• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಎಷ್ಟೋ ನಟರು ಬರ್ತಾರೆ, ಹೋಗ್ತಾರೆ, ಸಿನಿಮಾ ರಂಗವೇ ಬೇರೆ ರಾಜಕೀಯ ರಂಗವೇ ಬೇರೆ : ಡಿಕೆಶಿ

Pankaja by Pankaja
in ರಾಜಕೀಯ, ರಾಜ್ಯ
ಎಷ್ಟೋ ನಟರು ಬರ್ತಾರೆ, ಹೋಗ್ತಾರೆ, ಸಿನಿಮಾ ರಂಗವೇ ಬೇರೆ ರಾಜಕೀಯ ರಂಗವೇ ಬೇರೆ : ಡಿಕೆಶಿ
0
SHARES
377
VIEWS
Share on FacebookShare on Twitter

Bengaluru : ಎಷ್ಟೋ ಸಿನಿಮಾ ತಾರೆಯರು ಬರುತ್ತಾರೆ, ಹೋಗ್ತಾರೆ! ಸಿನಿಮಾ ರಂಗವೇ ಬೇರೆ ರಾಜಕೀಯ (Politics) ರಂಗವೇ ಬೇರೆ! ಎರಡು ವೃತ್ತಿಯೂ ವಿಭಿನ್ನ ಎಂದು ಹೇಳುವ ಮೂಲಕ ನಟ ಕಿಚ್ಚ ಸುದೀಪ್ (Sudeep) ಅವರ ಬಿಜೆಪಿ (BJP) ಬೆಂಬಲಕ್ಕೆ ತಿರುಗೇಟು (Sudeep Vs DK Shivakumar) ನೀಡಿದ್ದಾರೆ.

Sudeep Vs DK Shivakumar

ಸದ್ಯ ನಡೆಯುತ್ತಿರುವ ಗೊಂದಲದ ಮಧ್ಯೆ ನಟ ಕಿಚ್ಚ ಸುದೀಪ್ ಅವರು ಪರಿಪೂರ್ಣವಾಗಿ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ! ಬಿಜೆಪಿ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆಯಲಿದ್ದಾರೆ ಎಂಬ ಉಹಾಪೋಹಗಳು ಹರಿದಾಡಿತು.

ಈ ಬಗ್ಗೆ ಖುದ್ದಾಗಿ ನಟ ಕಿಚ್ಚ ಸುದೀಪ್ ಅವರು ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರೊಡನೆ ಕುಳಿತು ಸ್ಪಷ್ಟನೆ ನೀಡಿದರು.

ನಾನು ಬಿಜೆಪಿ ಸೇರುವುದಿಲ್ಲ, ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಆದರೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳುವ ಮೂಲಕ ಪಕ್ಷಕ್ಕೆ ಸೇರ್ಪಡೆಯಾಗುವ ಗುಮಾನಿಗೆ ತೆರೆ ಎಳೆದಿದ್ದಾರೆ.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka assembly election) ಕಿಚ್ಚ ಸುದೀಪ್ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತಿರುವ

ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ (Congress) ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ (DK Sivakumar) ಅವರು,

ಇದನ್ನೂ ಓದಿ : https://vijayatimes.com/inauguration-of-shimoga-airport/

ಸಿನಿಮಾ ಮತ್ತು ರಾಜಕೀಯ ಎರಡು ವಿಭಿನ್ನ ವಿಷಯಗಳು. ಇದು ಚುನಾವಣೆಯ ಮೇಲೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರುವುದಿಲ್ಲ ಎಂದು ನಾನು ಭಾವಿಸುತ್ತೇನೆ,

ಹಲವಾರು ಚಲನಚಿತ್ರ ತಾರೆಯರು ಬರುತ್ತಾರೆ ಮತ್ತು ಹೋಗುತ್ತಾರೆ, ರಾಜಕೀಯವು ಚಲನಚಿತ್ರಗಳಿಗಿಂತ ಭಿನ್ನವಾಗಿದೆ ಎಂದು ಹೇಳುವ ಮೂಲಕ ನಟ ಕಿಚ್ಚ ಸುದೀಪ್ ಅವರಿಗೆ ಪರೋಕ್ಷವಾಗಿ (Sudeep Vs DK Shivakumar) ತಿರುಗೇಟು ನೀಡಿದ್ದಾರೆ.

ಕಿಚ್ಚ ಸುದೀಪ್ ಅವರು ಬಿಜೆಪಿ ಸೇರುವುದಿಲ್ಲ, ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅವರಿಗೆ ಬೆಂಬಲ ನೀಡುವುದಾಗಿ ಬುಧವಾರ ಹೇಳಿಕೊಂಡಿದ್ದಾರೆ. ಸಿಎಂ ಬೊಮ್ಮಾಯಿ ಅವರೊಂದಿಗೆ ವೈಯಕ್ತಿಕ ಬಾಂಧವ್ಯವನ್ನು ಹಂಚಿಕೊಂಡಿದ್ದೇನೆ ಎಂದು ಸುದೀಪ್ ಅವರು ಹೇಳಿದ್ದಾರೆ.

sudeep

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಟ ಕಿಚ್ಚ ಸುದೀಪ್ ಅವರು, ನಾನು ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ, ಯಾವುದೇ ವೇದಿಕೆ ಅಥವಾ

ಹಣಕ್ಕಾಗಿ ನಾನು ಇಲ್ಲಿಗೆ ಬಂದಿಲ್ಲ, ನಾನು ಇಲ್ಲಿಗೆ ಬಂದಿರುವುದು ಕೇವಲ ಒಬ್ಬ ವ್ಯಕ್ತಿಗಾಗಿ, ನನಗೆ ಸಿಎಂ ಮಾಮಾ (ಬಸವರಾಜ ಬೊಮ್ಮಾಯಿ) ಬಗ್ಗೆ ಹೆಚ್ಚಿನ ಗೌರವವಿದೆ.

ಬೊಮ್ಮಾಯಿ ಸರ್ ಅವರಿಗೆ ನನ್ನ ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ ಎಂದು ಅಧಿಕೃತವಾಗಿ ಘೋಷಿಸಿದರು.

ನಾನು ಸಂಪೂರ್ಣವಾಗಿ ಬೊಮ್ಮಾಯಿ ಸರ್ ಅವರ ಬೆಂಬಲಕ್ಕೆ ನಿಂತಿದ್ದೇನೆ.

ಆದರೆ, ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಮತ್ತು ರಾಜಕೀಯಕ್ಕೆ ಬರುವುದಿಲ್ಲ. ನನ್ನ ಬಳಿ ಸದ್ಯ ಸಾಕಷ್ಟು ಚಿತ್ರಗಳಿವೆ, ನನ್ನ ಅಭಿಮಾನಿಗಳು ಸಂತೋಷಪಡುತ್ತಾರೆ.

ಇದನ್ನೂ ಓದಿ : https://vijayatimes.com/dhruvanarayan-wife-dies/

ನಾನು ಅವರಿಗಾಗಿ ಸಿನಿಮಾಗಳು ಮಾಡಬೇಕು ಸರ್, ರಾಜಕೀಯಕ್ಕೆ ಸಮಯವಿಲ್ಲ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,

ಕನ್ನಡದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಅವರ ಅಭಿಯಾನವು ಕೇಸರಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ ಎಂದು ಹೇಳಿದರು.

ಕಿಚ್ಚ ಸುದೀಪ್ ಅವರು ಫೇಮಸ್ ಸೂಪರ್‌ಸ್ಟಾರ್ (Super star) ಆಗಿದ್ದು, ನಮ್ಮ ಪರ ಪ್ರಚಾರ ಮಾಡಲಿದ್ದಾರೆ, ಶೀಘ್ರದಲ್ಲೇ ಅವರ ಪ್ರಚಾರದ ನೀಲನಕ್ಷೆಯನ್ನು ನಾವು ಸಿದ್ಧಪಡಿಸುತ್ತೇವೆ.

ಅವರು ತುಂಬಾ ದೊಡ್ಡ ಸ್ಟಾರ್, ಅವರ ಜನಪ್ರಿಯತೆ ತುಂಬಾ ಹೆಚ್ಚಾಗಿದೆ ಮತ್ತು ಅವರ ಪ್ರಚಾರವು

ನಮಗೆ ಸಾಕಷ್ಟು ಶಕ್ತಿ ನೀಡುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

dk shivakumar

ಇದಾದ ಬಳಿಕ ಹಲವು ವಿಪಕ್ಷ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಟ, ರಾಜಕಾರಣಿ ಪ್ರಕಾಶ್ ರಾಜ್ (Prakash Raj) ಕೂಡ ನಟ ಕಿಚ್ಚ ಸುದೀಪ್ ಅವರ ಬಿಜೆಪಿ ಬೆಂಬಲವನ್ನು ಟೀಕಿಸಿ ಮಾತನಾಡಿದ್ದಾರೆ.

Tags: bjpCongressKarnatakapolitical

Related News

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌
Vijaya Time

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

May 29, 2023
ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ
Vijaya Time

ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ

May 29, 2023
ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌
Vijaya Time

ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌

May 29, 2023
ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ
Vijaya Time

ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ

May 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.