ಸಂವಿಧಾನ(Constitution), ಅಂಬೇಡ್ಕರ್(Dr BR Ambedkar) ಹಾಗೂ ರಾಷ್ಟ್ರ ಧ್ವಜವನ್ನು ತಮ್ಮ ಹಿಡನ್ ಅಜೆಂಡಾಕ್ಕೆ ರಕ್ಷಾ ಕವಚವಾಗಿ ಬಳಸಿಕೊಳ್ಳಲು ಪಿಎಫ್ಐ(PFI) ಉಗ್ರರು ಸಂಚು ನಡೆಸಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳನ್ನು ಬಳಸಿಕೊಂಡು ಸಮಾಜಘಾತುಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದಾರೆ.
ಇವರಿಗೆ `ಸಹಾಯ ಹಸ್ತ’ ಯಾರದ್ದು? ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಪರಿವರ್ತಿಸುವುದಕ್ಕಾಗಿ ಪಿಎಫ್ಐ ಉಗ್ರರು ಮೂರು ಹಂತದ ಯೋಜನೆ ರೂಪಿಸಿರುವುದು ಈಗ ಬಯಲಾಗಿದೆ.

ಗುಪ್ತ ಸಶಸ್ತ್ರ ಪಡೆ ರಚಿಸಿ ವಿರೋಧಿಗಳ ನಿರ್ನಾಮ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದು ಯಾರಿಗೆ? ಎಂದು ಬಿಜೆಪಿ(BJP) ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ದೇಶವನ್ನು ಛಿದ್ರಗೊಳಿಸಲು ಬಾಹ್ಯ ಶಕ್ತಿಗಳ ಆಹ್ವಾನಿಸುವುದಕ್ಕೂ ಪಿಎಫ್ಐ ದುಷ್ಟರು ಹೇಸುತ್ತಿಲ್ಲ.
ಪಿಎಫ್ಐ ಉಗ್ರರ ರಹಸ್ಯ ಕಾರ್ಯಸೂಚಿಯಲ್ಲಿ ಏನಿದೆಯೋ, ಅದೇ ನೆಲೆಯಲ್ಲಿ ಕಾಂಗ್ರೆಸ್(Congress) ಮಾತನಾಡುತ್ತಿದೆ. ಕಾಂಗ್ರೆಸ್ ಹಾಗೂ ಪಿಎಫ್ಐ ಆಳ-ಅಗಲದ ಬಗ್ಗೆ ಸಿದ್ದರಾಮಯ್ಯ(Siddaramaiah) ಹಾಗೂ ಡಿಕೆಶಿ(DKS) ಬಳಗಕ್ಕೆ ಸ್ಪಷ್ಟ ಮಾಹಿತಿ ಇರಬಹುದೇ? ಎಂದು ಪ್ರಶ್ನಿಸಿದೆ.
ಇದೇ ವೇಳೆ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಲೇವಡಿ ಮಾಡಿರುವ ಬಿಜೆಪಿ, ವಿರೋಧ ಪಕ್ಷದ ನಾಯಕರೇ, ನಾಳೆ ನಿಮ್ಮ ಪಟಾಲಂ ಮಾಡುವ ಸಿದ್ದರಾಮೋತ್ಸವ ನಂತರ ಇದೇ ಸ್ಥಿತಿ ಉದ್ಭವವಾಗುವ ಲಕ್ಷಣ ದಟ್ಟವಾಗಿದೆ.
ಚಂದಾ ಎತ್ತಿ 'ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ? ಸಿದ್ದರಾಮೋತ್ಸವದ ಆರಂಭಿಕ ಲಕ್ಷಣವೇ ಹೀಗಾದರೇ, ಅಂತ್ಯ ಹೇಗಿರಬಹುದು? ನೆರೆಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವ ಸಿದ್ದರಾಮಯ್ಯ ಅವರ ಮನಃಸ್ಥಿತಿಗೆ ಈ ಮಹಿಳೆ ಕಪಾಳಮೋಕ್ಷ ಮಾಡಿರುವುದು ಸಿದ್ದರಾಮಯ್ಯ ಅವರ ತುಷ್ಠೀಕರಣ ನೀತಿಗೆ ಸಿಕ್ಕ ಪ್ರತಿಫಲವಾಗಿದೆ.

ಹಣ ನೀಡಿ ಧರ್ಮ ಸಂಘರ್ಷ ಸೃಷ್ಟಿಸಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನ ವಿಫಲವಾಗಿದೆ. ಸಿದ್ದರಾಮಯ್ಯ ಅವರ ಅತಿ ತುಷ್ಠೀಕರಣ ನಡೆ ಮಹಿಳೆಗೂ ಬೇಸರ ತರಿಸಿದೆ. ಹಣ ನೀಡುವ ಮೂಲಕ ಸಮಾಧಾನ ಮಾಡಲು ಯತ್ನಿಸಿದ ಮಾಜಿ ಮುಖ್ಯಮಂತ್ರಿಗಳಿಗೆ “ನ್ಯಾಯ ಕೊಡಿಸಿ, ನಿಮ್ಮ ಹಣ ಬೇಡ” ಎಂದು ಮಹಿಳೆ ತಿರಸ್ಕರಿಸಿದ್ದಾರೆ. ಇದನ್ನು ನೋಡಿದಾಗ ಈ ತಿರಸ್ಕಾರದ ಭಾವನೆ ರಾಜ್ಯದ ಎಲ್ಲಾ ಜನರಲ್ಲಿ ಮೂಡಿಸಿದೆ ಎನ್ನುವುದು ಸ್ಪಷ್ಟವಾಗುತ್ತದೆ.