
ನಾಡಹಬ್ಬಕ್ಕೆ’ಶ್ರೀಕೃಷ್ಣ @gmail. Com’ ತೆರೆಗೆ
ವಿಭಿನ್ನ ಕಥೆ. ನಾನು ಮತ್ತು ಪ್ರೀತಂ ಗುಬ್ಬಿ ಚಿತ್ರಕಥೆ ಬರೆದಿದ್ದೇವೆ. ಕೃಷ್ಣ – ಭಾವನಾ ಮೆನನ್ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ಅವರು ತಾವೊಬ್ಬ ನಾಯಕ, ನಿರ್ದೇಶಕನಾಗಿದ್ದರೂ, ನಾವು ಕೇಳಿದ ತಕ್ಷಣ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಹಿರಿಯ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರ ಮರೆಯಲಾಗದು. ನಮ್ಮ ಚಿತ್ರ ವಿಜಯದಶಮಿಗೆ ನಿಮ್ಮ ಮುಂದೆ ಬರಲಿದೆ. ಸುಮಾರು ನೂರೈವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ , ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿರ್ದೇಶಕ ನಾಗಶೇಖರ್ ತಿಳಿಸಿದರು.