ಎಥನಾಲ್ ಇಂಧನಕ್ಕೆ ಕೇಂದ್ರದ (Tax exemption for ethanol blended petrol ) ಮನ್ನಣೆ : E22 ರಿಂದ E30 ಪೆಟ್ರೋಲ್ಗೆ ತೆರಿಗೆ ವಿನಾಯಿತಿ
E22, E25, E27 ಹಾಗೂ E30 ಇಂಧನಗಳಿಗೆ ತೆರಿಗೆ ವಿನಾಯಿತಿ ಘೋಷಣೆ; ಪರಿಸರ ಸ್ನೇಹಿ ಇಂಧನ ಬಳಕೆಗೆ ಉತ್ತೇಜನ
ಕಚ್ಚಾತೈಲ ಅವಲಂಬನೆ ಕಡಿಮೆ ಮಾಡಲು ಕೇಂದ್ರದ ಮಹತ್ವದ ಹೆಜ್ಜೆ
New Delhi : ದೇಶದಲ್ಲಿ ಹಸಿರು ಇಂಧನ ಬಳಕೆಯನ್ನು ಉತ್ತೇಜಿಸುವ (Tax exemption for ethanol blended petrol) ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯನ್ನು ಹೆಚ್ಚಿಸಲು ಶೇ.22 ರಿಂದ ಶೇ.30 ರಷ್ಟು ಎಥನಾಲ್ (Ethanol) ಹೊಂದಿರುವ ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಈ ಕ್ರಮವು ಪರಿಸರ ಸ್ನೇಹಿ ಇಂಧನಗಳ ಬಳಕೆಗೆ ಉತ್ತೇಜನ ನೀಡುವುದರ ಜೊತೆಗೆ ದೇಶದ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಈಗಾಗಲೇ ದೇಶದಲ್ಲಿ E20 ಇಂಧನ ಬಳಕೆ ಪ್ರಚಲಿತದಲ್ಲಿದ್ದು, ಅದಕ್ಕಿಂತ ಹೆಚ್ಚಿನ ಮಿಶ್ರಣದ ಇಂಧನಗಳಿಗೆ ತೆರಿಗೆ (Tax exemption for ethanol blended petrol) ವಿನಾಯಿತಿ ನೀಡಿರುವುದು ಹಸಿರು ಇಂಧನ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, E22, E25, E27 ಮತ್ತು E30 ಎಂದು ಗುರುತಿಸಲ್ಪಡುವ ಹೆಚ್ಚಿನ ಎಥನಾಲ್ ಮಿಶ್ರಿತ ಪೆಟ್ರೋಲ್ಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ. ಈ ಮಿಶ್ರಣಗಳ ಮೇಲೆ ಇನ್ನು ಮುಂದೆ ಯಾವುದೇ ಕೇಂದ್ರ ಅಬಕಾರಿ ಸುಂಕ ವಿಧಿಸಲಾಗುವುದಿಲ್ಲ.
ಪರಿಣಾಮವಾಗಿ, ಭವಿಷ್ಯದಲ್ಲಿ ಈ ಇಂಧನಗಳ ಬೆಲೆ ಸಾಮಾನ್ಯ ಪೆಟ್ರೋಲ್ಗಿಂತ (Petrol) ಹೆಚ್ಚು ಸ್ಪರ್ಧಾತ್ಮಕವಾಗುವ ಸಾಧ್ಯತೆ ಇದೆ. ದೇಶದ ವಿವಿಧ ಭಾಗಗಳಲ್ಲಿ
ಈ ಹೊಸ ಇಂಧನಗಳನ್ನು ಹಂತ ಹಂತವಾಗಿ ಪರಿಚಯಿಸುವ ಯೋಜನೆ ರೂಪಿಸಲಾಗಿದ್ದು, ಇಂಧನ ಪಂಪ್ಗಳ ಮೂಲಕ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ.
ಹೆಚ್ಚಿನ ಎಥನಾಲ್ ಮಿಶ್ರಿತ ಇಂಧನಗಳ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಈಗಾಗಲೇ ಹೊಸ ತಾಂತ್ರಿಕ ಮಾನದಂಡಗಳನ್ನು ಜಾರಿಗೆ ತಂದಿದೆ.
‘IS 19850:2026’ ಅಡಿಯಲ್ಲಿ E22, E25, E27 ಮತ್ತು E30 ಇಂಧನಗಳಿಗೆ ಸಂಬಂಧಿಸಿದ ವಿಶೇಷ ನಿಯಮಗಳನ್ನು ಪ್ರಕಟಿಸಲಾಗಿದೆ.
ಎಥನಾಲ್ ಪ್ರಮಾಣ, ಆಕ್ಟೇನ್ ರೇಟಿಂಗ್ (Octane Rating) , ಸಲ್ಫರ್ ಮಟ್ಟ, ಆವಿಯ ಒತ್ತಡ ಹಾಗೂ ಸುರಕ್ಷತಾ ಅಂಶಗಳಿಗೆ ಸಂಬಂಧಿಸಿದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಇದರಿಂದ ಇಂಧನದ ಗುಣಮಟ್ಟ ಕಾಪಾಡಲು ಸಾಧ್ಯವಾಗಲಿದೆ.
ಇಂಧನ ತಯಾರಿಕಾ ಸಂಸ್ಥೆಗಳು ಹಾಗೂ ವಾಹನ ಉತ್ಪಾದಕರು ಈ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆಯಲಿದೆ.
ಭಾರತವು ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ರಾಷ್ಟ್ರಗಳಲ್ಲಿ ಒಂದಾಗಿದ್ದು, ವಿದೇಶಿ ವಿನಿಮಯ ವೆಚ್ಚವನ್ನು ಕಡಿಮೆ ಮಾಡಲು ಪರ್ಯಾಯ ಇಂಧನಗಳತ್ತ ಹೆಚ್ಚು ಒತ್ತು ನೀಡುತ್ತಿದೆ.
ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ-2018 ರಲ್ಲಿ 2022ರಲ್ಲಿ ತಿದ್ದುಪಡಿ ತರಲಾಗಿದ್ದು, 2030ರೊಳಗೆ ಸಾಧಿಸಬೇಕಿದ್ದ ಶೇ.20 ಎಥನಾಲ್ ಮಿಶ್ರಣದ ಗುರಿಯನ್ನು 2025-26ರೊಳಗೆ ಸಾಧಿಸುವ ಗುರಿ ನಿಗದಿಪಡಿಸಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಎಥನಾಲ್ ಉತ್ಪಾದನಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಿದ್ದು, ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳ ಪಾತ್ರವೂ ಪ್ರಮುಖವಾಗಿದೆ. ಈ ಬೆಳವಣಿಗೆಗಳು ಎಥನಾಲ್ ಆಧಾರಿತ ಇಂಧನ ಬಳಕೆಯನ್ನು ವೇಗವಾಗಿ ವಿಸ್ತರಿಸಲು ನೆರವಾಗಿವೆ.
ತಜ್ಞರ ಪ್ರಕಾರ, ಈ ಹೊಸ ತೆರಿಗೆ ವಿನಾಯಿತಿ ಕ್ರಮವು ಪರಿಸರ ಸಂರಕ್ಷಣೆ, ಇಂಧನ ಭದ್ರತೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.
ಎಥನಾಲ್ ಉತ್ಪಾದನೆಗೆ ಅಗತ್ಯವಾದ ಕಬ್ಬು ಹಾಗೂ ಇತರೆ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುವುದರಿಂದ ರೈತರಿಗೆ ನೇರ ಲಾಭ ದೊರೆಯುವ ಸಾಧ್ಯತೆ ಇದೆ.
ಅಲ್ಲದೆ, ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸ್ನೇಹಿ ಅಭಿವೃದ್ಧಿಗೆ ಇದು ನೆರವಾಗಲಿದೆ. ಒಟ್ಟಾರೆ, ಹೆಚ್ಚಿನ ಎಥನಾಲ್ ಮಿಶ್ರಿತ ಪೆಟ್ರೋಲ್ಗೆ
ಅಬಕಾರಿ ಸುಂಕ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವು ಭಾರತದ ಹಸಿರು ಇಂಧನ ಭವಿಷ್ಯದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
ಇದನ್ನು ಓದಿ : https://vijayatimes.com/foreign-education-is-very-expensive/