• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಅಸ್ಸಾಂನಲ್ಲಿ ಸುರಿದ ಭಾರೀ ಮಳೆಯಿಂದಾಗಿ 27% ನಷ್ಟು ಕುಸಿತ ಕಂಡ ಚಹಾ ಉತ್ಪಾದನೆ!

Mohan Shetty by Mohan Shetty
in ದೇಶ-ವಿದೇಶ, ಪ್ರಮುಖ ಸುದ್ದಿ
Tea estate
0
SHARES
0
VIEWS
Share on FacebookShare on Twitter

ಅಸ್ಸಾಂನಲ್ಲಿ(Assam) ಕಳೆದ ಕೆಲವು ದಿನಗಳ ಹಿಂದೆ ಎಡಬಿಡದೆ ಸುರಿದ ಮಳೆಯಿಂದಾಗಿ ಅಲ್ಲಿನ ಜನ ಜೀವನ ತತ್ತರಗೊಂಡು ಸಂಪೂರ್ಣ ಅಸ್ತವ್ಯಸ್ತವಾಗಿ ಸಾವು ನೋವನ್ನು ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಭಾರೀ ಮಳೆ ಸುರಿದ ಪರಿಣಾಮ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಎಡಬಿಡದೆ ಸುರಿದ ಮಳೆಯಿಂದಾಗಿ ತೀವ್ರ ಪ್ರವಾಹ(Flood) ಉಂಟಾಗಿತ್ತು. ಇದು ರಾಜ್ಯದ ದಕ್ಷಿಣ ಭಾಗದಲ್ಲಿರುವ ಬರಾಕ್ ಕಣಿವೆಯಲ್ಲಿನ ಚಹಾ ತೋಟಗಳಿಗೆ ದೊಡ್ಡ ಹೊಡೆತವನ್ನು ನೀಡಿದೆ.

Flood

ಬರಾಕ್ ಕಣಿವೆ ಮತ್ತು ಬ್ರಹ್ಮಪುತ್ರ ಕಣಿವೆಯ ನಡುವಿನ ರಸ್ತೆ ಸಂಪರ್ಕವು ಅಸ್ತವ್ಯಸ್ತಗೊಂಡಿರುವುದರಿಂದ, ಚಹಾ ಎಸ್ಟೇಟ್‌ಗಳು(Tea Estate) ಚಹಾ ರವಾನಿಸಲು ಸಾಧ್ಯವಾಗುತ್ತಿಲ್ಲ. ಇದು ಉದ್ಯಮಕ್ಕೆ ಗಂಭೀರ ಆರ್ಥಿಕ ಅಡಚಣೆಯನ್ನು ಉಂಟುಮಾಡುತ್ತಿದೆ. ಆ ಪ್ರದೇಶದ ಜೀವನೋಪಾಯದ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತೀಯ ಚಹಾ ಸಂಘ ಅಸ್ಸಾಂ ಸರ್ಕಾರದ(Assam Government) ಸಹಾಯವನ್ನು ಕೋರಿದೆ. ಈಗಾಗಲೇ ಹಲವಾರು ಸಾಂಪ್ರದಾಯಿಕ ಸಮಸ್ಯೆಗಳಿಂದ ಬಳಲುತ್ತಿರುವ ಬರಾಕ್ ವ್ಯಾಲಿ ಚಹಾ ಉದ್ಯಮ ಸದ್ಯ ಮತ್ತೊಂದು ಹೊಡೆತ ಕಂಡಿದೆ.

ಇದನ್ನೂ ಓದಿ : https://vijayatimes.com/special-flowers-in-the-world/u003c/strongu003eu003cbru003e

ದೀರ್ಘ ಆರ್ಥಿಕ ಹಿಂಜರಿತದ ಪರಿಸ್ಥಿತಿಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸಿದೆ. ಮೇ ಮೊದಲ ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಇಡೀ ಬರಾಕ್ ಕಣಿವೆ ತೀವ್ರ ಪ್ರವಾಹದ ಹಿಡಿತದಲ್ಲಿತ್ತು. ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿರುವ ಎಲ್ಲಾ ನದಿಗಳು, ಚಟುವಟಿಕೆಗಳ ಮುಖ್ಯ ಕೇಂದ್ರವಾದ ಸಿಲ್ಚಾರ್ ಸೇರಿದಂತೆ ಆ ಪ್ರದೇಶದ ಹಲವಾರು ಪಟ್ಟಣಗಳನ್ನು ಮುಳುಗಿಸುವುದರ ಜೊತೆಗೆ ಹಲವಾರು ಪ್ರದೇಶಗಳಲ್ಲಿ ಭೂ ಸವೆತಕ್ಕೆ ಕಾರಣವಾಗಿವೆ. ಹಲವಾರು ಸ್ಥಳಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಪರಿಣಾಮವಾಗಿ, ಬರಾಕ್ ಕಣಿವೆ ಮತ್ತು ಬ್ರಹ್ಮಪುತ್ರ ಕಣಿವೆಯ ನಡುವಿನ ರಸ್ತೆ ಸಂಪರ್ಕವು ಅಸ್ತವ್ಯಸ್ತವಾಗಿದೆ.

Tea drink

ಇದರ ಪರಿಣಾಮ ತಯಾರಿಸಿದ ಚಹಾಗಳ ರವಾನೆಯ ಮೇಲೆ ತೀವ್ರ ಪ್ರಭಾವ ಬೀರಿದೆ. ಆ ಪ್ರದೇಶದ ಪ್ರಮುಖ ಪಟ್ಟಣಗಳಿಂದ ಹಲವಾರು ಟೀ ಎಸ್ಟೇಟ್‌ಗಳಿಗೆ ರಸ್ತೆ ಸಂಪರ್ಕದ ಅಡಚಣೆಯು ಪರಿಣಾಮ ಬೀರಿದೆ ಎಂದು ಐಟಿಎ(ITI) ಹೇಳಿದೆ. ಈ ಹವಾಮಾನ ಬದಲಾವಣೆಯಿಂದಾಗಿ ವಿದ್ಯುತ್‌ ಅಡಚಣೆ ಮತ್ತು ದೂರಸಂಪರ್ಕದಲ್ಲಿ ಅಸ್ಥಿರತೆ ಉಂಟಾಗಿದೆ. ಇದರೊಂದಿಗೆ ಕಲ್ಲಿದ್ದಲು(Coal) ಮುಂತಾದ ಅಗತ್ಯ ವಸ್ತುಗಳ ಕೊರತೆಯ ಬಗ್ಗೆ ಹೆಚ್ಚಿನ ಆತಂಕವಿದೆ ಎಂದು ಐಟಿಎ ಹೇಳಿದೆ. ಈಗಾಗಲೇ ಚಹಾ ಉತ್ಪಾದನೆಯ ಮಟ್ಟ 27% ನಷ್ಟು ಕುಸಿದಿದ್ದು,

https://fb.watch/ee6BdG12Dd/u003c/strongu003eu003cbru003e

ಇದೇ ರೀತಿಯ ವಾತಾವರಣ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಹಾ ಉತ್ಪಾದನೆಯು ಇನ್ನಷ್ಟು ಕುಸಿತಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಚಹಾ ಸಂಘ ತಿಳಿಸಿದೆ.

Tags: assamDeclinedfloodProduction

Related News

ದೆಹಲಿಯಲ್ಲಿ ಕಾರ್ ಸ್ಪೋಟ: ಕರ್ನಾಟಕದಲ್ಲಿ ಹೈ-ಅಲರ್ಟ್​, ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ
ದೇಶ-ವಿದೇಶ

ದೆಹಲಿಯಲ್ಲಿ ಕಾರ್ ಸ್ಪೋಟ: ಕರ್ನಾಟಕದಲ್ಲಿ ಹೈ-ಅಲರ್ಟ್​, ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ

November 11, 2025
ಕೆಂಪು ಕೋಟೆ ಬಳಿ ಕಾರು ಸ್ಫೋಟ: ಪುಲ್ವಾಮಾ ವೈದ್ಯನಿಂದ ಕಾರು ಚಾಲನೆ, ಉಗ್ರರ ಕೈವಾಡ ಶಂಕೆ
ದೇಶ-ವಿದೇಶ

ಕೆಂಪು ಕೋಟೆ ಬಳಿ ಕಾರು ಸ್ಫೋಟ: ಪುಲ್ವಾಮಾ ವೈದ್ಯನಿಂದ ಕಾರು ಚಾಲನೆ, ಉಗ್ರರ ಕೈವಾಡ ಶಂಕೆ

November 11, 2025
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ : ಮೂವರು ಅಧಿಕಾರಿಗಳು ಅಮಾನತು, ಹೊಸ ಸಮಿತಿ ರಚನೆ ಮಾಡಿದ ಸರ್ಕಾರ
ಪ್ರಮುಖ ಸುದ್ದಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ : ಮೂವರು ಅಧಿಕಾರಿಗಳು ಅಮಾನತು, ಹೊಸ ಸಮಿತಿ ರಚನೆ ಮಾಡಿದ ಸರ್ಕಾರ

November 10, 2025
ಕರ್ನಾಟಕದಲ್ಲಿ ಶೀಘ್ರವೇ AI ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆ
ಡಿಜಿಟಲ್ ಜ್ಞಾನ

ಕರ್ನಾಟಕದಲ್ಲಿ ಶೀಘ್ರವೇ AI ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆ

November 10, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.