ಬೆಂಗಳೂರು, ಆ. 09: ಕೊರೊನಾ ನಡುವೆಯೂ ರಾಜ್ಯದಲ್ಲಿ ಯಶಸ್ವಿಯಾಗಿ ಎಸ್. ಎಸ್. ಎಲ್. ಸಿ ಪರೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ ಇದೀಗ ಫಲಿತಾಂಶ ಬಿಡುಗಡೆಗೆ ದಿನಾಂಕ ಪ್ರಕಟಗೊಳಿಸಿದೆ.
ಶೈಕ್ಷಣಿಕ ಹಂತದ ಪ್ರಮುಖ ಘಟ್ಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶಕ್ಕೆ ಕೊನೆಗೂ ಮೊಹೂರ್ತ ಫಿಕ್ಸ ಆಗಿದ್ದು,ಇಂದು ಮಧ್ಯಾಹ್ನ 3.30ಕ್ಕೆ ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ಎಸ್ ಎಸ್ ಎಲ್ ಸಿ ಬೋರ್ಡ ನಿರ್ದೇಶಕಿ ವಿ. ಸುಮಂಗಲ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು ಫಲಿತಾಂಶ ಹಿನ್ನಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಅವರಿಗೆ ಇಗಾಗಲೇ ಫಲಿತಾಂಶವನ್ನು ನೀಡಲಾಗಿದೆ. ಹಾಗೂ ಮುಖ್ಯಮಂತ್ರಿ ಬಸಾವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಲಾಗಿದ್ದು ಫಲಿತಾಂಶ ಬಿಡಿಗಡೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸುಮಾರು 1 ವರ್ಷದಿಂದ ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಿದ್ದ ಕಾರಣ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಕೇವಲ 2 ದಿನ ಮಾತ್ರ ನಡೆದು ಹೊಸ ಇತಿಹಾಸ ಕೂಡ ನಿರ್ಮಾಣವಾಗಿತ್ತು. ಜೊತೆಗೆ ಪರೀಕ್ಷೆ ಬರೆದ ಎಲ್ಲರನ್ನು ಕೂಡ ಉತ್ತೀರ್ಣ ಗೊಳಿಸುವುದಾಗಿ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಸ್ಪಷ್ಟ ಪಡಿಸಿದ್ದರು.ಹಾಗಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಬರೆದ ಎಲ್ಲರೂ ಕೂಡ ಪಾಸ್ ಆಗಿ ಇತಿಹಾಸ ನಿರ್ಮಿಸುವಂತಹ ಫಲಿತಾಂಶ ಇದಾಗಲಿದೆ. ಈ ಬಾರಿ ರಾಜ್ಯದಲ್ಲಿ ಸುಮಾರು 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಮರು ಮೌಲ್ಯ ಮಾಪನ ಮತ್ತು ಮರು ಪರೀಕ್ಷೆಗೆ ಅವಕಾಶ :
ಈ ಬಾರಿ ಪ್ರತಿ ವಿಷಯದ ಪರೀಕ್ಷೆಯು ಕೇವಲ 40 ಅಂಕಗಳಿಗೆ ನಡೆದ ಹಿನ್ನಲೆಯಲ್ಲಿ ಫಲಿತಾಂಶದಲ್ಲಿ ಯಾವುದೇ ಗೊಂದಲಗಳಿದ್ದರೂ ಮರು ಮೌಲ್ಯಮಾಪನಕ್ಕೆ ಅವಕಾಶವಿದೆ. ಜೊತೆಗೆ ಮರು ಪರೀಕ್ಷೆ ಬರೆಯಲು ಇಚ್ಚಿಸುವವರು ಕೂಡ ಮರು ಪರೀಕ್ಷೆಗೂ ಅಗತ್ಯ ದಾಖಲೆಗಳನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.
ಫಲಿತಾಂಶ ಈ ಕೆಳಗಿನ ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದೆ
www.sslc.karnataka.gov.in karresults.nic.in
www.kseeb.kar.nic.in
sslc.karnataka.gov.in