ಬೆಂಗಳೂರು ಆ 23 : ಕರ್ನಾಟಕ ಪ್ರವಾಸದಲ್ಲಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಜಭವನದ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದರು.
ರಾಜ ಭವನದಲ್ಲಿ ಬೆಂಗಳೂರಿನ ಶಾಲಾ ಮಕ್ಕಳ ಜೊತೆ ರಕ್ಷಾ ಬಂಧನ ಆಚರಿಸಿದ ಅವರು ರಕ್ಷಾ ಬಂಧನ ಹಬ್ಬ ನಾಗರಿಕರಲ್ಲಿ ಸಹೋದರತ್ವ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ. ಇದರಿಂದ ನಮ್ಮ ರಾಷ್ಟ್ರ ಬಲಿಷ್ಠವಾಗುತ್ತದೆ. ಪ್ರತಿಯೊಬ್ಬ ಮಹಿಳೆ, ಮಕ್ಕಳಿಗೆ ಗೌರವ ಹಾಗೂ ರಕ್ಷಣೆ ನೀಡಬೇಕು ಎಂದರು . ರಕ್ಷಾ ಬಂಧನ ಹಬ್ಬ ಸಹೋದರ – ಸಹೋದರಿಯರ ನಡುವಿನ ಪ್ರೀತಿ ಮತ್ತು ಗೌರವದ ಆಚರಣೆಯಾಗಿದೆ ಎಂಂದು ಹಬ್ಬದ ಮಹತ್ವ ಸಾರಿದರು.ಈ ಸಂಸ್ಕೃತಿಯಿಂದ ಹಿರಿಯನ್ನು ಗೌರವಿಸಲು, ಕುಟುಂಬಸ್ಥರ ನುಡವಿನ ಪ್ರೀತಿ, ಬಾಂಧವ್ಯ ಗಟ್ಟಿಯಾಗಿಸಲು ಸಾಧ್ಯವಾಗಿದೆ. ಎಂದರು.