ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ.? ಅಕ್ಟೋಬರ್,01,2019- ಮಂಗಳವಾರ

ಮೇಷ:- ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಶತ್ರುವಿನ ಎಲ್ಲಾ ವರಸೆಗಳನ್ನು ತಿಳಿಯುವುದರಿಂದ ನಿಮ್ಮ ರಾಜಕೀಯ ಜೀವನಕ್ಕೆ ಒಂದು ಹೊಸ ತಿರುವು ಸಿಗುವುದು. ನಿಮ್ಮ ಬಗೆಗಿನ ವಿಶೇಷ ಪರೀಕ್ಷೆಗೆ ಸದ್ಯವೇ ಕಾಲ ಕೂಡಿ ಬರುವುದು.

ವೃಷಭ:- ಎಲ್ಲಾ ವಿಚಾರಗಳಲ್ಲಿಯೂ ಕಾರ್ಯಸಿದ್ಧಿಯ ಬಗ್ಗೆ ವಿವೇಕದೊಂದಿಗೆ ಪೂರೈಸಿ. ಸಂಗಾತಿಯ ಸಲಹೆಯಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು.

ಮಿಥುನ:- ಸಾಂಕೇತಿಕವಾದ ನಿಮ್ಮ ಪ್ರತಿಭಟನೆ, ಪ್ರತಿಪಾದನೆ ದಡ್ಡರಿಗೆ ಅರ್ಥವಾಗುವುದಿಲ್ಲ. ಸರಳವಾಗಿ ಮಾತನಾಡಿ ಬೃಹತ್‌ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಬೇರೆಯವರ ಹಣಕಾಸಿನ ವಿಷಯದಲ್ಲಿ ಮೂಗು ತೂರಿಸದಿರಿ.

ಕಟಕ:- ಕಾರ್ಯದಲ್ಲಿ ಸಿದ್ದಿ ಇದೆಯಾದರೂ ಏರುತಗ್ಗಿನ ದಾರಿಯಲ್ಲಿ ಕಲ್ಲುಮುಳ್ಳಿನ ಬಿರುದಾರಿಯಲ್ಲಿ ಸಾಗಬೇಕಾಗಿರುವುದರಿಂದ ಎಚ್ಚರಿಕೆ ಅಗತ್ಯ. ಆದಷ್ಟು ಕುಲದೇವತಾ ಪ್ರಾರ್ಥನೆ ಮಾಡಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಸಿಂಹ:– ಆರೋಗ್ಯದಲ್ಲಿ ನಿರಾಸಕ್ತಿ ಹೊಂದಬೇಡಿ. ದಿಢೀರ್‌ ಉಂಟಾಗುವ ಅಶಕ್ತತೆಯಿಂದ ಕಿರಿಕಿರಿ ಉಂಟಾಗುವುದು. ಮನೆವೈದ್ಯರ ಸಲಹೆಯಂತೆ ಔಷಧೋಪಚಾರ ಪಡೆದುಕೊಳ್ಳಿ. ಮನೆಯಲ್ಲಿನ ನೆಮ್ಮದಿಯ ವಾತಾವರಣವು ಕಾಯಿಲೆಯಿಂದ ಬೇಗ ಗುಣಮುಖರಾಗುವಲ್ಲಿ ಸಹಕಾರಿಯಾಗುವುದು.

ಕನ್ಯಾ:- ನಿಮ್ಮ ಜತೆಗಾರರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಅತ್ಯುತ್ತಮ ಕ್ಷಣಗಳು ವ್ಯರ್ಥವಾಗದಿರುವಂತೆ ನೋಡಿಕೊಳ್ಳಿ. ಇನ್ನೊಬ್ಬರ ಮರ್ಜಿಗೆ ಒಳಗಾಗಿ ನಿಮ್ಮತನವನ್ನು ನೀವು ಬಿಟ್ಟುಕೊಡದಿರಿ. ಇದರಿಂದ ಮುಂದೆ ನಿಮಗೆ ಒಳಿತಾಗುವುದು.

ತುಲಾ:- ಮಕ್ಕಳು, ಕೆಲಸಗಾರರು, ಕೆಲವು ಸರ್ಕಾರಿ ಅಧಿಕಾರಿಗಳು ಒತ್ತಡ ತರುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆಯಿಂದ ವ್ಯವಹರಿಸಿ. ಕೋಪವು ಅನೇಕ ಅನರ್ಥಗಳಿಗೆ ಕಾರಣವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ವೃಶ್ಚಿಕ:- ರಾಜಕೀಯ ತಂತ್ರಗಾರಿಕೆ, ರಾಜಕೀಯ ದಾಳಗಳು ಉರುಳುವುದು ಇತ್ಯಾದಿ ಇದ್ದೇ ಇರುತ್ತದೆ. ಆದರೆ ಮನದಾಳದ ಮಾತಿನಿಂದ ಜನಪ್ರಿಯತೆ ಹೊಂದಲು ಸಾಧ್ಯವಾಗುವುದು. ಹಮ್ಮಿಕೊಂಡ ಕಾರ್ಯಗಳಲ್ಲಿ ಗಣ್ಯರನೇಕರ ಬೆಂಬಲ ದೊರೆಯುವುದು.

ಧನುಸ್ಸು:– ನಿಮ್ಮ ವೈಯಕ್ತಿಕ ಕೆಲಸಗಳನ್ನು ಬಿಟ್ಟು ಬೇರೆ ಕೆಲಸಗಳನ್ನು ಎತ್ತಿಕೊಳ್ಳುವ ಸಾಹಸ ಬೇಡ. ವಿನಾಕಾರಣ ಅಪವಾದಗಳು ನಿಮ್ಮ ಮೇಲೆ ಬರುವುವು, ತಾಳ್ಮೆಇರಲಿ. ಆಂಜನೇಯ ಸ್ತೋತ್ರ ಪಠಿಸಿ. ಜಯಶೀಲರಾಗಿ.

ಮಕರ:- ಮೃಷ್ಟಾನ್ನದ ಭೋಜನ ಸವಿಯುವ ಸಾಧ್ಯತೆ ಇದೆ ಅಥವಾ ಸುಂದರ ಪ್ರದೇಶಗಳ ವೀಕ್ಷಣೆಗಾಗಿ ಸಮಯವನ್ನು ಮೀಸಲಿಡುವಿರಿ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯು ಮನಸ್ಸಿಗೆ ಮುದ ನೀಡುವುದು. ಮನೆಯಲ್ಲಿಸಂತಸದ ವಾತಾವರಣ ಇರುತ್ತದೆ.

ಕುಂಭ:- ಹಲಸಿನ ಹಣ್ಣನ್ನು ಸೂಜಿಯಿಂದ ಕತ್ತರಿಸಲು ಆಗುವುದಿಲ್ಲ. ಅದಕ್ಕೆ ಹರಿತವಾದ ಚಾಕು ಬೇಕು. ಹಾಗಾಗಿ ನಿಮ್ಮ ವಿರೋಧಿಗಳನ್ನು ಎದುರಿಸಲು ಸೌಮ್ಯತೆ ಸಾಕಾಗುವುದಿಲ್ಲ. ನೀವು ಕೂಡಾ ಕೆಲವೊಮ್ಮೆ ರೋಷಾವೇಶ ವ್ಯಕ್ತಪಡಿಸಬೇಕಾಗುವುದು.

ಮೀನ:– ಪ್ರತಿಯೊಂದು ಕಾರ್ಯದಲ್ಲೂಅಡೆತಡೆ ಉಂಟಾಗುತ್ತಿದೆ ಎಂಬ ಭಾವನೆಯಿದ್ದಲ್ಲಿ ಮಾತಾ ದುರ್ಗಾದೇವಿಯನ್ನು ಪ್ರಾರ್ಥಿಸಿ. ಬಡವರಿಗೆ ಆಹಾರ ನೀಡಿ. ಪ್ರಯಾಣ ಕಾಲದಲ್ಲಿ ಸ್ವಲ್ಪ ಉದ್ದಿನಕಾಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

Exit mobile version