ಇಂದಿನಿಂದ ಅಂತರ್ ಜಿಲ್ಲಾ ರೈಲು ಸಂಚಾರ ಆರಂಭ

ಕೊರೋನಾ ವೈರಸ್ ಇಡೀ ವಿಶ್ವವನ್ನೇ ತಲ್ಲಗೊಳಿಸಿದ್ದು ಮಾಚರ್್ 23 ಕ್ಕೆ ದೇಶ ಸಂಪೂರ್ಣ ಲಾಕ್ಡೌನ್ಗೊಂಡಿತ್ತು. ಇನ್ನು ಮೇ 31ಕ್ಕೆ ಲಾಕ್ಡೌನ್ ಮುಗಿಯಲಿದ್ದು 18ರಿಂದ ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿತ್ತು.. ಆದ್ರೂ ಸಾರಿಗೆ ರೈಲು ಇದಕ್ಕೆ ಅವಕಾಶವನ್ನು ಸಕರ್ಾರ ಕಲ್ಪಿಸಿಕೊಟ್ಟಿರಲಿಲ್ಲ.. ಮೇ 18ರಂದು ರಾಜ್ಯದ ಮುಖ್ಯಮಂತ್ರಿ ಲಾಕ್ಡೌನ್ ಇದ್ರೂ ಅಂತರ್ ಜಿಲ್ಲಾ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ರು . ಅದರಂತೆ ಇಂದು ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಇಂದಿನಿಂದ ಅಂತರ್ಜಿಲ್ಲಾ ಪ್ರಯಾಣಿಕರ ರೈಲು ಸೇವೆ ಆರಂಭಗೊಂಡಿದೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಬೆಳಗಾವಿಗೆ ಮೊದಲ ರೈಲು ಪ್ರಯಾಣ ಆರಂಭಗೊಂಡಿದೆ.ಪ್ರಾರಂಭಿಕ ಹಂತವಾಗಿರೋ ಹಿನ್ನಲೆ ಕೆಲ ನಿದರ್ಿಷ್ಟ ಮಾರ್ಗಗಳಲ್ಲಿ ರೈಲುನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.ಅದೇ ರೀತಿನ ಬೆಂಗಳೂರಿನಿಂದ ಮೈಸೂರಿಗೆ ಹಾಗೂ ಬೆಂಗಳೂರಿನಿಂದ ಬೆಳಗಾವಿಗೆ ಎರಡೆರಡು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಅಂದಹಾಗೆ ರೈಲು ಹಾಗೂ ರೈಲ್ವೆ ಸ್ಟೇಷನ್ನಲ್ಲಿ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಪ್ರಯಾಣಿಕರಿಂದ ಸಾಮಾಜಿಕ ಅಂತರಪಾಲನೆ, ಥರ್ಮಲ್ ಸ್ಕ್ರೀನಿಂಗ್ ಮಾಡಿದ ಬಳಿಕವಷ್ಟೇ ಒಳಗೆ ಬಿಡಲಾಗುತ್ತಿದೆ.ಇನ್ನು ಬೆಳಗಾವಿ ಬಿಟ್ಟಿದ್ದ ರೈಲಿನಲ್ಲಿ 14 ಬೋಗಿಗಳನ್ನು ಮಾತ್ರ ಬಳಸಲಾಗಿತ್ತು

Exit mobile version