- ನಿವೃತ್ತ ಐಪಿಎಸ್ ಅಧಿಕಾರಿ (IPS officer) ಓಂಪ್ರಕಾಶ್ ಅವರ ಬರ್ಬರ ಹ*
- ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹ* ಮಾಡಿರುವ ಶಂಕೆ (Wife responsible for the crime)
- ಗನ್ ತೋರಿಸಿ ಬೆದರಿಸುತ್ತಿದ್ದ ಓಂಪ್ರಕಾಶ್, 10 ಬಾರಿ ಚೂರಿಯಿಂದ ಇರಿದ ಪತ್ನಿ
Bengaluru : ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ (HSR Layout) ನಿನ್ನೆ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದೆ.ದಶಕಗಳ ಕಾಲ ಖಾಕಿ ಕೋಟೆಯನ್ನು ಆಳಿದಂತಹ ಓಂ ಪ್ರಕಾಶ್ (Om Prakash) ಅವರು ದುರಂತ ಅಂತ್ಯ ಕಂಡಿದ್ದಾರೆ. ಓ ಪ್ರಕಾಶ್ ಅವರ ಕೊ* ಸುದ್ದಿ ಹಬ್ಬುತ್ತಿದ್ದಂತೆ ಯಾರು ಕೊ* ಮಾಡಿದ್ರು, ಯಾತಕ್ಕಾಗಿ ಮರ್ಡರ್ ನಡೆಯಿತು ಅಂತ ಖಾಕಿಯೂ ಕೂಡ ತನಿಖೆಯನ್ನು ಶುರುಮಾಡಿತ್ತು. ಕೊ*ಯ ಹಿಂದಿನ ಸ್ಫೋಟಕ ಸತ್ಯ ಇದೀಗ ಬಹಿರಂಗವಾಗಿದೆ (Revealed) .
ಕೈ ಹಿಡಿದ ಮಡದಿಯೇ ಗಂಡನನ್ನು ಬರ್ಬರವಾಗಿ ಕೊ* ಮಾಡಿದ್ದಾಳೆ, ಚಾಕುವಿನಿಂದ ಹತ್ತಾರು ಬಾರಿ ಇರಿದು, ಮನಸೋ ಇಚ್ಚೆ ಕೊ* ಮಾಡಿದ್ದಾಳೆ.ಇದಕ್ಕೆ ಪುತ್ರಿಯೂ ಸಾಥ್ (Daughter also accompanied) ಕೊಟ್ಟಿದ್ದಾಳೆ.ಸದ್ಯ ಇಬ್ಬರು ಪೊಲೀಸ್ ವಶದಲ್ಲಿದ್ದಾರೆ. ವಿಚಾರಣೆ ವೇಳೆ (During the trial) ಸ್ಫೋಟಕ ಸತ್ಯವನ್ನ ಬಾಯ್ಬಿಟ್ಟಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ (St. John’s Hospital) ರವಾನಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ತನಿಖೆ (Investigation) ನಡೆಸುತ್ತಿದ್ದಾರೆ.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (Om Prakash) ಅವರಿಗೆ 68 ವರ್ಷ ವಯಸ್ಸಾಗಿತ್ತು. 1981ನೇ ಬ್ಯಾಚ್ನ ಐಪಿಎಸ್ (IPS) ಅಧಿಕಾರಿ ಓಂ ಪ್ರಕಾಶ್ ಅವರು ರಾಜ್ಯದ 38ನೇ ಡಿಜಿ ಮತ್ತು ಐಜಿಪಿಯಾಗಿದ್ದರು (DG and IGP.) . 2015ರ ಅವಧಿಯಲ್ಲಿ ಡಿಜಿ ಮತ್ತು ಐಜಿಪಿಯಾಗಿದ್ದ ಓಂ ಪ್ರಕಾಶ್ ಅವರು ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ವಾಸವಿದ್ದರು. ಕೌಟುಂಬಿಕ ಕಲಹ (Family conflict) ಹಾಗೂ ಆಸ್ತಿ ವಿಚಾರಕ್ಕೆ ಓಂ ಪ್ರಕಾಶ್ ದಂಪತಿ ನಡುವೆ ಕೆಲ ವರ್ಷಗಳಿಂದ ವೈಮನಸ್ಸು ಮೂಡಿತ್ತು (Hostility) , ಇದೇ ವಿಚಾರವಾಗಿ ಭಾನುವಾರ ಕೂಡ ದಂಪತಿ ನಡುವೆ ಜೋರು ಜಗಳವಾಗಿದೆ.
ಅದು ವಿಕೋಪಕ್ಕೆ ಹೋದಾಗ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹೌದು.2017ರಲ್ಲಿ ವಯೋನಿವೃತ್ತಿ (Retirement) ಹೊಂದಿದ್ದ ಓಂಪ್ರಕಾಶ್ ಬೆಂಗಳೂರು, ನಗರದ ಹೊರವಲಯ ಹಾಗೂ ನೆರೆ ಜಿಲ್ಲೆಗಳ (Neighboring districts) ಗಡಿ ಭಾಗದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ಪತ್ನಿ, ಪುತ್ರ ಪುತ್ರಿಯ (Wife, son and daughter) ಹೆಸರಿನಲ್ಲೂ ಹತ್ತಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರಿಸಿದ್ದಾರೆ.

ಇತ್ತೀಚೆಗೆ ದಾಂಡೇಲಿಯಲ್ಲಿದ್ದ (Dandeli) ಕೋಟ್ಯಂತರ ಮೌಲ್ಯದ ಆಸ್ತಿಯನ್ನು ತಮ್ಮ ತಂಗಿಯರ ಹೆಸರಿನಲ್ಲಿ ನೋಂದಾಯಿಸಿದ್ದರು. ಅದಕ್ಕೆ ಪಲ್ಲವಿ ಆಕ್ಷೇಪ (Pallavi Objection) ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಕೆಲ ತಿಂಗಳಿಂದ ದಂಪತಿ ನಡುವೆ ಜಗಳ ನಡೆದು ವಿಕೋಪಕ್ಕೂ ಹೋಗಿತ್ತು. ಇದೇ ವಿಚಾರಕ್ಕೂ ಹ*ನಡೆದಿದೆ ಎನ್ನಲಾಗಿದೆ.
ಓಂ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ (Two children) . ಸದ್ಯ ಅವರು ತಮ್ಮ ಪತ್ನಿ ಪಲ್ಲವಿ ಜತೆ ವಾಸಿಸುತ್ತಿದ್ದರು. ಕೆಲವು ದಿನಗಳಿಂದ ಗಂಡ ಹೆಂಡತಿಯ (Husband wife) ನಡುವೆ ಮನಸ್ತಾಪವಿತ್ತು ಎನ್ನಲಾಗಿದೆ.ಅಲ್ಲದೆ ಪತ್ನಿ ಪಲ್ಲವಿ ಕಳೆದ 12 ವರ್ಷಗಳಿಂದ ಸ್ಕಿಜೋಫ್ರೇನಿಯಾ (Schizophrenia) ಅಂದ್ರೆ ಭ್ರಮಾದೀನತೆ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಇದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು (Receiving treatment) ಎಂದು ಹೇಳಲಾಗುತ್ತಿದೆ.
ವೈಯಕ್ತಿಕ ವಿಚಾರಗಳಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಚಾಕುವಿನಿಂದ ಇರಿದು ಪತ್ನಿಯೇ ಕೊ* ಮಾಡಿದ್ದಾರೆ ಎನ್ನಲಾಗಿದೆ. ಹಲವಾರು ಕಡೆಗಳಲ್ಲಿ ಆಸ್ತಿಯನ್ನು ಹೊಂದದ್ದರೂ ಸಹ ಓಂ ಪ್ರಕಾಶ್ ಕುಟುಂಬಕ್ಕೆ ಹಣಕಾಸಿನ ಸಮಸ್ಯೆ (Financial problem) ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಡಿಜಿ ಮತ್ತು ಐಜಿಪಿ (DG and IGP) ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದಕ್ಕೆ ಸಂಬಂಧಿಸಿ ಆಗಾಗ್ಗೆ ಮನೆಯಲ್ಲಿ ಜಗಳ ಕೂಡ ನಡೆಯುತ್ತಿತ್ತು.
ಇದನ್ನು ಓದಿ : http://ಬ್ಯಾಂಕ್ ಆಫ್ ಬರೋಡಾದಲ್ಲಿ 146 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಆಹ್ವಾನ
ಇದೇ ಜಗಳ ಕೊ*ಗೆ ಕಾರಣವಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಮತ್ತೊಂದೆಡೆ, ಓಂ ಪ್ರಕಾಶ್ ಅವರು ಸಂಪಾದನೆ ಮಾಡಿದ್ದ ಆಸ್ತಿಯನ್ನು ಹೆಂಡತಿಗೆ ಕೊಡದೇ ನೇರವಾಗಿ ಮಗನ ಹೆಸರಿಗೆ ಬರೆದಿದ್ದರು. ಇದೇ ಕಾರಣಕ್ಕೆ ಹೆಂಡತಿ (Wife for reason) ಕೋಪಗೊಂಡು ಕೊಲೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ತನಿಖೆಯ ನಂತರವೇ ಸತ್ಯಾಂಶ (Wife responsible for the crime) ಹೊರಬರಬೇಕಿದೆ.ಹಿರಿಯ ಪೊಲೀಸ್ ಅಧಿಕಾರಿಗಳು (Senior police officers) ಸ್ಥಳಕ್ಕೆ ದೌಡಾಯಿಸಿದ್ದು, ಓಂ ಪ್ರಕಾಶ್ ಅವರ ಪತ್ನಿಯನ್ನು ಹಾಗೂ ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.