ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರಿಗೆ (special discount in traffic fines) ಬಿಗ್ ರಿಲೀಫ್; ದಂಡದಲ್ಲಿ ಅರ್ಧ ರಿಯಾಯಿತಿ
ಬೆಂಗಳೂರಿನ ಪ್ರಮುಖ ಜಂಕ್ಷನ್ಗಳಲ್ಲಿ ಶೇ.50ರಷ್ಟು ಟ್ರಾಫಿಕ್ ದಂಡ ಪಾವತಿಗೆ ಅವಕಾಶ
ಜೂನ್ 21ರಿಂದ ಜುಲೈ 10ರವರೆಗೆ ಶೇಕಡಾ 50ರಷ್ಟು ವಿನಾಯಿತಿ, ವಾಹನ ಸವಾರರಿಗೆ ಅನುಕೂಲ
Bengaluru : ಸಂಚಾರ ನಿಯಮ ಉಲ್ಲಂಘನೆಯಿಂದ ಬಾಕಿ ಉಳಿದಿರುವ ಟ್ರಾಫಿಕ್ (Traffic) ದಂಡಗಳನ್ನು ಪಾವತಿಸಲು (special discount in traffic fines) ವಾಹನ ಸವಾರರಿಗೆ ರಾಜ್ಯ ಸರ್ಕಾರ ಮಹತ್ವದ ಅವಕಾಶವನ್ನು ಕಲ್ಪಿಸಿದೆ.
ಶೇಕಡಾ 50ರಷ್ಟು ರಿಯಾಯಿತಿಯೊಂದಿಗೆ ದಂಡ ಪಾವತಿಸುವ ಈ ವಿಶೇಷ ಯೋಜನೆ ಜೂನ್ 21ರಿಂದ ಜುಲೈ 10ರವರೆಗೆ ಜಾರಿಯಲ್ಲಿರಲಿದೆ. ಇದರ ಮೂಲಕ ಸಾವಿರಾರು
ವಾಹನ ಸವಾರರು ತಮ್ಮ ಬಾಕಿ ದಂಡಗಳನ್ನು ಕಡಿಮೆ ಮೊತ್ತದಲ್ಲಿ ಪಾವತಿಸಿ ಕಾನೂನುಬದ್ಧವಾಗಿ ದಾಖಲೆಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.

ವಾಹನ ಸವಾರರ ಅನುಕೂಲಕ್ಕಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಹಲವು ಮಾರ್ಗಗಳನ್ನು ಒದಗಿಸಿದ್ದಾರೆ. ಕರ್ನಾಟಕ ಸ್ಟೇಟ್ ಪೊಲೀಸ್ (KSP) ಆ್ಯಪ್,
ಬಿಟಿಪಿ ಅಸ್ತ್ರಂ ಆ್ಯಪ್ ಹಾಗೂ ಸಮೀಪದ ಸಂಚಾರ ಪೊಲೀಸ್ ಠಾಣೆಗಳಲ್ಲಿ ವಾಹನದ ನೋಂದಣಿ ಸಂಖ್ಯೆಯನ್ನು ನೀಡಿ ದಂಡ ಪಾವತಿಸಬಹುದು.
ಇದರಿಂದ ಸಾರ್ವಜನಿಕರು ದೀರ್ಘ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲದೆ ಸುಲಭವಾಗಿ (special discount in traffic fines) ತಮ್ಮ ಬಾಕಿ ದಂಡಗಳನ್ನು ತೆರವುಗೊಳಿಸಬಹುದು. ಇದರ ಜೊತೆಗೆ ಬೆಂಗಳೂರಿನ ಪ್ರಮುಖ ಜಂಕ್ಷನ್ಗಳಲ್ಲಿ ವಿಶೇಷ ಪಾವತಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ.
ಹೆಣ್ಣೂರು ರಸ್ತೆ, ದೇವಸಂದ್ರ ಜಂಕ್ಷನ್ (Devasandra Junction) , ಕುಂದಲಹಳ್ಳಿ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಸುಮ್ಮನಹಳ್ಳಿ ಜಂಕ್ಷನ್, ಬಿಎಚ್ಇಎಲ್ ಮೆಟ್ರೋ ಜಂಕ್ಷನ್,
ಜಾಲಹಳ್ಳಿ ಕ್ರಾಸ್, ಹೆಬ್ಬಾಳ ಜಂಕ್ಷನ್, ಸಾಗರ ಜಂಕ್ಷನ್, ಹೊಸೂರು ರಸ್ತೆ ಜಂಕ್ಷನ್ ಹಾಗೂ ಗೊಟ್ಟಿಗೆರೆ ಜಂಕ್ಷನ್ (Gottigere Junction) ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಈ
ವಿಶೇಷ ಕೌಂಟರ್ಗಳು (Counter) ಕಾರ್ಯನಿರ್ವಹಿಸಲಿವೆ. ಇದರಿಂದ ನಗರದ ವಿವಿಧ ಭಾಗಗಳ ನಾಗರಿಕರು ಸುಲಭವಾಗಿ ಸೇವೆಯನ್ನು ಪಡೆಯಬಹುದು.
ಅಧಿಕಾರಿಗಳ ಮಾಹಿತಿ ಪ್ರಕಾರ, ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್ ವೆಬ್ಸೈಟ್ (Website) ಹಾಗೂ ಕರ್ನಾಟಕ ಒನ್ (Karnataka One) ಕೇಂದ್ರಗಳಲ್ಲಿಯೂ
ದಂಡ ಪಾವತಿಸಲು ಅವಕಾಶ ನೀಡಲಾಗಿದೆ. ಡಿಜಿಟಲ್ (Digital) ಸೇವೆಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರು ಸಮಯವನ್ನು ಉಳಿಸಿಕೊಂಡು ಯಾವುದೇ ತೊಂದರೆ ಇಲ್ಲದೆ ಆನ್ಲೈನ್ (Online) ಮೂಲಕವೂ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಸಂಚಾರ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸರ್ಕಾರ ನೀಡಿರುವ ಈ ವಿಶೇಷ ರಿಯಾಯಿತಿ ದಂಡ ಪಾವತಿಸುವ ಅವಕಾಶ ಮಾತ್ರವಲ್ಲದೆ, ಸಂಚಾರ ಶಿಸ್ತು ಕಾಪಾಡುವ ಸಂದೇಶವನ್ನೂ ಸಾರುತ್ತಿದೆ.
ವಾಹನ ಸವಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬಾಕಿ ಉಳಿದಿರುವ ದಂಡಗಳನ್ನು ಪಾವತಿಸಿ ಕಾನೂನುಬದ್ಧ ದಾಖಲೆಗಳನ್ನು ನವೀಕರಿಸಿಕೊಳ್ಳುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನು ಓದಿ : https://vijayatimes.com/zero-admission-in-government-schools/