ಅಮೂಲ್ಯ ಲಿಯೋನಾ ಜಾಮೀನು ನಿರಾಕರಿಸಿದ ನ್ಯಾಯಲಯ

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಸಂಸದ ಅಸಾದುದ್ದಿನ್ ಓವೈಸಿ ಭಾಗಿಯಾಗಿದ್ದ ಸಮಾವೇಶದಲ್ಲಿ ಅಮೂಲ್ಯಾ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿ  ಜೈಲು ಪಾಲಾಗಿದ್ದ  ಅಮೂಲ್ಯ ಲಿಯೋನಾಗೆ ನ್ಯಾಯಾಲಯ​ ಇಂದು ಜಾಮೀನು ನಿರಾಕರಿಸಿದೆ . ಬ್ರುವರಿ 20ರಂದು  ಬೆಂಗಳೂರಿನಲ್ಲಿ ನಡೆದಿದ್ದ ಸಮಾವೇಶದಲ್ಲಿ  ಅಮೂಲ್ಯ ಪಾಕಿಸ್ತಾನದ ಪರವಾಗಿ ಕೂಗಿ ಕೆಂಗಣ್ಣಿಗೆ ಗುರಿಯಾಗಿದ್ದಳು.

ಜಾಮೀನು ತಿರಸ್ಕರಿಸಿಸಿರೋ ನ್ಯಾಯಲಯ ದೇಶದ್ರೋಹದ ಕೆಲಸ ಮಾಡಿರುವ ಅಮೂಲ್ಯನಿಗೆ ಜಾಮೀನು ಸಿಕ್ಕರೆ ಆಕೆ ಬೇರೆ ಅಪರಾಧಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ, ಮಾತ್ರವಲ್ಲದೇ ಆಕೆ ತಲೆಮರೆಸಿಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂಬ ವಾದವನ್ನು ಕೋರ್ಟ್​ ಮಾನ್ಯ ಮಾಡಿದೆ.ಈ ಹಿನ್ನಲೆ ಮತ್ತೆ ಅಮೂಲ್ಯನಿಗೆ ಜೈಲೇಗತಿಯಂತಾಗಿದೆ.

ಫೆಬ್ರುವರಿಯಲ್ಲಿ ನಡೆದ ಸಮಾವೇಶದಲ್ಲಿ ೨೦ ವರ್ಷದ  ಅಮೂಲ್ಯಾ, ಪಾಕಿಸ್ತಾನ್ ಜಿಂದಾಬಾದ್ ಎಂದ ಕೆಲವೇ ಕ್ಷಣಗಳಲ್ಲಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಬದಲಾಯಿಸಿದ್ದಳು. ಆಕೆಯ ಕೈಲಿದ್ದ ಮೈಕನ್ನು ಕಸಿದುಕೊಳ್ಳಲಾಗಿತ್ತು. ಈಕೆಯ ವಿರುದ್ಧ ಬಲವಾದ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ, ನಾನು ಹೇಳಲು ಹೊರಟಿದ್ದೇ ಬೇರೆ. ಅದನ್ನು ಹೇಳಲು ನನಗೆ ಅವಕಾಶ ಕೊಡಲಿಲ್ಲ, ಮೈಕ್​ ಕಿತ್ತುಕೊಂಡರು ಎಂದು ಹೇಳಿದ್ದಳು.

Exit mobile version