ಮೈಸೂರು, ಆ. 09: ಸಚಿವ ಸಂಪುಟದ ಆಕಾಂಕ್ಷಿಯಾಗಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್ ಸಚಿವ ಸ್ಥಾನ ಕೈ ತಪ್ಪಿದ್ದ ಹಿನ್ನಲೆಯಲ್ಲಿ ತೀವ್ರ ಆಕ್ರೋಶಗೊಂಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು ಒಬ್ಬ ವ್ಯಕ್ತಿಯ ಪೋನ್ ಕರೆಯಿಂದಾಗಿ ನನಗೆ ಸಚಿವ ಸಂಪುಟ ಸ್ಥಾನ ಕೈತಪ್ಪಿದೆ. ಬಿಜಪಿ ಹೈ ಕಮಾಂಡ್ಗೆ ಕರೆ ಮಾಡಿ ಸಚಿವ ಸ್ಥಾನ ನೀಡದಂತೆ ಒತ್ತಡ ಹೇರಿದ್ದಾರೆ ಆದ್ದರಿಂದ ನನಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ರಾಮದಾಸ್ ತಮ್ಮ ಆಕ್ರೋಶವನ್ನು ವ್ಯಕ್ತಪಡೆಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರು ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿದೆ ಎಂದು ಮೊನ್ನೆ ಹೇಳಿದ್ದರು. ನಿನ್ನಂತವನು ಮಂತ್ರಿ ಆಗಬೇಕು ಅದಕ್ಕಾಗಿ ಪಟ್ಟಿಯಲ್ಲಿ ನಿನ್ನ ಹೆಸರು ಸೇರಿಸಿದ್ದೇನೆ ಎಂದಿದ್ದರು ಆದರೆ ರಾತೋರಾತ್ರಿ ಪಟ್ಟಿಯಿಂದ ನನ್ನ ಹೆಸರನ್ನುತೆಗೆದು ಹಾಕಲಾಗಿದೆ. ರಾಜ್ಯದ ನಾಯಕರಾದ ನಳೀನ್ ಕುಮಾರ್ ಹಾಗೂ ಬಿ.ಎಸ್. ಯಡಿಯೂರಪ್ಪ ನವರು ಮಂತ್ರಿ ಸ್ಥಾನ ನೀಡುವ ಬರವಸೆ ನೀಡಿದ್ದರು ಆದರೆ ಒಬ್ಬ ವ್ಯಕ್ತಿ ಹೈಕಮಾಂಡ್ ಗೆ ಕರೆ ಮಾಡಿದ ಪರಿಣಾಮ ಹೈಕಮಾಂಡ್ ಅ ವ್ಯೆಕ್ತಿಯ ಮಾತಿಗೆ ಮಣಿದು ನನ್ನನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಾರೆ ಎಂದ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕೆಲವು ಸ್ಥಳೀಯರ ಪ್ರಕಾರ ಬಿ.ಎಲ್. ಸಂತೋಷ ಅವರಿಂದ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.