
ವಿಚಿತ್ರ ಘಟನೆ ; ಇಲಿಗಳ ಹಿಡಿತದಿಂದ 5 ಲಕ್ಷ ಮೌಲ್ಯದ ಚಿನ್ನ ವಶ!
ಇಲಿಗಳಿಂದ(Rats) 5 ಲಕ್ಷ ರೂಪಾಯಿ ಮೌಲ್ಯದ 10 ಟೋಲ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್(Sub Inspector) ಜಿ ಘಾರ್ಗೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲಿಗಳಿಂದ(Rats) 5 ಲಕ್ಷ ರೂಪಾಯಿ ಮೌಲ್ಯದ 10 ಟೋಲ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್(Sub Inspector) ಜಿ ಘಾರ್ಗೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮುಂಬೈನ(Mumbai) 20 ಸ್ಥಳಗಳಲ್ಲಿ ದರೋಡೆಕೋರ ದಾವೂದ್ ಇಬ್ರಾಹಿಂನ(Dawood Ibrahim) ಸಹಚರರ ಮೇಲೆ ಅನೇಕ ದಾಳಿ ನಡೆಸುತ್ತಿದೆ.
ಇದುವರೆಗೂ ಐಪಿಎಲ್ ಸೀಸನ್ನಲ್ಲಿ ಎಂಟು ತಂಡಗಳು ಒಟ್ಟು 60 ಪಂದ್ಯಗಳನ್ನ ಆಡುತ್ತಿದ್ದವು. ಆದರೆ ಈ ಸೀಸನ್ನಲ್ಲಿ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗಿರುವುದರಿಂದ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಮೇ 29ಕ್ಕೆ ನಡೆಯಲಿದೆ. ಈ ಮೊದಲು ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನ ಆಡುತ್ತಿದ್ದವು
ಕಂಪನಿಯು ಆರಂಭಿಕ ಪಬ್ಲಿಕ್ ಆಫರ್ (IPO) ಜೊತೆಗೆ ಹೊರಬರುವಾಗ ಅದನ್ನು ಪ್ರೈಮರಿ ಮಾರುಕಟ್ಟೆ ಎಂದು ಕರೆಯಲಾಗುತ್ತದೆ. IPO ಯ ಸಾಮಾನ್ಯ ಉದ್ದೇಶವೆಂದರೆ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಪಟ್ಟಿ ಮಾಡುವುದು. ಷೇರು ಪಟ್ಟಿ ಮಾಡಿದ ನಂತರ ಇದು ಸೆಕೆಂಡರಿ ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಅನ್ನು ಆರಂಭಿಸುತ್ತದೆ
ಆಮೇಲೆ ನಿಮಗೆ ಹೇಗೆ ಮೋಸ ಮಾಡ್ತಾರೆ ಅಂದರೆ, ನೀವು ಬಹುಮಾನ ಗೆದ್ದಿರುವ ಹಣ ಪಡೆಯೋಕೆ ನೀವು ತೆರಿಗೆ ಕಟ್ಟಬೇಕು ಅಂತ ಹೇಳಿ ಪುಸಲಾಯಿಸಿ ನಿಮ್ಮಿಂದ ಹಣ ವಸೂಲಿ ಮಾಡಲು ಪ್ರಾರಂಭಿಸ್ತಾರೆ. ಒಂದು ವೇಳೆ ನೀವು ಅನುಮಾನ ವ್ಯಕ್ತಪಡಿಸಿದ್ರೆ ನಿಮಗೆ ನಾನಾ ವಿಡಿಯೋ ಕಳುಹಿಸಿ ನಂಬಿಸ್ತಾರೆ. ನಿಮ್ಮಲ್ಲಿ ವಿಶ್ವಾಸ ಮೂಡಿಸಲು ಖದೀಮರ ತಮ್ಮ ನಕಲಿ ಕಚೇರಿಯ ವಿಡಿಯೋ ಕಳುಹಿಸ್ತಾರೆ
ಈ ಆಘಾತಕಾರಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಲಾಸವಾಡೆ ಗ್ರಾಮದಲ್ಲಿ ಕರ್ತವ್ಯ ನಿರತ ಮಹಿಳಾ ಅರಣ್ಯ ರಕ್ಷಕರಾಗಿರುವ ಸಿಂಧು ಸನಪ್ ಅವರನ್ನು ಅಮಾನುಷವಾಗಿ ಥಳಿಸಲಾಗಿದೆ. 24 ವರ್ಷದ ಸಿಂಧು ಸನಪ್ ಅವರು ಭ್ರಷ್ಟಾಚಾರಕ್ಕೆ ಮಣಿಯಲಿಲ್ಲ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ.
ಬೆಳಗ್ಗೆ 6ಗಂಟೆಗೂ ಮೊದಲು ಹೊರಡಬೇಕಿದ್ದ ದೇಶೀಯ ವಿಮಾನಗಳು ಮಾತ್ರ ಸರಿಯಾದ ಸಮಯಕ್ಕೆ ಟೇಕ್ ಆಫ್ ಆಗಿವೆ. ಅದರಲ್ಲಿ ಹೈದರಾಬಾದ್, ಗೋವಾ, ನಾಗ್ಪುರಕ್ಕೆ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ವಿಮಾನಗಳು, ಕೊಚ್ಚಿಗೆ ಹೋಗಬೇಕಿದ್ದ ಸ್ಪೈಸ್ಜೆಟ್ ಮತ್ತು ಕೋಲ್ಕತ್ತ, ಉದಯ್ಪುರಕ್ಕೆ ತೆರಳಬೇಕಿದ್ದ ಇಂಡಿಗೋಗಳಷ್ಟೇ ಸರಿಯಾದ ಸಮಯಕ್ಕೆ ಟೇಕ್ ಆಫ್ ಆಗಿದ್ದು ಬಿಟ್ಟರೆ, 6ಗಂಟೆ ನಂತರ ಇದ್ದ ಎಲ್ಲ ವಿಮಾನಗಳೂ ವಿಳಂಬವಾಗಿಯೇ ಹೊರಟಿವೆ. ಕೆಲವು 20-30 ನಿಮಿಷ ತಡವಾಗಿದ್ದರೆ, ಇನ್ನೂ ಕೆಲವು ವಿಮಾನಗಳು ಒಂದು ತಾಸುಗಳ ಕಾಲ ತಡವಾಗಿ ಹೊರಟಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ ಆರ್ಯನ್ ಖಾನ್ ಬಳಿ ಮಾದಕ ವಸ್ತು ಇರುವುದಕ್ಕೆ ಅಥವಾ ಆರ್ಯನ್ ಮಾದಕ ವಸ್ತು ಸೇವಿಸಿದ್ದರ ಬಗ್ಗೆ ದಾಖಲೆ ಇಲ್ಲ. ಆದಾಗ್ಯೂ, ಅವರನ್ನು ಬಂಧಿಸಿ, ವಿಚಾರಣೆ ಮಾಡಲಾಗಿದೆ. ಆದರೆ, ಕೇಂದ್ರ ಸಚಿವರ ಪುತ್ರ ಕಾರು ಚಲಾಯಿಸಿ, ನಾಲ್ವರು ರೈತರನ್ನು ಕೊಲೈಗೈದಿದ್ದಾನೆ ಮತ್ತು ಆದಾಗ್ಯೂ ಆತ ಆರಾಮಾಗಿ ಓಡಾಡಿಕೊಂಡಿದ್ದಾನೆ. ಯಾಕೆ ಆತನ ಬಂಧನ ಇನ್ನೂ ಆಗಿಲ್ಲ? ಯಾವುದೇ ಮಾಹಿತಿ ನೀಡದೆ, ಮೃತ ರೈತರ ಕುಟುಂಬದವರನ್ನು ಭೇಟಿಯಾಗಲು ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸುತ್ತೀರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟದಿಂದ ದೇಶ ನಡೆಯುತ್ತಿದೆ ಎಂದು ನಟಿ ರಮ್ಯಾ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.