ಉಡುಪಿ, ಆ. 13: ವಿಶ್ವ ಅಂಗಾಂಗ ದಿನದ ಪ್ರಯುಕ್ತ ಸಿ.ಎಂ. ಬಸವರಾಜ ಬೊಮ್ಮಾಯಿ ಅವರು ಅಂಗಾಗ ದಾನಕ್ಕೆ ನಿರ್ಧರಿಸಿದ್ದು, ಎಲ್ಲರೂ ಅಂಗಾಂಗ ದಾನ ಮಾಡುವಂತೆ ಕರೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಅವರು ಈ ಬಗ್ಗೆ ಮಾತನಾಡಿ ಇಂದು ವಿಶ್ವ ಅಂಗಾಂಗ ದಿನವಾಗಿದ್ದು ಅಂಗಾಂಗ ದಾನ ಮಾಡುವುದರಿಂದ ಜೀವ ಉಳಿಸಬಹುದು. ಕಿಡ್ನಿ, ಕಣ್ಣು, ಹೃದಯ ಹೀಗೆ ಇನ್ನೊಬ್ಬರಿಗೆ ಉಪಯೋಗಕ್ಕೆ ಬರುವ ದೇಹದ ಅಂಗ ದಾನ ಮಾಡುವುದರಿಂದ ಇನ್ನೊಬ್ಬರ ಜೀವ ಕೂಡ ಉಳಿಸಬಹುದು. ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕುತ್ತೇನೆ. ಎಲ್ಲರೂ ಕೂಡ ಅಂಗಾಂಗ ದಾನ ಮಾಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಕೊರೊನಾ ನಿಯಂತ್ರಣ ಕುರಿತು ಮಾತನಾಡಿದ ಅವರು ಈ ಬಗ್ಗೆ ತಜ್ಙರರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.