ಸ್ಯಾಂಡಲ್ವುಡ್ನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿರುವ ನಟನೆಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈಗ ಪಾಕಿಸ್ತಾನದಲ್ಲೂ ಅವರ ಕಾರುಬಾರು ಆರಂಭವಾಗಿದೆ ಎಂದು ಹೇಳಬಹುದು. 2015ರಲ್ಲಿ ರಿಲೀಸ್ ಆಗಿದ್ದ ಐರಾವತ ಸಿನಿಮಾ ಈಗ ಪಾಕಿಸ್ತಾನದಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ರಿಲೀಸ್ ಬಗ್ಗೆ ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟಪಡಿಸಿದ್ದಾರೆ.
‘ಐರಾವತ’ ಸಿನಿಮಾ ಪಾಕಿಸ್ತಾನದಲ್ಲಿ ‘ಗ್ಯಾಂಗ್ಸ್ಟರ್’ ಸಿನಿಮಾ ಎಂಬ ಶೀರ್ಷಿಕೆ ಪಡೆದು ರಿಲೀಸ್ ಆಗಿದೆ. ದೊಡ್ಡ ಮಟ್ಟದಲ್ಲಿ ಆದಾಯ ಬಂದಂತಹ ಸಿನಿಮಾ ಇದು. ಯೂಟ್ಯೂಬ್ನಲ್ಲಿ ಕೂಡ ‘ಐರಾವತ’ಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಹಿಂದಿಗೆ ಡಬ್ ಆದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಯು ಈ ಚಿತ್ರಕ್ಕಿದೆ.
ದರ್ಶನ್ ಅವರ ಹುಟ್ಟುಹಬ್ಬದ ದಿನ ಸಾವಿರಾರು ಸಂಖ್ಯೆಯಲ್ಲಿ ಅವರ ಮನೆ ಮುಂದೆ ಜನರು ಸೇರುತ್ತಾರೆ. ಈ ವಿಡಿಯೋವನ್ನು ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ನೋಡಿ ಆಶ್ಚರ್ಯಪಟ್ಟಿದ್ದರಂತೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿದ್ದರು. ಪ್ರಾದೇಶಿಕ ಭಾಷೆಗಳು ಸಿನಿಮಾ ವಿಚಾರದಲ್ಲಿ ಎಷ್ಟು ಸುಧಾರಿಸಿವೆ, ಇದರ ರೀಚ್ ಎಷ್ಟಿದೆ ಎಂಬುದು ಈ ವಿಡಿಯೋ ನೋಡಿ ಅರ್ಥವಾಯಿತು ಎಂದು ರೋಹಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.