• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಇಂಧನ ಬೆಲೆ ಏರಿಕೆಗೆ ಹಿಂದಿನ ಸರ್ಕಾರವೇ ಕಾರಣನಾ? ಹಳೇ ಸರಕಾರಗಳ ಆಯಿಲ್ ಬಾಂಡೇ ತೈಲಬೆಲೆಯೇರಿಕೆಗೆ ಮೂಲ ಅಂತ ಕೇಂದ್ರ ಸರ್ಕಾರ ಹೇಳ್ತಿದೆ ಇದು ನಿಜನಾ? ಸುಳ್ಳಾ?

Sharadhi by Sharadhi
in ದೇಶ-ವಿದೇಶ, ಪ್ರಮುಖ ಸುದ್ದಿ
ಇಂಧನ ಬೆಲೆ ಏರಿಕೆಗೆ ಹಿಂದಿನ ಸರ್ಕಾರವೇ ಕಾರಣನಾ? ಹಳೇ ಸರಕಾರಗಳ ಆಯಿಲ್ ಬಾಂಡೇ ತೈಲಬೆಲೆಯೇರಿಕೆಗೆ ಮೂಲ ಅಂತ ಕೇಂದ್ರ ಸರ್ಕಾರ ಹೇಳ್ತಿದೆ ಇದು ನಿಜನಾ? ಸುಳ್ಳಾ?
0
SHARES
0
VIEWS
Share on FacebookShare on Twitter
  • ಕಶ್ಯಪ್‌ ಪುತ್ತೂರು

ಗ್ಯಾಸ್, ಪೆಟ್ರೋಲ್‌, ಡೀಸೆಲ್‌ ದರ ಇಳಿಯುದ್ರ ಬಗ್ಗೆ ಮಾತೇ ಇಲ್ಲ. ನಮ್ಮ ದೇಶದಲ್ಲಿ ಈ ರೀತಿ ಇಂಧನ ಬೆಲೆ ಹೆಚ್ಚುತ್ತಾ ಹೋಗಲು ಮುಖ್ಯ ಕಾರಣ ಏನು? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಲೀಟರ್‌ಗೆ ಬರೀ 31 ರೂಪಾಯಿ ಇದ್ರೂ ನಮ್ಮ ದೇಶದಲ್ಲಿ ಯಾಕೆ ಇಂಧನ ಬೆಲೆ ಗಗನಕ್ಕೇರುತ್ತಿದೆ?  ನಮ್ಮ ಕೇಂದ್ರ ಹಣಕಾಸು ಸಚಿವರ ಪ್ರಕಾರ ಇದಕ್ಕೆಲ್ಲಾ ಹಿಂದಿನ ಯುಪಿಎ ಸರ್ಕಾರ ಮಾಡಿರುವ ಆಯಿಲ್ ಬಾಂಡ್ಗಳು ಕಾರಣವಂತೆ.

ಕಳೆದೊಂದು ವರ್ಷದಲ್ಲಿ ತೈಲ ದರ ಬದಲಾವಣೆ (ಬೆಂಗಳೂರು)

ಆಗಸ್ಟ್ 2020          ಆಗಸ್ಟ್ 2021

ಪೆಟ್ರೋಲ್           83.02 ರೂ              105.31 ರೂ

ಡೀಸೆಲ್               77.65 ರೂ                 94.91 ರೂ

ಗ್ಯಾಸ್ ಸಿಲಿಂಡರ್       597 ರೂ                862 ರೂ              

ವಾಣಿಜ್ಯ ಗ್ಯಾಸ್ ಸಿಲಿಂಡರ್           1100ರೂ          1760ರೂ

ಮಧ್ಯಪ್ರದೇಶದ ಶಾಸಕ ವಿಶ್ವಾಸ್ ಸಾರಂಗ್ ಅಂತೂ ತೈಲಬೆಲೆ ಏರಿರುವುದಕ್ಕೆ ನೆಹರೂ ಅವರ 1947ರ ಭಾಷಣದ ತಪ್ಪೇ ಕಾರಣ ಅಂತಲೂ ಹೇಳಿದ್ದಾರೆ. ಆದ್ರೆ ಕಾಂಗ್ರೆಸ್ ಸರಕಾರದ ಆಯಿಲ್ ಬಾಂಡ್ ಹಣ ಪಾವತಿ ಬಾಕಿ ಇರೋದ್ರ ಬಗ್ಗೆನೇ ಬಹಳ ಚರ್ಚೆಯಾಗಿದ್ದು. ನಿಜಕ್ಕೂ ಈ ಆಯಿಲ್ ಬಾಡ್ಗಳಂದ್ರೇನು? ಇವುಗಳಿಂದಲೇ ತೈಲಬೆಲೆ ಏರ್ತಿರೋದಾ? ಅಲ್ಲ ತನ್ನ ತಪ್ಪನ್ನ ಮುಚ್ಚೋದಕ್ಕೆ ಕೇಂದ್ರ ಸರ್ಕಾರ ಬೇರೆ ಬೇರೆ ಸಬೂಬುಗಳನ್ನ ಕೊಡ್ತಿದ್ಯಾ?

ದೇಶದಲ್ಲೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ಆದರೆ ಇದಕ್ಕೆಲ್ಲ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ಕಾರಣ ಅಂತ ಹೇಳಿ ಬಿಜೆಪಿ ಕೈತೊಳ್ಕೊಳ್ತಿದೆ. 2026ರವರೆಗೂ ಯುಪಿಎ ನೀಡಿರೋ ಆಯಿಲ್ ಬಾಂಡ್ ಗಳ ಹಣ ಪಾವತಿ ಮಾಡ್ಬೇಕಿರೋದ್ರಿಂದ ದರ ಹೆಚ್ಚಾಗಿದೆ ಅಂತಿದ್ದಾರೆ. 2005 ರಿಂದ 2010 ರವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ 100 ಡಾಲರ್ ಪ್ರತಿ ಬಾರಲ್ ಮೇಲೆ ಇದ್ದಾಗ್ಲೂ, ಜನರ ಜೇಬು ಸುಡಬಾರ್ದು ಅಂತ ಆಗಿನ ಸರ್ಕಾರ ತೈಲ ಕಂಪನಿಗಳೊಂದಿಗೆ ಒಡಬಂಡಿಕೆಯೊಂದನ್ನ ಮಾಡಿತ್ತು.

2005 ರಿಂದ 10ರವರೆಗೆ ಕೇಂದ್ರ ಸರಕಾರ 1.40 ಲಕ್ಷ ಕೋಟಿಯಷ್ಟು ಮೊತ್ತದ ಆಯಿಲ್ ಬಾಂಡುಗಳನ್ನು ಕಂತಿನ ಮೇಲೆ ಬಡ್ಡಿಯೊಂದಿಗೆ ಹಣವನ್ನು ಮರುಪಾವತಿಸುವ ಬಾಂಡನ್ನು ತೈಲ ಕಂಪನಿಗಳಿಗೆ ನೀಡಿತ್ತು. ಸುಲಭವಾಗಿ ವಿವರಿಸುವುದಾದರೆ ನಮಗಿಷ್ಟದ ವಸ್ತು ಖರೀದಿಸಲು ಬಡ್ಡಿ ಸಮೇತ EMI ಪಾವತಿಸುವ ರೀತಿನೇ ಇದು ಕೂಡ. ಇದ್ರಿಂದ ದೇಶದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆ ಎಗ್ರಿಮೆಂಟ್ ನಲ್ಲಿ 2021ರಿಂದ 2026ರವರೆಗೆ ಹಣ ಬಡ್ಡಿ ಸಮೇತ ಪಾವತಿಯಾಗುವಂತೆ ಭರವೆಸೆಯೂ ನೀಡಿತ್ತು. 2010ರವೇಳೆಗೆ ಇದರಲ್ಲಿ ಒಟ್ಟು 10 ಸಾವಿರ ಕೋಟಿ ವಾಪಾಸಾಗಿ ಆಗಿತ್ತು.

  • 2021ರಲ್ಲಿ ತಲಾ ಐದು ಸಾವಿರ ಕೋಟಿಗಳಂತೆ 2 ಕಂತಲ್ಲಿ ಹಣ ಪಾವತಿಸಬೇಕು.
  • 2023ರಲ್ಲಿ 2 ಕಂತುಗಲಲ್ಲಿ ಕ್ರಮವಾಗಿ 22 ಸಾವಿರ ಕೋಟಿ ಹಾಗೂ 4150 ಕೋಟಿ ರೂಪಾಯಿಗಳು,
  • 2024ರಲ್ಲಿ ಮೂರು ಕಂತುಗಳಿದ್ದು, 5000 ಕೋಟಿ, 10,306 ಕೋಟಿ ಹಾಗೂ 22 ಸಾವಿರ ಕೋಟಿ ರೂಪಾಯಿಗಳನ್ನು ಪಾವತಿಸಬೇಕಿದೆ.
  • 2025ರಲ್ಲಿ ಕೂಡ ಎರಡು ಕಂತುಗಳ ಮೂಲಕ ಹಣ ಕಟ್ಟಬೇಕಿದ್ದು, 11,257 ಕೋಟಿ ಮತ್ತು 9,297 ಕೋಟಿ ಕೊಡಬೇಕಿದೆ.
  • 2026ರಲ್ಲಿ 4,971 ಕೋಟಿ, 21,942 ಕೋಟಿ ಮತ್ತು 10 ಸಾವಿರ ಕೋಟಿ ಕೊಡಬೇಕು.

ಆದ್ರೆ ಭಾರತದಲ್ಲಿ ಪ್ರಸ್ತುತ ಪೆಟ್ರೋಲ್ ನ 58% ಮತ್ತು ಡೀಸೆಲ್ ನ 52% ಕೇಂದ್ರಕ್ಕೆ ತೆರಿಗೆ ಸಂದಾಯವಾಗ್ತಾ ಇದೆ. ಈಗಿರೋ ದರದಲ್ಲಿ ಬರಿ ಒಂದು ವರ್ಷದ ಟ್ಯಾಕ್ಸ್ ಕಲೆಕ್ಷನ್ನೇ ಬರೋಬ್ಬರಿ 3 ಲಕ್ಷ ಕೋಟಿ ಆಗುತ್ತೆ.

ಒಂದು ವರ್ಷಕ್ಕೆ 3ಲಕ್ಷ ಕೋಟಿ ಕಲೆಕ್ಷನ್ ಮಾದುವ ಕೇಂದ್ರ, ಕೆಲವು ಸಾವಿರ ಕೋಟಿಗಳ ಕಂತನ್ನು ಪಾವತಿಸೋದು ಕಷ್ಟಾನಾ? ಉಳಿದ ಹಣ ಏನಾಗುತ್ತೆ? ಮಾತಿಗೆ ನೂರು ಬಾರಿ ಕಾಂಗ್ರೆಸ್ ನ ದೂರ್ತಿರುವ  ಕೇಂದ್ರ ಸರ್ಕಾರ ಯಾಕಿದ್ರ ಬಗ್ಗೆ ಮಾತಾಡ್ತಿಲ್ವೋ ಗೊತ್ತಿಲ್ಲ. ವಿರೋಧ ಪಕ್ಷಗಳಂತೂ ಜನಸಾಮಾನ್ಯರ ಕೂಗಿಗೆ ದನಿಯಾಗೋ ಗೋಜಿಗೇ ಹೋಗ್ತಿಲ್ಲ. ಬೆಲೆಯೇರಿಕೆ ಜವಾಬ್ದಾರಿಯಿಂದ ಜನರ ದಾರಿ ತಪ್ಪಿಸಿ, ಮೂರ್ಖರನ್ನಗಿಸಿ ನುಣುಚಿಕೊಳ್ತಿರೋರನ್ನ ಜನನೂ ಪ್ರಶ್ನೆ ಮಾಡ್ತಿಲ್ಲ.

Related News

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 27, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023
ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ
Vijaya Time

ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ

March 23, 2023
ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಸಿಕ್ಕಿದ್ದು ನಿರ್ಮಾ ಸೋಪು!
Vijaya Time

ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಸಿಕ್ಕಿದ್ದು ನಿರ್ಮಾ ಸೋಪು!

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.