- ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಭಾರೀ ಏರಿಕೆ
- ಬೆಚ್ಚಿ ಬೀಳಿಸುವಂತಿದೆ ಆರೋಗ್ಯ ಇಲಾಖೆ ಅಂಕಿ ಅಂಶ
- ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆಗಳಿಗೆ ಸಿಎಂ ಸೂಚನೆ
Bengaluru: ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನಲ್ಲೇ(young age) ಗರ್ಭಿಣಿಯಾಗುತ್ತಿರುವ ಬಾಲಕಿಯರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು,
ಇದರಿಂದಾಗಿ ಆರೋಗ್ಯ ಇಲಾಖೆ(Department of Health) ಹಾಗೂ ಮಕ್ಕಳ ಹಕ್ಕುಗಳ ಆಯೋಗ ಗಂಭೀರ ಚಿಂತೆಗೆ ಒಳಗಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ,
ಕಳೆದ ಕೆಲ ವರ್ಷಗಳಲ್ಲಿ ಕರ್ನಾಟಕದಲ್ಲಿ(Karnataka) ಟೀನೇಜ್ ಪ್ರೆಗ್ನೆನ್ಸಿ(Teenage Pregnancy) ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ. ತಾಯ್ತನಕ್ಕೆ ತಕ್ಕ ವಯಸ್ಸಿಗೂ ಮುನ್ನವೇ ಗರ್ಭಧಾರಣೆ ಆಗುತ್ತಿರುವ
ಘಟನೆಗಳು ಸಮಾಜದಲ್ಲಿ ಅಲಾರ್ಮ್ ಮೂಡಿಸಿದೆ. ಮುಖ್ಯಮಂತ್ರಿಗಳೇ ಖುದ್ದಾಗಿ ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಕಲ್ಯಾಣ ಇಲಾಖೆಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದು,
ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕೆಲವು ಪೋಷಕರು ಹೆಣ್ಣು ಮಕ್ಕಳನ್ನು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತರಾಗಬೇಕು ಎಂಬ ಭಾವನೆಯಿಂದ ಬಾಲ್ಯ ವಿವಾಹಕ್ಕೆ ಮುಂದಾಗುತ್ತಾರೆ.

ಶಿಕ್ಷಣದ ಕೊರತೆ, ಬಡತನ, ಮೂಢನಂಬಿಕೆಗಳೂ ಈ ಸಮಸ್ಯೆಗೆ ಕಾರಣವಾಗಿವೆ. ಅಲ್ಲದೆ, ಕಾನೂನು ಬಾಹಿರ(Illegal) ಸಂಬಂಧಗಳು, ದೌರ್ಜನ್ಯಗಳು ಹಾಗೂ
ಕಿಶೋರ-ಕಿಶೋರಿಯರ ಪ್ರೇಮ ಸಂಬಂಧಗಳೂ ಕೂಡಾ ಟೀನೇಜ್ ಪ್ರೆಗ್ನೆನ್ಸಿ ಏರಿಕೆಗೆ ಕಾರಣವಾಗುತ್ತಿರುವುದಾಗಿ ತಜ್ಞರು ಹೇಳುತ್ತಾರೆ.
ರಾಜ್ಯದೆಲ್ಲೆಡೆ ಈ ಸಮಸ್ಯೆ ಹೆಚ್ಚಾಗುತ್ತಿದ್ದರೂ, ಬೆಂಗಳೂರು ಅರ್ಬನ್(Bangalore Urban) ಜಿಲ್ಲೆಯಲ್ಲಿ ಮಾತ್ರವೇ ಕಳೆದ ಮೂರು ವರ್ಷಗಳಲ್ಲಿ 8,891 ಪ್ರಕರಣಗಳು ದಾಖಲಾಗಿವೆ.
ಆರೋಗ್ಯ ಇಲಾಖೆ ನೀಡಿರುವ ವರದಿ ಪ್ರಕಾರ, ರಾಜ್ಯದಾದ್ಯಂತ ಒಂದೇ ಮೂರು ವರ್ಷಗಳಲ್ಲಿ 3,36,000 ಕ್ಕೂ ಹೆಚ್ಚು ಟೀನೇಜ್ ಪ್ರೆಗ್ನೆನ್ಸಿ ಪ್ರಕರಣಗಳು ವರದಿಯಾಗಿವೆ.
ಆರೋಗ್ಯ ಇಲಾಖೆಯ ಇತ್ತೀಚಿನ ಅಂಕಿಅಂಶ ಪ್ರಕಾರ, ಕಳೆದ ಆರು ತಿಂಗಳಲ್ಲಿ ಮಾತ್ರವೇ ರಾಜ್ಯದಲ್ಲಿ 22,000 ಕ್ಕೂ ಹೆಚ್ಚು ಬಾಲ್ಯ ಗರ್ಭಧಾರಣೆ ಪ್ರಕರಣಗಳು ವರದಿಯಾಗಿವೆ. ಇಷ್ಟು ವೇಗವಾಗಿ ಪ್ರಕರಣಗಳು ಏರಿಕೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇನ್ನು ಟೀನೇಜ್ ಪ್ರೆಗ್ನೆನ್ಸಿಗೆ ಹಲವಾರು ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು ಕಾರಣವಾಗಿವೆ.
- ಬಾಲ್ಯ ವಿವಾಹ
- ಶಿಕ್ಷಣದ ಕೊರತೆ ಮತ್ತು ಅಕ್ಷರಾಸ್ಯತೆ
- ಬಡತನ ಹಾಗೂ ವಲಸೆ
- ಕುಟುಂಬ ಯೋಜನೆ ವಿಧಾನಗಳ ಅರಿವು ಇಲ್ಲದಿರುವುದು
- ಹುಡುಗಿಯರ ಅಭಿಪ್ರಾಯವನ್ನು ಕಡೆಗಣಿಸುವುದು
- ಸುರಕ್ಷಿತ ಲೈಂಗಿಕ ಶಿಕ್ಷಣದ ಕೊರತೆ
ಹೆಚ್ಚಿನ ಪ್ರಕರಣಗಳಲ್ಲಿ 14 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯಾಗುತ್ತಿರುವುದು ದಾಖಲಾಗಿದೆ. ಅಪ್ರಾಪ್ತ ವಯಸ್ಸಿನಲ್ಲೇ ತಾಯ್ತನ ಅನುಭವಿಸುವುದರಿಂದ ತಾಯಿ ಹಾಗೂ
ಹುಟ್ಟುವ ಮಗುವಿನ ಆರೋಗ್ಯ ಎರಡರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ರಕ್ತಹೀನತೆ, ಅಧಿಕ ರಕ್ತದೊತ್ತಡ, ಶಾರೀರಿಕ ಹಾಗೂ ಮಾನಸಿಕ ಒತ್ತಡಗಳು ಬಾಲ ತಾಯಿಯರಲ್ಲಿ ಸಾಮಾನ್ಯವಾಗುತ್ತವೆ.
ಹುಟ್ಟುವ ಮಕ್ಕಳಲ್ಲೂ ಪೌಷ್ಠಿಕ ಕೊರತೆ ಹಾಗೂ ಸಾವಿನ ಅಪಾಯ ಹೆಚ್ಚಿರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ಅಂಕಿಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು(State Govt) ಆರೋಗ್ಯ ಇಲಾಖೆ,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ(Women and Child Welfare Department) ಹಾಗೂ ಶಿಕ್ಷಣ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಜಾಗೃತಿ ಅಭಿಯಾನ ನಡೆಸುವ ಯೋಜನೆ ರೂಪಿಸುತ್ತಿದೆ.
ಇದನ್ನು ಓದಿ : ಆನ್ಲೈನ್ ಗೇಮಿಂಗ್ ನಿಯಂತ್ರಣ ಮಸೂದೆ: ಬೆಟ್ಟಿಂಗ್ ಮೇಲೆ ಕಟ್ಟುನಿಟ್ಟಿನ ಕಾನೂನು, 7 ವರ್ಷ ಜೈಲು ಶಿಕ್ಷೆ ಸಾಧ್ಯತೆ
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ತಡೆಗೆ ಬಿಗಿ ಕ್ರಮ ಕೈಗೊಳ್ಳಲು ಸಿಎಂ ಸಿದ್ಧರಾಮಯ್ಯ(CM Siddaramaiah) ಸೂಚನೆ ನೀಡಿದ್ದಾರೆ.