ವಿಶ್ವ ಪ್ರಸಿದ್ಧ ತಿರುಪತಿಯಲ್ಲಿ (Tirupati) ವೈಕುಂಠ ದ್ವಾರ ದರ್ಶನ (Vaikuntha Dwara Darshan) ಟಿಕೆಟ್ ಪಡೆಯುವ ವೇಳೆ ಭೀಕರ ಕಾಲ್ತುಳಿತ ಸಂಭವಿಸಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ.ಇನ್ನು ಕಾಲ್ತುಳಿತದಲ್ಲಿ 25 ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಜನವರಿ 10 ರಿಂದ ಆರಂಭವಾಗಲಿರುವ ವೈಕುಂಠ ದ್ವಾರ ದರ್ಶನಕ್ಕೆ ಸರ್ವದರ್ಶನ ಟಿಕೆಟ್ (Sarvadarshan ticket) ಪಡೆಯಲು ಸಾವಿರಾರು ಭಕ್ತರು (Thousands of devotees) ಏಕಾಏಕಿ ನುಗ್ಗಿದ ಕಾರಣ ಭಾರಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.

ಇನ್ನು ಕಾಲ್ತುಳಿತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ (Six people died) .ಇನ್ನು ಘಟನೆಯಲ್ಲಿ ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ.ಘಟನೆ ಬಳಿಕ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು (Chief Minister Chandrababu Naidu) ಟಿಟಿಡಿ (TTD) (ತಿರುಮಲ ತಿರುಪತಿ ದೇವಸ್ಥಾನ) ಅಧಿಕಾರಿಗಳ ಜೊತೆ ವರ್ಚುವಲ್ ಸಭೆ (Virtual meeting) ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.ಇನ್ನು ಹಿರಿಯ ಅಧಿಕಾರಿಗಳು (Senior officers) ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದ್ದಾರೆ.
ಇನ್ನು ಜನವರಿ 10 ರಿಂದ 19 ರವರೆಗೆ ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನ (Vaikuntha Dwara Darshan in Tirupati) ನಡೆಯಲಿದೆ.ದರ್ಶನದ ಟಿಕೆಟ್ ಪಡೆಯಲು 8 ಕಡೆ ಟಿಕೆಟ್ ಕೌಂಟರ್ (Ticket counter) ಗಳನ್ನೂ ತೆರಲಾಗಿತ್ತು.ಬುಧವಾರ ಸಂಜೆಯಿಂದಲೇ ಟಿಕೆಟ್ ಕೊಳ್ಳಲು ಮುಗಿಬಿದಿದ್ದ ಜನತೆ ನೂಕು ನುಗ್ಗಲು ಉಂಟಾಗಿ ಸಾವು ನೋವು ಸಂಭವಿಸಿದೆ.ಇನ್ನು ಘಟನೆ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು (CM Chandrababu Naidu) ಸಂತಾಪ ಸೂಚಿಸಿದ್ದಾರೆ. ಟಿಟಿಡಿ ಗಸ್ತು ಸಿಬ್ಬಂದಿ (TTD Patrol Staff) ಹಾಗೂ ಪೊಲೀಸರು (Police) ಕಾವಲಿನಲ್ಲಿದ್ದರು ಸಹ ಘಟನೆ ಸಂಭವಿಸಿದೆ.ಜನರನ್ನು ನಿಯಂತ್ರಿಸುವಲ್ಲಿ ಟಿಟಿಡಿ ಗಸ್ತು ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರಿಗೆ ಕಷ್ಟವಾದರಿಂದ ಘಟನೆ ಸಂಭವಿಸಿದೆ.2022 ರಲ್ಲೂ ಸಹ ಇದೇ ರೀತಿ ಸರ್ವದರ್ಶನದ ವೇಳೆ ಕಾಲ್ತುಳಿತ ಉಂಟಾಗಿದ್ದು ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.