• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಂಚಿಕೆ: ಕರ್ನಾಟಕ ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ 2ನೇ ಸ್ಥಾನ ಆದರೆ ನೀಡಿದ್ದು ಕೇವಲ ₹ 3705 ಕೋಟಿ ತೆರಿಗೆ ಪಾಲು!

Shwetha Mohan by Shwetha Mohan
in ಪ್ರಮುಖ ಸುದ್ದಿ, ಮಾಹಿತಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಂಚಿಕೆ: ಕರ್ನಾಟಕ ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ 2ನೇ ಸ್ಥಾನ ಆದರೆ ನೀಡಿದ್ದು ಕೇವಲ ₹ 3705 ಕೋಟಿ ತೆರಿಗೆ ಪಾಲು!
0
SHARES
21
VIEWS
Share on FacebookShare on Twitter
  • ಕರ್ನಾಟಕದಿಂದ ₹13,495 ಕೋಟಿ ಸಂಗ್ರಹಿಸಿ ನೀಡಿದ್ದು ಮಾತ್ರ ₹3,705 ಕೋಟಿ
  • ರಾಜ್ಯಕ್ಕೆ ಕೇಂದ್ರದಿಂದ ಕಡಿಮೆ ಮೊತ್ತದ ಹಣ ಬಿಡುಗಡೆ
  • ಕರ್ನಾಟಕ ರಾಜ್ಯಕ್ಕೆ ಯಾಕಿಷ್ಟು ತಾರತಮ್ಯ (Tax distribution from the central govt to the states)

New delhi: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ 1.01 ಲಕ್ಷ ಕೋಟಿ ರೂ. ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿರುವ ಹಿನ್ನೆಲೆ, ಕರ್ನಾಟಕಕ್ಕೆ ಕೇವಲ ₹3,705 ಕೋಟಿ ಹಂಚಿಕೆಯಾಗಿದ್ದು,

ಸಾರ್ವಜನಿಕ ಚರ್ಚೆ ಆರಂಭವಾಗಿದೆ. ‘ಕೇಂದ್ರ ಸರ್ಕಾರವು ರಾಜ್ಯಗಳಿಗೆ ತೆರಿಗೆ ಪಾಲನ್ನು ಸರಿಯಾಗಿ ಹಂಚುತ್ತಿಲ್ಲ. ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ’ ಎಂಬ ಆರೋಪಗಳು ಕೇಳಿ ಬರುತ್ತಿರುವ ಸಮಯದಲ್ಲಿಯೇ

ಈ ಹಂಚಿಕೆ ಬಿಡುಗಡೆ ಮಾಡಲಾಗಿದೆ.ಇನ್ನು ಈ ಸಲದ ಹಂಚಿಕೆಯ ಅಂಕಿಅಂಶಗಳನ್ನು ನೋಡಿದರೆ, ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದರೂ, ಹಂಚಿಕೆಯಲ್ಲಿ 15ನೇ ಸ್ಥಾನ ಪಡೆಯುವುದು ಗಮನಾರ್ಹ.

ಉಳಿದ ಪ್ರಮುಖ ರಾಜ್ಯಗಳು, ಜನಸಂಖ್ಯೆ ಕಡಿಮೆ ಇದ್ದರೂ, ಕೇಂದ್ರ ಹಂಚಿಕೆಯಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಪ್ರಮಾಣ ಪಡೆದಿರುವುದು ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ.

ಉದಾಹರಣೆಗೆ, ಉತ್ತರ ಪ್ರದೇಶಕ್ಕೆ ₹18,227 ಕೋಟಿ, ಬಿಹಾರಕ್ಕೆ ₹10,219 ಕೋಟಿ, ಮಧ್ಯಪ್ರದೇಶಕ್ಕೆ ₹7,976 ಕೋಟಿ, ಪಶ್ಚಿಮ ಬಂಗಾಳಕ್ಕೆ ₹7,644 ಕೋಟಿ, ಮಹಾರಾಷ್ಟ್ರಕ್ಕೆ ₹6,418 ಕೋಟಿ,

ರಾಜಸ್ಥಾನಕ್ಕೆ ₹6,123 ಕೋಟಿ, ಆಂಧ್ರಪ್ರದೇಶಕ್ಕೆ ₹4,112 ಕೋಟಿ, ಒಡಿಶಾಕ್ಕೆ ₹4,601 ಕೋಟಿ, ತಮಿಳುನಾಡಿಗೆ ₹4,144 ಕೋಟಿ, ಜಾರ್ಖಂಡ್‌ಗೆ ₹3,360 ಕೋಟಿ ಹಂಚಿಕೆ ಮಾಡಲಾಗಿದೆ.

Tax distribution from the central govt to the states
ಕರ್ನಾಟಕದ ಹಣಕಾಸು ಆಧಾರಿತ ಹಂಚಿಕೆ ಮತ್ತು ಅದರ ಹಕ್ಕುಗಳ ನಡುವೆ ಇರುವ ವ್ಯತ್ಯಾಸವನ್ನು ಗಮನಿಸಿದರೆ, ರಾಜ್ಯವು ಜಿಎಸ್‌ಟಿ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದ್ದು,

ಆದರೂ ಹಂಚಿಕೆಯ ದೃಷ್ಟಿಯಿಂದ 15ನೇ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರ ಹಂಚಿಕೆ ನಿರ್ಧಾರದಲ್ಲಿ ಜನಸಂಖ್ಯೆ, ಹಂಚಿಕೆಯ ಇತಿಹಾಸ, ರಾಜ್ಯದ ತೆರಿಗೆ ಸಂಗ್ರಹ ಸಾಮರ್ಥ್ಯ,

ಆರ್ಥಿಕ ಅವಶ್ಯಕತೆ ಎಲ್ಲ ಅಂಶಗಳನ್ನು ಪರಿಗಣಿಸುತ್ತದೆ. ಆದರೂ ಕರ್ನಾಟಕದ ಹಂಚಿಕೆಯ ಪ್ರಮಾಣವನ್ನು ಇತರ ಕೆಲ ಕಡಿಮೆ ಹಂಚಿಕೆ ಪಡೆದ ರಾಜ್ಯಗಳಿಗಿಂತ ಕಡಿಮೆ ನೀಡಿರುವುದು ತಾರತಮ್ಯವನ್ನು

ಉಂಟುಮಾಡಿದೆ. ಸೆಪ್ಟೆಂಬರ್ 2025 ತಿಂಗಳಲ್ಲಿ ದೇಶಾದ್ಯಾಂತ ಜಿಎಸ್‌ಟಿ ಸಂಗ್ರಹವು ₹1.89 ಲಕ್ಷ ಕೋಟಿ ತಲುಪಿದ್ದು, ಕಳೆದ ವರ್ಷದ ಸೆಪ್ಟೆಂಬರ್‌ಗೂ ಹೋಲಿಸಿದರೆ ಶೇಕಡಾ 9.1ರಷ್ಟು ಹೆಚ್ಚಾಗಿದೆ.

ಇದು ಮಾರಾಟದ ಏರಿಕೆಯಿಂದಾಗಿ, ಸರ್ಕಾರಗಳಿಗೆ ಆದಾಯವು ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ದೇಶದ ಒಟ್ಟು ಆರ್ಥಿಕ ಸ್ಥಿತಿ,

ಆಮದು ತೆರಿಗೆ ಶೇಕಡಾ 15.6ರಷ್ಟು ಏರಿಕೆಯೊಂದಿಗೆ ₹52,492 ಕೋಟಿ ಸಂಗ್ರಹವಾಗಿದೆ.

2025ರಲ್ಲಿ ಜಿಎಸ್‌ಟಿ ಸಂಗ್ರಹದ ಅಂಕಿಅಂಶಗಳನ್ನು ನೋಡಿದರೆ, ಕರ್ನಾಟಕವು ₹13,495 ಕೋಟಿ ಸಂಗ್ರಹಿಸಿತ್ತು, ಆದರೆ ಹೆಚ್ಚುವರಿ ಹಂಚಿಕೆಗೆ ಕೇವಲ ₹3,705 ಕೋಟಿ ಪಡೆದಿದೆ.

ಅದರ ವಿರುದ್ಧ, ಉತ್ತರ ಪ್ರದೇಶವು ₹8,967 ಕೋಟಿ ಜಿಎಸ್‌ಟಿ ಸಂಗ್ರಹಿಸಿದರೂ, ಹೆಚ್ಚಿನ ಪ್ರಮಾಣದಲ್ಲಿ ₹18,227 ಕೋಟಿ ಪಡೆಯಿತು. ಬಿಹಾರವು ₹1,753 ಕೋಟಿ ಸಂಗ್ರಹಿಸಿತು,

ಆದರೆ ಕೇಂದ್ರದಿಂದ ₹10,219 ಕೋಟಿ ಹಂಚಿಕೆ ಪಡೆದಿದೆ. ಪಶ್ಚಿಮ ಬಂಗಾಳವು ₹5,682 ಕೋಟಿ ಸಂಗ್ರಹಿಸಿದ್ದರೂ, ₹7,644 ಕೋಟಿ ಹಂಚಿಕೆ ಪಡೆದಿದೆ. ರಾಜಸ್ಥಾನವು ₹4,306 ಕೋಟಿ ಸಂಗ್ರಹಿಸಿ,

₹6,123 ಕೋಟಿ ಹಂಚಿಕೆ ಪಡೆದರೆ, ಮಧ್ಯಪ್ರದೇಶವು ₹3,737 ಕೋಟಿ ಸಂಗ್ರಹಿಸಿ ₹7,976 ಕೋಟಿ ಹೆಚ್ಚುವರಿ ಹಂಚಿಕೆ ಪಡೆದಿದೆ.

ಇದನ್ನು ಓದಿ : ಕೇಂದ್ರದಿಂದ ಎಲ್ಲಾ ರಾಜ್ಯಗಳಿಗೂ ವಿಜಯದಶಮಿಗೆ ಬಂಪರ್‌ ಉಡುಗೊರೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಈ ಅಂಕಿಅಂಶಗಳು ರಾಜ್ಯಗಳ ಜಿಎಸ್‌ಟಿ ಸಂಗ್ರಹ ಮತ್ತು ಕೇಂದ್ರದಿಂದ ನೀಡಲಾದ ಹೆಚ್ಚುವರಿ ಹಂಚಿಕೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತವೆ. (Tax distribution from the central govt to the states)

Tags: central govtGST collectionKarnatakaNew DelhiPM Narendra ModiPralhad JoshiTax sharing

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.