- ಜನಗಣಮನಗೂ ಮೊದಲು (Union Home Ministry new rules) ವಂದೇ ಮಾತರಂ: ಸರ್ಕಾರದ ಮಹತ್ವದ ಆದೇಶ
- ರಾಷ್ಟ್ರಗೀತೆಗೂ ಮುನ್ನ ಆರು ಚರಣಗಳ ಗಾಯನ: ಕೇಂದ್ರ ಗೃಹ ಸಚಿವಾಲಯದ ಸ್ಪಷ್ಟ ನಿರ್ದೇಶನ
- ವಂದೇ ಮಾತರಂಗೆ ಅಧಿಕೃತ ಶಿಷ್ಟಾಚಾರ: ದೇಶಾದ್ಯಂತ ಹೊಸ ಮಾರ್ಗಸೂಚಿ
New delhi: ರಾಷ್ಟ್ರಗೀತೆ ‘ಜನಗಣಮನ’ದಂತೆ ಸರ್ಕಾರಿ (Union Home Ministry new rules) ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ (Vande Matram) ಗೀತೆಯನ್ನೂ ಅಧಿಕೃತವಾಗಿ ಕಡ್ಡಾಯಗೊಳಿಸುವ ಮಹತ್ವದ ಆದೇಶವನ್ನು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ರಾಷ್ಟ್ರಗೀತೆಗೂ ಮುನ್ನ ‘ವಂದೇ ಮಾತರಂ’ ಗೀತೆಯ ಆರು ಚರಣಗಳನ್ನು ಪೂರ್ಣವಾಗಿ ಹಾಡಬೇಕು ಅಥವಾ ನುಡಿಸಬೇಕು ಎಂದು ಸೂಚಿಸಲಾಗಿದೆ. ಗೀತೆ ಆರಂಭವಾದ ಕ್ಷಣದಿಂದ ಅಂತ್ಯದವರೆಗೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಲಾಗಿದೆ.

ಈ ಕ್ರಮದ ಮೂಲಕ ‘ವಂದೇ ಮಾತರಂ’ಗೆ ರಾಷ್ಟ್ರಗೀತೆ (Union Home Ministry new rules) ಮಟ್ಟದ ಶಿಷ್ಟಾಚಾರ ನೀಡುವ ಉದ್ದೇಶ ಹೊಂದಲಾಗಿದೆ.
ನಿರ್ದೇಶನದ ಪ್ರಕಾರ, ಸುಮಾರು 3 ನಿಮಿಷ 10 ಸೆಕೆಂಡುಗಳ ಅವಧಿಯ ಆರು ಚರಣಗಳ ಪೂರ್ಣ ರೂಪವನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಬಳಸಬೇಕು.
ತ್ರಿವರ್ಣ ಧ್ವಜಾರೋಹಣ, ರಾಷ್ಟ್ರಪತಿಗಳ ಆಗಮನ ಮತ್ತು ನಿರ್ಗಮನ, ರಾಷ್ಟ್ರವನ್ನುದ್ದೇಶಿಸಿ ಅವರ ಭಾಷಣದ ಮೊದಲು ಹಾಗೂ ನಂತರ, ರಾಜ್ಯಪಾಲರು ಅಥವಾ ಲೆಫ್ಟಿನೆಂಟ್ ಗವರ್ನರ್ಗಳ (Lieutenant Governor) ಅಧಿಕೃತ ಕಾರ್ಯಕ್ರಮಗಳಲ್ಲಿ ಸಹ ಇದೇ ನಿಯಮ ಅನ್ವಯವಾಗುತ್ತದೆ.
ಅಖಿಲ ಭಾರತ ರೇಡಿಯೋ ಮತ್ತು ದೂರದರ್ಶನದಲ್ಲಿ ರಾಷ್ಟ್ರಪತಿ ಭಾಷಣ ಪ್ರಸಾರವಾಗುವ ಸಂದರ್ಭದಲ್ಲಿಯೂ ಇದೇ ಕ್ರಮ ಪಾಲಿಸಬೇಕು ಎಂದು ತಿಳಿಸಲಾಗಿದೆ.
ಆದರೆ ಯಾವುದೇ ಸಾಕ್ಷ್ಯಚಿತ್ರ ಅಥವಾ ಚಿತ್ರ ಪ್ರದರ್ಶನದ ಮಧ್ಯೆ ಗೀತೆ ನುಡಿಸಿದರೆ ಪ್ರೇಕ್ಷಕರು ಎದ್ದು ನಿಲ್ಲಬೇಕೆಂಬ ನಿಯಮ ಅನ್ವಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
ಇದುವರೆಗೆ ‘ವಂದೇ ಮಾತರಂ’ ಹಾಡುವ ಕುರಿತು ಸ್ಪಷ್ಟವಾದ ಅಧಿಕೃತ ಶಿಷ್ಟಾಚಾರ ಇರಲಿಲ್ಲ. ಆದರೆ ‘ಜನಗಣಮನ’ ರಾಷ್ಟ್ರಗೀತೆಗೆ ರಾಗ, ಅವಧಿ ಹಾಗೂ ಗಾಯನ ವಿಧಾನ ಕುರಿತು ನಿಗದಿತ ಮಾರ್ಗಸೂಚಿಗಳು ಇದ್ದವು. ಈಗ ಆರು ಚರಣಗಳ ಸಂಪೂರ್ಣ ಆವೃತ್ತಿಯನ್ನು ಕಡ್ಡಾಯಗೊಳಿಸುವ ಮೂಲಕ ಸರ್ಕಾರ ಸ್ಪಷ್ಟ ನಿಯಮಾವಳಿಯನ್ನು ರೂಪಿಸಿದೆ.
ಈ ನಿರ್ದೇಶನವನ್ನು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಚಿವಾಲಯಗಳು ಮತ್ತು ಸಂವಿಧಾನಿಕ ಸಂಸ್ಥೆಗಳಿಗೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ರವಾನಿಸಲಾಗಿದೆ. ಅಗತ್ಯವಿದ್ದಲ್ಲಿ ರಾಜ್ಯಗಳು ಸ್ಥಳೀಯ ಭಾಷೆಗಳಲ್ಲಿ ಸಹ ಮಾರ್ಗಸೂಚಿಗಳನ್ನು ಜಾರಿಗೆ ತರಬಹುದು ಎಂದು ಹೇಳಲಾಗಿದೆ.
ಗೀತೆಯನ್ನು ಪ್ರಾರಂಭಿಸುವ ಮೊದಲು ಪ್ರೇಕ್ಷಕರಿಗೆ ಸೂಚನೆ ನೀಡಲು ಡ್ರಮ್ ರೋಲ್ ಬಳಸುವ ಕ್ರಮವನ್ನೂ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಡ್ರಮ್ ರೋಲ್ ನಿಧಾನವಾಗಿ ಆರಂಭವಾಗಿ ಗರಿಷ್ಠ ಧ್ವನಿತಟ್ಟಿಗೆ ತಲುಪಿ ನಂತರ ಮತ್ತೆ ನಿಧಾನಗತಿಗೆ ಮರಳಬೇಕು ಮತ್ತು ಏಳನೇ ಬೀಟ್ವರೆಗೆ ಕೇಳಿಸಬೇಕು.
ಬಳಿಕ ಒಂದು ಬೀಟ್ ವಿರಾಮದ ನಂತರ ರಾಷ್ಟ್ರಗೀತೆ ಪ್ರಾರಂಭವಾಗಬೇಕು ಎಂದು ತಿಳಿಸಲಾಗಿದೆ. ನಾಗರಿಕ ಪುರಸ್ಕಾರ ಸಮಾರಂಭಗಳು, ಸರ್ಕಾರಿ ರಾಜ್ಯೋತ್ಸವಗಳು, ಮೆರವಣಿಗೆಯಲ್ಲಿ ರಾಷ್ಟ್ರಧ್ವಜವನ್ನು ಹೊರತರುವ ಸಂದರ್ಭಗಳು ಸೇರಿದಂತೆ ಭಾರತ ಸರ್ಕಾರ ವಿಶೇಷ ಆದೇಶ ಹೊರಡಿಸುವ ಇತರ ಕಾರ್ಯಕ್ರಮಗಳಲ್ಲಿಯೂ ಈ ನಿಯಮ ಅನ್ವಯವಾಗಲಿದೆ.
ಶಾಲೆಗಳಲ್ಲಿಯೂ ಪ್ರತಿದಿನದ ಪ್ರಾರ್ಥನೆ ಅಥವಾ ಸಭೆಯ ವೇಳೆ ರಾಷ್ಟ್ರಗೀತೆಯ ಜೊತೆಗೆ ‘ವಂದೇ ಮಾತರಂ’ ಹಾಡಲು ಸಲಹೆ ನೀಡಲಾಗಿದೆ.
ವಂದೇ ಮಾತರಂ’ ಗೀತೆಗೆ ಐತಿಹಾಸಿಕ ಹಿನ್ನೆಲೆ ಇದೆ. 1875ರಲ್ಲಿ ಬಂಕಿಮ್ ಚಂದ್ರ ಚಟರ್ಜಿ (Bankim Chandra Chatterjee) ರಚಿಸಿದ ಈ ಗೀತೆ ಬಳಿಕ 1882ರಲ್ಲಿ ಪ್ರಕಟವಾದ ಅವರ ‘ಆನಂದಮಠ’ ಕಾದಂಬರಿಯಲ್ಲಿ ಸೇರಿಸಲಾಯಿತು.
1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಡಲ್ಪಟ್ಟ ಈ ಗೀತೆ, ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ದೇಶಭಕ್ತಿಯ ಘೋಷವಾಕ್ಯವಾಗಿ ರೂಪುಗೊಂಡಿತು.
ಭಾರತದ ಭೂಮಿಯನ್ನು ತಾಯಿಯಾಗಿ ಕೊಂಡಾಡುವ ಈ ಕೃತಿ ಅನೇಕ ಕ್ರಾಂತಿಕಾರಿಗಳಿಗೆ ಪ್ರೇರಣೆಯಾಗಿ ನಿಂತಿತ್ತು. ಈ ವರ್ಷ ‘ವಂದೇ ಮಾತರಂ’ ರಚನೆಯ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸರ್ಕಾರ ಈ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿರುವುದು ಗಮನಾರ್ಹವಾಗಿದೆ.
ಇದನ್ನು ಓದಿ : https://vijayatimes.com/red-card-to-bescom/