ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂಬರ್ 28,2019- ಶನಿವಾರ

ಮೇಷ:- ಅಪರಿಚಿತರನ್ನು ಬೇಗನೆ ನಂಬಿ ಹಣ ಕಳೆದುಕೊಳ್ಳಬೇಡಿ. ಬೆಡಗಿನ ಅಥವಾ ನಯವಂಚಕ ಮಾತುಗಳ ಮೂಲಕ ಮೋಸಹೋಗುವ ಸಾಧ್ಯತೆ ಇದೆ. ಮನೋಜಯವನ್ನು ಹೊಂದಿದ ಆಂಜನೇಯ ಸ್ವಾಮಿಯನ್ನು ಮನಸಾ ಸ್ಮರಿಸಿ.

ವೃಷಭ:- ನಿಮ್ಮದೇ ಆದ ಕೆಲ ದೌರ್ಬಲ್ಯಗಳನ್ನು ಬಿಟ್ಟುಬಿಡಿ. ಹತ್ತಾರು ಜನರೊಡನೆ ಬೆರೆಯುವ ಅಭ್ಯಾಸವನ್ನು ಮಾಡಿಕೊಂಡಲ್ಲಿ ಹೊಸ ಚೈತನ್ಯದಿಂದ ಕಂಗೊಳಿಸುವಿರಿ. ಮತ್ತು ಹಿಡಿದ ಕಾರ್ಯದಲ್ಲಿ ಯಶಸ್ಸು ಸಂಪಾದಿಸುವಿರಿ.

ಮಿಥುನ:- ನಗುವು ಎಲ್ಲರನ್ನು ಆಕರ್ಷಿಸುತ್ತದೆ. ಹಾಗಾಗಿ ಮನಸ್ಸಿನಲ್ಲಿ ಸಾವಿರ ನೋವಿದ್ದರೂ ನಗುವಿನ ಮುಖವಾಡವನ್ನು ಧರಿಸಿ. ಹೊಸ ಕೆಲಸದಲ್ಲಿನ ಹೊಸತನದ ಜವಾಬ್ದಾರಿಯನ್ನು ನಿರ್ವಹಿಸಲು ಅದು ಅನುಕೂಲ ಮಾಡಿಕೊಡುವುದು. ದುರ್ಗಾ ಜಪವನ್ನು ತಪ್ಪದೇ ಮಾಡಿ.

ಕಟಕ:– ಸಾಲ ಕೇಳುವವರು ನಾಜೂಕಿನ ಮಾತಿನ ಮೂಲಕ ನಿಮ್ಮ ಸಮೀಪಕ್ಕೆ ಬರಲಿದ್ದಾರೆ. ಅವರನ್ನು ಅಷ್ಟೇ ಚಾಣಾಕ್ಷತನದಿಂದ ಹೊರಹಾಕಿ. ದೈವವೂ ನಿಮಗೆ ಸಹಾಯ ಮಾಡುವುದು. ಸಂಗಾತಿಯ ಸಂಗಡ ಮನಸ್ತಾಪ ಆಗುವ ಸಾಧ್ಯತೆ ಇದೆ.

ಸಿಂಹ:- ಸಕಲ ದುರಿತಗಳನ್ನು ನಿವಾರಿಸಿ ಮನಸ್ಸಿಗೆ ಸಂತೋಷವನ್ನು ಉಂಟುಮಾಡುವ ಶಿವನನ್ನು ಭಕ್ತಿಯಿಂದ ಆರಾಧಿಸುವುದು ಒಳ್ಳೆಯದು. ಸಂಜೆ ಬಡವರಿಗೆ ಆಹಾರವನ್ನು ನೀಡಿ. ಆಂಜನೇಯ ಸ್ವಾಮಿಯ ದರ್ಶನ ಪಡೆದು ಬನ್ನಿ.

ಕನ್ಯಾ:- ಬಂಧುಗಳಲ್ಲಿಒಬ್ಬರು ನಿಮ್ಮ ಪಾಲಿಗೆ ಹೊಸ ರೀತಿಯ ಬೆಂಬಲವನ್ನು ನೀಡಲಿದ್ದಾರೆ. ನೀವು ಬೇಡವೇ ಬೇಡ ಎಂದು ಹೇಳುವ ವೃತ್ತಿಯನ್ನು ಅನಿವಾರ್ಯವಾಗಿ ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಇದೆ. ಆದರೆ ಪ್ರತಿಫಲವನ್ನು ಅಪೇಕ್ಷಿಸುವಂತಿಲ್ಲ.

ತುಲಾ:- ಹಿರಿಯರನ್ನು ಗೌರವಿಸು, ಹಿರಿತನದಿಂದ ಬಾಳು ಎನ್ನುವಂತೆ ಮನೆಯ ಹಿರಿಯರ ಆಶೋತ್ತರಗಳಿಗೆ ಬೆಲೆ ಕೊಡಿ. ಅವರ ಆರೋಗ್ಯ ತಪಾಸಣೆಗಾಗಿ ಸಕ್ರಿಯ ಭಾಗವಹಿಸುವಿಕೆ ಮುಂತಾದ ಕಾರ್ಯಗಳನ್ನು ಮಾಡುವ ಮೂಲಕ ಇಷ್ಟಾರ್ಥ ಸಿದ್ಧಿಯನ್ನು ಹೊಂದುವಿರಿ.

ವೃಶ್ಚಿಕ:- ಅನೇಕ ಸಮಸ್ಯೆಗಳನ್ನು ಇಟ್ಟುಕೊಂಡರೂ ಮಾತಿನ ಚಾಣಾಕ್ಷತೆಯಿಂದ ವರ್ತಮಾನವನ್ನು ಖಂಡಿತವಾಗಿ ಗೆಲ್ಲುವಿರಿ. ಭವಿಷ್ಯದಲ್ಲಿ ನಿಮಗೆ ಉತ್ತಮ ದಿನಗಳಿವೆ. ನಿಮ್ಮನ್ನು ಆರಾಧಿಸುವ ಬಹಳ ಜನ ನಿಮ್ಮ ಹಿಂಬಾಲಕರಾಗುವರು. ಇದರಿಂದ ನಿಮ್ಮ ವರ್ಚಸ್ಸು ಹೆಚ್ಚಾಗುವುದು.

ಧನುಸ್ಸು:- ತುಂಬಾ ಹಳೆಯ ವ್ಯಾಜ್ಯದ ವಿಚಾರದಲ್ಲಿ ಹತ್ತಿರದ ಸ್ನೇಹಿತರಿಂದ ಪರಿಹಾರದ ದಾರಿಗಳು ಸಿಗಲಿವೆ. ಗುರುವಿನ ಸ್ತೋತ್ರ ಪಠಿಸಿ. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಎಳ್ಳುದೀಪ ಹಚ್ಚಿ. ಪ್ರಯಾಣದಲ್ಲಿಎಚ್ಚರಿಕೆ ಇರಲಿ.

ಮಕರ:- ಸಿಟ್ಟಿನ ಮಾತುಗಳನ್ನು ಬಿಟ್ಟುಬಿಡಿ. ಮುಂಗೋಪದಿಂದ ಒಳ್ಳೆಯ ಸ್ನೇಹಿತರು ದೂರವಾಗುವರು. ತಾಳಿದವನು ಬಾಳಿಯಾನು. ಆದಷ್ಟು ತಾಳ್ಮೆಯಿಂದ ಇರಿ. ಗುರುವಿನ ಶ್ರೀರಕ್ಷೆ ಇರುವುದರಿಂದ ಮುಂದಿನ ದಾರಿ ಉತ್ತಮವಾಗಿದೆ.

ಕುಂಭ:- ಮನೆಯಲ್ಲಿನ ಸದಸ್ಯರ ಜತೆ ಮನಬಿಚ್ಚಿ ಮಾತನಾಡಿ. ಇದರಿಂದಲೇ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಕೆಲವು ಹೊಸ ತಂತ್ರ ಸೂತ್ರಗಳಿಂದ ಹೆಚ್ಚಿನ ಒಳಿತನ್ನು ಹೊಂದಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮೀನ:- ಗಾಳಿ ಬಂದಾಗ ತೂರಿಕೋ ಎನ್ನುವಂತೆ ಗ್ರಹಗತಿಗಳು ನಿಮ್ಮ ಪರವಾಗಿ ಕೆಲಸ ಮಾಡಲಿವೆ. ಹಾಗಾಗಿ ನಿಮ್ಮ ಇಚ್ಛಿತ ಕಾರ್ಯಗಳನ್ನು ಪೂರೈಸಿಕೊಳ್ಳಿ. ನಿಮಗೆ ಬರಬೇಕಾಗಿದ್ದ ಹಣಕಾಸು ನಿಮ್ಮ ಕೈಸೇರಲಿದೆ.

Exit mobile version