯಾದವ್
18 ರನ್, ವಾಷಿಂಗ್ಟನ್ ಸುಂದರ್ 11 ರನ್, ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿದರೂ, ಉಳಿದ ಆಟಗಾರರು 1 ಅಥವಾ 0 ರನ್ ಗಳಿಗೆ ತಲುಪಿದರು.
ಕಿಶನ್, ಬುಮ್ರಾ, ಅರ್ಷದೀಪ್ ಮತ್ತು ತಿಲಕ್ ವರ್ಮಾ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು .ದಕ್ಷಿಣ ಆಫ್ರಿಕಾ ಪರ ಮಾರ್ಕೋ ಜಾನ್ಸೆನ್ (Marco Jansen) 4 ವಿಕೆಟ್,
ಕೇಶವ್ ಮಹರಾಜ್ 3 ವಿಕೆಟ್ ಗಳ ಮೂಲಕ ತಂಡದ ಗೆಲುವಿಗೆ ನೆರವು ನೀಡಿದರು.ಈ ಸೋಲು ಭಾರತ ತಂಡಕ್ಕೆ ದೊಡ್ಡ ಪಾಠವಾಗಿದೆ.
ಬ್ಯಾಟಿಂಗ್, ಬೌಲಿಂಗ್ (Bowling) ಮತ್ತು ಟೀಮ್ ತಂತ್ರದಲ್ಲಿ ಸುಧಾರಣೆ ಅಗತ್ಯವಿದೆ .ಮುಂದಿನ ಪಂದ್ಯಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಬೇಕಿದೆ.
ಟಿ-20 ವಿಶ್ವಕಪ್ 2026ನಲ್ಲಿ ಭಾರತ ಎದುರಿಸುವ ಮುಂದಿನ ಪಂದ್ಯಗಳು ಹೆಚ್ಚು ಕಠಿಣವಾಗಿವೆ ಮತ್ತು ಟೀಮ್ ಇನ್ನು ಹೆಚ್ಚು ಜಾಗರೂಕತೆ ತೋರಬೇಕಿದೆ.
ಇದನ್ನು ಓದಿ : https://vijayatimes.com/steel-barricade-in-metro-station/