Karnataka : ಸಿದ್ದರಾಮಯ್ಯ(Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ(Congress Government) ಬೇಡಿಕೆ ಇಲ್ಲದಿದ್ದರೂ ಕಲ್ಬುರ್ಗಿಯಲ್ಲಿ ಉರ್ದು ವಿಶ್ವವಿದ್ಯಾಲಯ ಸ್ಥಾಪನೆಗೆ ಹೊರಟಿತ್ತು. ಹಿಂದಿ ದಿವಸ್(Hindi Diwas) ಆಚರಣೆಯ ದಿನ ಮಾತ್ರ. ಸಿದ್ದರಾಮಯ್ಯ ಅವರಿಗೆ ಕನ್ನಡದ ನೆನಪಾಗುವುದೇ? ಎಂದು ರಾಜ್ಯ ಬಿಜೆಪಿ(State BJP) ಪ್ರಶ್ನಿಸಿದೆ.
ಈ ಕುರಿತು ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ, ನೆಹರೂ ಸರ್ಕಾರ ರಾಷ್ಟ್ರೀಯ ಹಿಂದಿ ದಿನಾಚರಣೆ ಜಾರಿಗೊಳಿಸಿದರೆ, ಮನಮೋಹನ್ ಸಿಂಗ್ ಸರ್ಕಾರ ವಿಶ್ವ ಹಿಂದಿ ದಿನಾಚರಣೆ ಜಾರಿಗೆ ತಂದಿತು. ಆದರೂ ಸಿದ್ದರಾಮಯ್ಯ ಅವರ ಅಸಹನೆ ಬಿಜೆಪಿ ವಿರುದ್ಧ ಮಾತ್ರವೇಕೆ?

ಮೋದಿ ಸರ್ಕಾರ ಕನ್ನಡದಲ್ಲೂ ರೈಲ್ವೇ ಟಿಕೆಟ್ ಮುದ್ರಿಸಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಮೋದಿ ಸರ್ಕಾರ ಕನ್ನಡದಲ್ಲೂ ರೈಲ್ವೇ ಪರೀಕ್ಷೆಗೆ ಅವಕಾಶ ಕಲ್ಪಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಎಂದು ಪ್ರಶ್ನಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಹಿಂದಿ ದಿನಾಚರಣೆಗೆ ವಿರೋಧ.
ವಿಪಕ್ಷ ಉಪನಾಯಕ ಯು.ಟಿ.ಖಾದರ್(UT Khadar) ಅವರಿಂದ ಹಿಂದಿ ದಿನಾಚರಣೆ ಪರವಾದ ವಾದ. ಏಕೆ ಈ ನಾಟಕ? ಅಧಿಕಾರದಲ್ಲಿದ್ದಾಗ ಕನ್ನಡ ಅಕ್ಷರ ಕಲಿಸುವ ಶಾಲೆಗಳನ್ನು ಮುಚ್ಚುವುದು, ಅಧಿಕಾರ ಇಲ್ಲದಿದ್ದಾಗ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ ಎಂದು ಟ್ವಿಟ್ಟರಿನಲ್ಲಿ ಕುಟ್ಟುವುದು.
ಇದನ್ನೂ ಓದಿ : https://vijayatimes.com/cricket-umpire-asad-rauf-passed-away/
ಇದು ಸಿದ್ದರಾಮಯ್ಯ ಅವರ ಸಾಧನೆ! ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ಉರ್ದು ಸಾಹಿತ್ಯಕ್ಕೆ ಆದ್ಯತೆ. `ಉರ್ದುರಾಮಯ್ಯʼ ಅವರೇ ನಿಮ್ಮ ಕನ್ನಡ ಪ್ರೇಮ ಆಗೆಲ್ಲಿತ್ತು? ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಪೊಲೀಸರನ್ನು ಉರ್ದು ಕಲಿಯಲು ಒತ್ತಾಯಿಸಿದ್ದರು.
ಇಂತಹ ದ್ವಂದ್ವವೇಕೆ ಉರ್ದುರಾಮಯ್ಯ? ಕಾಂಗ್ರೆಸ್ ಸರ್ಕಾರ ಹಿಂದಿ ದಿವಸ್ ಆಚರಣೆ ಜಾರಿಗೆ ತಂದರೆ, ಮೋದಿ ಸರ್ಕಾರ ಮಾತೃಭಾಷೆಗೂ ಆದ್ಯತೆ ನೀಡಿದೆ ಎಂದಿದೆ.