ಕಟಕ ರಾಶಿಯವರ ಮೇಲೆ ಗುರುವಿನ ಕೃಪೆ ಇದೆ.

ಮಕರ ರಾಶಿಯವರೇ ಮಕ್ಕಳ ಅಭ್ಯುದಯದ ವಿಚಾರದಲ್ಲಿನಿಮಗೆ ತಿಳಿಯದ ರೀತಿಯಲ್ಲಿಸೂಕ್ತ ದಾರಿಯೊಂದರ ನಿರ್ಮಾಣ ಸಾಧ್ಯವಿದೆ. ನಿಮ್ಮ ಸ್ನೇಹಿತರು ಈ ಬಗ್ಗೆ ಸಹಕಾರ ನೀಡುವರು. ಹಣಕಾಸಿನ ತೊಂದರೆ ಕಡಿಮೆ ಆಗಿ ನಿಮ್ಮ ಮನೋಕಾರ್ಯಗಳು ಕೈಗೂಡುವುವು.

ವೃಷಭ:- ಸುಖ ಎಂದರೆ ಎಲ್ಲರಿಗೂ ಒಂದೇ ತೆರನಾಗಿ ಇರುವ ಸಾಧ್ಯತೆ ಇರುವುದಿಲ್ಲ. ಪ್ರತಿ ವ್ಯಕ್ತಿಯ ಸುಖದ ಅಭಿಲಾಷೆ ಬೇರೆ ಬೇರೆ ಇರುತ್ತದೆ. ಹಾಗಾಗಿ ಇನ್ನೊಬ್ಬರ ಇಷ್ಟಾನಿಷ್ಟಗಳ ಬಗ್ಗೆ ವೃಥಾ ಚಿಂತನೆ ಮಾಡುವುದರಿಂದ ಉಪಯೋಗವಿಲ್ಲ. 

ಮಿಥುನ:- ಮುಖ್ಯವಾದ ವಿಚಾರವಾಗಿ ಪರದಾಡುತ್ತಿರುವಿರಿ. ಗುರುವಿನ ಕೃಪೆಯಿಂದ ಸ್ವಲ್ಪಮಟ್ಟಿನ ಅನುಕೂಲವಾಗುವುದು. ಜನ್ಮಸ್ಥ ರಾಹು ಮಾನಸಿಕ ಒತ್ತಡ, ನೆನಪಿನ ಶಕ್ತಿ ಹರಣ ಮಾಡುವನು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. 

ಕಟಕ:- ಮನೆಯಲ್ಲಿತಾಯಿ ಆರೋಗ್ಯದ ಕಡೆ ಗಮನ ಹರಿಸಿ. ಮಾತಾ ದುರ್ಗಾದೇವಿಯನ್ನು ಅನನ್ಯ ಭಕ್ತಿಯಿಂದ ಭಜಿಸಿ. ಇದರಿಂದ ಅವಶ್ಯಕವಾದ ಸಾಮರ್ಥ್ಯ ನಿಮ್ಮದಾಗುವುದು. ಗುರುವಿನ ಕೃಪೆ ಇದ್ದು ಮನೆಗೆ ನೂತನ ವ್ಯಕ್ತಿಯ ಪ್ರವೇಶವಾಗುವುದು. 

ಸಿಂಹ:- ನಿಮ್ಮ ಒಂದಷ್ಟು ಪ್ರಯತ್ನಗಳ ದಾರಿಯಲ್ಲಿಹಣದ ಬಳಕೆ ಮಾಡಿ. ಆದರೆ ಖರ್ಚು ವೆಚ್ಚಗಳ ಮೇಲೆ ಕಡಿವಾಣ ಹಾಕುವುದು ಒಳ್ಳೆಯದು. ಸಮಯಕ್ಕೆ ಬೇಕು ಎಂದರೆ ಯಾವ ವ್ಯಕ್ತಿಯು ಹಣ ಸಹಾಯ ಮಾಡುವುದಿಲ್ಲ. 

ಕನ್ಯಾ:- ಸದ್ಯದ ಪರಿಸ್ಥಿತಿಯಲ್ಲಿಕವಲು ದಾರಿಯಲ್ಲಿನ ಪ್ರಯಾಣಿಕನ ಸ್ಥಿತಿಯಂತೆ ಆಗಿದೆ. ಯಾವ ದಿಕ್ಕಿನಲ್ಲಿಹೋದರೆ ನನಗೆ ಹೆಚ್ಚು ಅನುಕೂಲವಾಗಲಿದೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಗುರುವಿನ ಆಶೀರ್ವಾದ ಪಡೆದು ಕಾರ್ಯ ಪ್ರವೃತ್ತರಾಗಿ. 

ತುಲಾ:- ಮಕ್ಕಳ ಬಗೆಗಿನ ವಿಚಾರದಲ್ಲಿಜಾಗರೂಕರಾಗಿರಿ. ದಿಢೀರನೆ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವ ಸಾಧ್ಯತೆ ಇದೆ. ಮನೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. 

ವೃಶ್ಚಿಕ:- ಸದ್ಯದ ಪರಿಸ್ಥಿತಿಯಲ್ಲಿಗ್ರಹಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳುವ ಸಾಧ್ಯತೆ ಇದೆ. ಆದರೆ ನಿಮ್ಮ ಆಧ್ಯಾತ್ಮಿಕ ದೃಷ್ಟಿಯಿಂದಾಗಿ ಕೆಲ ಗುರು ಹಿರಿಯರು ನಿಮಗೆ ಸಹಾಯ ಮಾಡುವರು. ಆರ್ಥಿಕ ಸ್ಥಿತಿ ಸುಧಾರಣೆ ಆಗುವುದು. 

ಧನುಸ್ಸು:- ಶನಿಮಹಾರಾಜರ ದೆಸೆಯಿಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ತೋರುವುದು. ಆಂಜನೇಯ ಸ್ವಾಮಿಯ ಪ್ರಾರ್ಥನೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣದಿಂದ ಒಳಿತಾಗುವುದು. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡುವುದು ಒಳಿತು. 

ಮಕರ:- ಮಕ್ಕಳ ಅಭ್ಯುದಯದ ವಿಚಾರದಲ್ಲಿನಿಮಗೆ ತಿಳಿಯದ ರೀತಿಯಲ್ಲಿಸೂಕ್ತ ದಾರಿಯೊಂದರ ನಿರ್ಮಾಣ ಸಾಧ್ಯವಿದೆ. ನಿಮ್ಮ ಸ್ನೇಹಿತರು ಈ ಬಗ್ಗೆ ಸಹಕಾರ ನೀಡುವರು. ಹಣಕಾಸಿನ ತೊಂದರೆ ಕಡಿಮೆ ಆಗಿ ನಿಮ್ಮ ಮನೋಕಾರ್ಯಗಳು ಕೈಗೂಡುವುವು. 

ಕುಂಭ:- ತಾವೇ ಬುದ್ಧಿವಂತರು ಎಂದು ತಿಳಿದುಕೊಂಡು ಬರುವ ಜನರ ಜೊತೆ ಚರ್ಚೆಗೆ ಇಳಿಯದಿರಿ. ನಿಮ್ಮ ಮೇಧಾವಿತನ ಕಂಡು ಅವರೇ ಸುಮ್ಮನಾಗುವರು. ನಿಮ್ಮ ವರ್ಚಸ್ಸು ಇನ್ನೂ ಹೆಚ್ಚಾಗುವುದು. 

ಮೀನ:- ಎಲ್ಲೋ ಒಂದು ಕಡೆ ನಿಮ್ಮ ಮುಗ್ಧತೆಯನ್ನು ಅನ್ಯರು ದುರುಪಯೋಗ ಪಡಿಸಿಕೊಳ್ಳುತ್ತಿರುವರು ಎಂಬ ಭಾವನೆ ಬರುತ್ತದೆ. ಆದರೆ ಅದನ್ನು ಮಟ್ಟಹಾಕಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಭಗವಂತನ ದಯೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಿ ನೀವು ಗೆಲುವು ಸಾಧಿಸುವಿರಿ

Exit mobile version