Bengaluru : ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್(Puneeth Rajkumar) ಅವರು ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಈ ಹಿನ್ನಲೆಯಲ್ಲಿ ನಾಡಿನ ಅನೇಕ ಗಣ್ಯರು ಅವರನ್ನು ನೆನೆದು, ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಈ ಕುರಿತು ಅನೇಕರು ಟ್ವೀಟ್ (Tweets to Dear Appu) ಮಾಡಿದ್ದು, ಇದರ ವಿವರ ಇಲ್ಲಿದೆ ನೋಡಿ.
“ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಪಡೆದಿರುವ ನೆಚ್ಚಿನ ಕಲಾವಿದ, ನಮ್ಮೆಲ್ಲರ ಪ್ರೀತಿಯ ಅಪ್ಪು (Tweets to Dear Appu) ಶ್ರೀ ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯತಿಥಿಯಂದು ಅವರಿಗೆ ಭಾವಪೂರ್ಣ ನಮನಗಳು.
ಅವರ ಕಲಾವಂತಿಕೆ, ಹೃದಯವಂತಿಕೆಯ ವ್ಯಕ್ತಿತ್ವ ಎಂದೆಂದಿಗೂ ಅಜರಾಮರ.” – ಬಿ.ಎಸ್.ವೈ
“ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ಅಪ್ಪು, ಡಾಕ್ಟರ್ ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು.”– ಬಸವರಾಜ ಬೊಮ್ಮಾಯಿ
ಇದನ್ನೂ ಓದಿ : https://vijayatimes.com/fan-letter-to-power-star/
“ಅಭಿಮಾನಿಗಳ ಪ್ರೀತಿಯ ‘ಅಪ್ಪು’ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ವರ್ಷ ತುಂಬಿದ್ದರೂ ಕನ್ನಡಿಗರ ಪ್ರತಿ ನೆನಪು, ಪ್ರತಿ ಉಸಿರಿನಲ್ಲೂ ಅವರು ಶಾಶ್ವತವಾಗುಳಿದಿದ್ದಾರೆ.
‘ಕರ್ನಾಟಕ ರತ್ನ’ ಡಾ. ಪುನೀತ್ ರಾಜ್ಕುಮಾರ್ ಅವರಿಗೆ ನಮ್ಮ ಗೌರವ ನಮನಗಳು.” – ಡಿ.ಕೆ.ಶಿವಕುಮಾರ್
“ಪುನೀತ್ ರಾಜ್ಕುಮಾರ್ ನಟನಾಗಿ ಮಾತ್ರವಲ್ಲ, ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಗಳಿಂದ ಇತರರಿಗೆ ಮಾದರಿಯಾದವರು.
https://vijayatimes.com/tweets-to-dear-appu/
ಪುನೀತ್ ನಮ್ಮನ್ನಗಲಿ ಒಂದು ವರ್ಷ ಕಳೆದಿದೆ, ಅವರ ಸರ್ವಜನಪ್ರಿಯ ವ್ಯಕ್ತಿತ್ವ ಮತ್ತು ಆದರ್ಶದ ಬದುಕು ಸದಾ ನಮ್ಮ ಕಣ್ಣ ಮುಂದಿರುತ್ತದೆ.
ಎಂದಿಗೂ ಮಾಸದ ನಗುಮೊಗದ ಅಪ್ಪುವಿಗೆ ಗೌರವ ನಮನಗಳು.” –ಸಿದ್ದರಾಮಯ್ಯ
“ಕರ್ನಾಟಕ ರತ್ನ, ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.”- ಲಕ್ಷ್ಮೀ ಹೆಬ್ಬಾಳ್ಕರ್
ಇದನ್ನೂ ಓದಿ : https://vijayatimes.com/kerala-court-on-plagiarism-row/
“ಕನ್ನಡಿಗರ ಮನದಾಳದಲ್ಲಿ ಪುನೀತ್ ರಾಜ್ ಕುಮಾರ್ ರವರು ಸದಾ ಜೀವಂತ. ದೈಹಿಕವಾಗಿ ನಮ್ಮನ್ನು ಅಗಲಿ ಒಂದು ವರ್ಷ ಕಳೆದರೂ,
ತಮ್ಮ ಚಿತ್ರಗಳು ಹಾಗೂ ಕೆಲಸ ಕಾರ್ಯಗಳಿಂದ ಸದಾ ನಮ್ಮೊಡನೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇದೆ.” – ದರ್ಶನ್ ತೂಗುದೀಪ