ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಭಿತ್ತಿ ಚಿತ್ರವನ್ನು ಬುರ್ಜ್ ಖಲೀಫದಲ್ಲಿ ಬಿಡುಗಡೆಗೊಳಿಸಲು ಭರ್ಜರಿ ತಯಾರಿ ನಡೆದಿದೆ. ಈಗಾಗಲೇ ನಾಯಕ ನಟ ಕಿಚ್ಚ ಸುದೀಪ್ ಅವರೊಂದಿಗೆ ನಿರ್ದೇಶಕ ಅನೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು ತಂಡದೊಂದಿಗೆ ದುಬೈ ನಲ್ಲಿದ್ದಾರೆ.
ವಿಕ್ರಾಂತ್ ರೋಣ ಚಿತ್ರವು ಕನ್ನಡ ಸೇರಿದಂತೆ ಹತ್ತಕ್ಕೂ ಅಧಿಕ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ರಷ್ಯನ್, ಚೈನೀಸ್, ಅರೆಬಿಕ್, ಸ್ಪ್ಯಾನಿಶ್ ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ. ಇಂದು ರಾತ್ರಿ ೯ ಗಂಟೆಗೆ ಬುರ್ಜ್ ಖಲೀಫದ ಕಾರ್ಯಕ್ರಮವು ಕಿಚ್ಚ ಕ್ರಿಯೇಶನ್ಸ್ ಯೂಟ್ಯೂಬ್ ವಾಹಿನಿಯಲ್ಲಿ ನೇರ ಪ್ರಸಾರಗೊಳ್ಳಲಿದೆ. ಅದರೊಂದಿಗೆ ಬುರ್ಜ್ ಖಲೀಫ ದಲ್ಲಿ ಶೀರ್ಷಿಕೆ ಬಿಡುಗಡೆಗೊಳಿಸಿದ ಮೊದಲ ಚಿತ್ರ ಹಾಗೂ 180 ಸೆಕೆಂಡುಗಳ ಕಾಲಾವಧಿಯ ದೃಶ್ಯ ಪ್ರದರ್ಶಿಸಿದ ಮೊದಲ ಚಿತ್ರ ತಂಡವಾಗಿ ಗುರುತಿಸಲ್ಪಡಲಿದೆ. ಅಂದಹಾಗೆ ಚಿತ್ರ ರಂಗದಲ್ಲಿ ೨೫ ವರ್ಷ ಪೂರೈಸಿದಕ್ಕಾಗಿ ಬುರ್ಜ್ ಖಲೀಫದಲ್ಲಿ ಸನ್ಮಾನಗೊಳ್ಳುತ್ತಿರುವ ಮೊದಲ ನಟ ಸುದೀಪ್.
ಭಾರತೀಯ ಸಮಯ ಸರಿಯಾಗಿ 9.45ರ ಹೊತ್ತಿಗೆ ಬುರ್ಜ್ ಖಲೀಫದಲ್ಲಿ ಸುದೀಪ್ ಅವರ ವರ್ಚುವಲ್ ಕಟೌಟ್ ರಾರಾಜಿಸಲಿದ್ದು ಅಭಿಮಾನಿಗಳು ಕಾತರಾಗಿದ್ದಾರೆ.