- ಅಪರೇಷನ್ ಸಿಂಧೂರ ನಮ್ಮ ನೋವನ್ನು ಮರೆಸುತ್ತದೆ ಎಂದ ಸಂತ್ರಸ್ತರು
- ಭಾರತದ ಮಹಿಳೆಯರ ಸಿಂಧೂರ ಅಳಿಸಿದ್ದಕ್ಕೆ ಭಾರತದಿಂದ ತಕ್ಕ ಪಾಠ
- ಮೃತಪಟ್ಟ 26 ಜನರ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ
New delhi: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್ನಲ್ಲಿ ಉಗ್ರರು 26 ಮಂದಿಯನ್ನು ಹ* ಮಾಡಿದ್ದಕ್ಕೆ ಭಾರತದ ಸೇನೆ (Tears of joy in the eyes of the victims) ಪ್ರತೀಕಾರ ತೀರಿಸಿಕೊಂಡಿದೆ. ಆಪರೇಷನ್ ಸಿಂಧೂರ್ (Operation Sindoor) ಮೂಲಕ ಪಾಕಿಸ್ತಾನದ ಹಾಗೂ ಪಿಒಕೆಯ 9 ಸ್ಥಳಗಳಲ್ಲಿ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ (Destroyed) . ಇನ್ನು ಈ ಕುರಿತಾಗಿ ಸಂತ್ರಸ್ತರು ತಮ್ಮ ಮನದ ಭಾವನೆಗಳ ಬಿಚ್ಚಿಟ್ಟಿದ್ದಾರೆ.
9 ಸ್ಥಳಗಳಲ್ಲ ಪಾಕಿಸ್ತಾನವನ್ನೇ ದ್ವಂಸ ಮಾಡಿ!
ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ (Pakistan) ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆಯ ಕ್ರಮ ಶ್ಲಾಘನಾರ್ಹ. ಆದರೆ, 9 ಸ್ಥಳ ಸಾಲದು. ಇಡೀ ಪಾಕಿಸ್ತಾನವನ್ನು ಧ್ವಂಸ ಮಾಡಬೇಕು ಎಂದು ಪಹಲ್ಗಾಮ್ ದಾಳಿಯಲ್ಲಿ (Pahalgam Attack) ಮೃತಪಟ್ಟ ಸಮೀರ್ ಗುಹಾ (ಕೋಲ್ಕಾತ್ತಾದವರು) ಪತ್ನಿ ಆಗ್ರಹಿಸಿದ್ದಾರೆ.
ಈಗ ನೆಮ್ಮದಿಯಾಯ್ತು
ಭಾರತೀಯ ವಾಯುಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದ ವಿನಯ್ ನರ್ವಾಲ್ ಕೂಡ ಪಹಲ್ಗಾಮ್ ದಾಳಿಯಲ್ಲಿ (Pahalgam attack) ಹುತಾತ್ಮರಾಗಿದ್ದರು. ಅವರ ಪತ್ನಿ ಪತಿಯ ಶವದ ಮುಂದೆ ಕುಳಿತಿದ್ದ ದೃಶ್ಯ ವಿಶ್ವದಾದ್ಯಂತ ವೈರಲ್ ಆಗಿತ್ತು. ಆಕೆಯ ಕಣ್ಣೀರಿಗೆ ಇಡೀ ಜಗತ್ತು ಮಮ್ಮಲ (World sucks) ಮರುಗಿತ್ತು. ಮದುವೆಯಾದ ಬರೀ 7 ದಿನಕ್ಕೆ ಆಕೆ ಪತಿಯನ್ನು ಕಳೆದುಕೊಂಡಿದ್ದರು. ಸದ್ಯ ವಿನಯ್ ನರ್ವಾಲ್ (Vinay Narwal) ತಾಯಿ ಪ್ರಧಾನಿ ಮೋದಿಗೆ ಈಗ ನೆಮ್ಮದಿಯಾಯ್ತು ಎಂದು ಧನ್ಯವಾದ ತಿಳಿಸಿದ್ದಾರೆ.

ದಾಳಿ ನಡೆದ 15 ದಿನದಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದು ಸಂತಸ ನೀಡಿತು
ಮಹಾರಾಷ್ಟ್ರದ (Maharashtra) ಪುಣೆ ಮೂಲದ ಸಂತೋಷ್ ಜಗದಾಳೆ ಕೂಡ ಪ್ರವಾಸಕ್ಕೆ ತೆರಳಿದ್ದರು. ಆಗ ಉಗ್ರರು (Extremists) ಇವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಆಗ ಬಳಿಕ ಸಂತೋಷ್ (Santosh) ಮನೆಯಲ್ಲಿ ಕತ್ತಲೆ ಕವಿದಿತ್ತು. ಸಂತೋಷ್ ಪುತ್ರಿ ನಿತ್ಯ ನರಕದಲ್ಲೇ ಬದುಕು ದೂಡುತ್ತಿದ್ದರು. ದಾಳಿ ನಡೆದ 15 ದಿನದಲ್ಲಿ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಮೃತ ಸಂತೋಷ್ (Santosh died) ಜಗದಾಳೆ ಪುತ್ರಿ ಅವಸಾರಿ ಪ್ರತಿಕ್ರಿಯಿಸಿ, ಮೃ*ಪಟ್ಟ 26 ಜನರ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ (Peace) ಎಂದು ನನಗೆ ಅನ್ನಿಸುತ್ತದೆ ಎಂದಿದ್ದಾರೆ.
ನನ್ನ ಗಂಡನ ಆತ್ಮಕ್ಕೆ ಈಗ ಶಾಂತಿ ಸಿಕ್ಕಿತು ಎಂದ ಶುಭಂ ಪತ್ನಿ
ನನ್ನ ಗಂಡನ ಆತ್ಮಕ್ಕೆ ಈಗ ಶಾಂತಿ ಸಿಕ್ಕಿತು .ಸೇನೆಗೆ ಧನ್ಯವಾದ ಹೇಳುತ್ತೇನೆ. ತುಂಬಾ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಪತಿಯ ಸಾ*ಗೆ (death of husband) ಅವರು ಪ್ರತೀಕಾರ ತೀರಿಸಿಕೊಂಡಿದ್ದಾರೆ. ಖಂಡಿತ ಇದು ಅಸಲಿ ಶ್ರದ್ಧಾಂಜಲಿ. ಅವರ ಆತ್ಮಕ್ಕೆ ಇವತ್ತು ಶಾಂತಿ ಸಿಕ್ಕಿದೆ ಎಂದು ಐಶಾನ್ಯಾ ಹೇಳಿದ್ದಾರೆ.
ಬೇರೆಯವರ ಮಕ್ಕಳಾದರೂ ಇನ್ನು ನೆಮ್ಮದಿಯಿಂದ ಓಡಾಡಿಕೊಂಡಿರಲಿ (Tears of joy in the eyes of the victims) ಎಂದು ಮೃತ ಮಂಜುನಾಥ್ ರಾವ್ (Manjunath Rao) ಅವರ ತಾಯಿ ಸುಮತಿ ಹೇಳಿದ್ದಾರೆ.ಬೆಂಗಳೂರಿನ ಭರತ್ ಭೂಷಣ್ (Bharat Bhushan) ಮನೆಯಲ್ಲೂ ಉಗ್ರರ ಸಾವಿಗೆ ಸಂತೋಷ ವ್ಯಕ್ತವಾಗಿದೆ.
ಇದನ್ನು ಓದಿ : http://ಪಾಕಿಸ್ತಾನದ ವಿರುದ್ಧ ಪರೋಕ್ಷ ಯುದ್ಧ ಆರಂಭಿಸಿದ ಭಾರತ: ಜಲ, ವಾಣಿಜ್ಯ, ಸಾಗರ, ಗಡಿ ಸೇರಿದಂತೆ ಹಲವು ರಂಗಗಳಲ್ಲಿ ನಿರ್ಬಂಧ
ಭರತ್ ತಂದೆ ಈ ಬಗ್ಗೆ ಮಾತನಾಡಿ, ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ (Pakistan deserves punishment) ಮಾಡಲಾಗಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.26 ಸಾವಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಕುಂಕುಮ ಅಳಿಸಿದವರನ್ನು ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲೇ ಸಾವಿನ ಮನೆಗೆ ಸೇರಿಸಿದೆ.