ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 4, 2019- ಬುಧವಾರ

ಮೇಷ:- ಟೀಕೆ ಟಿಪ್ಪಣಿಗಳಿಗೆ ಹೆದರದಿರಿ. ಆದರೆ ಭಂಡತನ ತೋರುವುದು ಬೇಡ. ಅಪರೂಪದ ಸಿದ್ಧಿಯೊಂದು ಲಭಿಸಲಿದೆ. ಸಮಯಕ್ಕೆ ಸರಿಯಾಗಿ ಹಣಕಾಸು ಬರುವುದರಿಂದ ಮನಸ್ಸಿಗೆ ನೆಮ್ಮದಿ ಉಂಟಾಗುವುದು.

ವೃಷಭ:– ವೈರತ್ವ ಸಾಧಿಸಲು ಜೀವನ ದೀರ್ಘವಾದುದಲ್ಲ. ಹಾಗಾಗಿ ಕ್ಷಮಿಸಿ ಒಳ್ಳೆಯವರಾಗಿ. ಮತ್ತು ವಿರೋಧಿಗಳೊಡನೆ ಸ್ನೇಹಹಸ್ತ ಚಾಚುವ ಪ್ರಯತ್ನ ಮಾಡಿ. ಇದರಿಂದ ಮನಸ್ಸು ನಿರ್ಮಲವಾಗುವುದು. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು.

ಮಿಥುನ:– ಸದಾ ಸಂಚಾರಿಗಳಾದ ನೀವು ಅನೇಕ ಊರು, ಕೇರಿಗಳನ್ನು ಸುತ್ತುತ್ತಾ ಜನರು, ಪರಿಸರಗಳ ಬಗ್ಗೆ ಮಾಹಿತಿಯನ್ನು ಹೊಂದುವಿರಿ. ಇದರಿಂದ ನಿಮಗೆ ಅಪರೂಪದ ಪ್ರಶಂಸೆ ದೊರೆಯುವುದು. ಗುರುವಿನ ಅನುಗ್ರಹವೂ ಇರುವುದರಿಂದ ಮನಸ್ಸಿಗೆ ಉಲ್ಲಾಸ ಮೂಡುವುದು.

ಕಟಕ:– ಜೀವನದಲ್ಲಿ ಆರಾಮಾಗಿರಲು ಎಲ್ಲಾ ದಿನವೂ ಭಾನುವಾರವಾಗಿರುವುದಿಲ್ಲ. ಅಂತೆಯೇ ಈ ದಿನ ಹೆಚ್ಚು ಕೆಲಸ ಮಾಡಬೇಕಾಗುವುದು. ಕುಲದೇವರ ಪ್ರಾರ್ಥನೆಯಿಂದ ಕೆಲಸ ಆರಂಭಿಸಿ. ಸಾಧ್ಯವಾದರೆ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಇದರಿಂದ ಒಳಿತಾಗುವುದು.

ಸಿಂಹ:– ನಿಮ್ಮ ಮುಂಗೋಪದ ವಿಚಾರವಾಗಿ ಸಂಗಾತಿಯಿಂದ ಅಸಹಕಾರ ಬರುವ ಸಾಧ್ಯತೆ ಇದೆ. ಹಾಗಾಗಿ ಸಂಗಾತಿಯ ಇಷ್ಟಾನಿಷ್ಟಗಳ ಕಡೆಗೂ ಗಮನ ಹರಿಸುವುದು ಒಳ್ಳೆಯದು. ಹಣಕಾಸಿನ ತೊಂದರೆ ಇರುವುದಿಲ್ಲ.

ಕನ್ಯಾ:– ಪ್ರಶ್ನಿಸದೆ ಯಾವೂದನ್ನು ಒಪ್ಪಿಕೊಳ್ಳಬೇಡಿ. ಒರಟುತನದಿಂದ ಪ್ರಶ್ನಿಸುವುದು ಸೂಕ್ತವಲ್ಲ. ನೀವು ಮಾಡಬೇಕೆಂದಿರುವ ಕೆಲಸ ಕಾರ್ಯಗಳಿಗೆ ಸ್ನೇಹಿತರ ಬೆಂಬಲದಿಂದ ಅನುಕೂಲವಾಗುವುದು. ವಿಷ್ಣುಸಹಸ್ರನಾಮವನ್ನು ತಪ್ಪದೇ ಪಠಿಸಿ.

ತುಲಾ:– ಸಹನೆಯೇ ನಿಮ್ಮ ದೊಡ್ಡ ಅಸ್ತ್ರ. ಅಪರೂಪದ ಪ್ರಭಾವಿ ಜನ ನಿಮ್ಮಿಂದ ಸಹಾಯವನ್ನು ಬಯಸಿದ್ದಾರೆ. ಅವರಿಗೆ ಹಿಂದು ಮುಂದು ನೋಡದೆ ಸಹಾಯ ಹಸ್ತ ನೀಡಬಹುದು. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತುಗಳು ನಿಮಗೆ ಯಶಸ್ಸನ್ನು ತಂದುಕೊಡುವುದು.

ವೃಶ್ಚಿಕ:- ಹೊಸದೇ ಆದ ಸ್ನೇಹವಲಯವನ್ನು ಸಂಪಾದಿಸುವಿರಿ. ಗುರುವಿನ ಶುಭ ಸಂಚಾರದಿಂದಾಗಿ ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು. ಬಾಕಿ ಇದ್ದ ಕೆಲಸಗಳಿಗೆ ಚಾಲನೆ ದೊರೆಯುವುದರಿಂದ ಮನಸ್ಸಿಗೆ ಹರ್ಷ ಉಂಟಾಗುವುದು.

ಧನುಸ್ಸು:– ಬರೀ ಮಾತನಾಡುತ್ತಲೇ ಇರುವ ಜನರನ್ನು ಎಷ್ಟು ದಿನ ನಂಬಿ ಹಾಳಾಗುವಿರಿ. ಅವರು ಆಕಾಶಕ್ಕೆ ಏಣಿ ಹಾಕಿ ನಿಮ್ಮನ್ನು ಕರೆದೊಯ್ಯುವ ಭರವಸೆ ನೀಡುವರು. ಇದು ಎಷ್ಟರ ಮಟ್ಟಿಗೆ ಕಾರ್ಯ ಸಾಧುವಾಗುವುದು ಎಂಬುದನ್ನು ನೀವು ಚಿಂತಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಿ.

ಮಕರ:- ನೀವು ರಾಜಕಾರಣಿಗಳಾಗಿದ್ದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುವಿರಿ. ನೀವು ನಂಬಿದ ನಿಮ್ಮ ಬೆಂಬಲಿಗರು ಮತ್ತು ಮೇಲಧಿಕಾರಿಗಳು ನಿಮಗೆ ಸಹಾಯ ನೀಡಲು ಹಿಂದೇಟು ಹಾಕುವರು. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ.

ಕುಂಭ:- ಪಾರ್ಟನರ್‌ ಶಿಪ್‌ ವ್ಯವಹಾರಗಳಿಗೆ ಕೈಹಾಕಿದ ಮೇಲೆ ನಂಬಿಕೆ ಇರಲಿ. ನಂಬಿ ಕರೆದರೆ ಶಿವನು ಕೂಡಾ ಓಗೊಡುವಂತೆ ಒಂದು ದೈವ, ಒಬ್ಬ ಗುರುವನ್ನು ನಂಬಿ. ನಿಮ್ಮ ಕಾರ್ಯಗಳು ಸುಲಲಿತವಾಗಿ ಆಗುವುವು.

ಮೀನ:- ‘ಸರ್ವಂ ಕಾಂಚಣಂ ಆಶ್ರಿತಂ’ ಎಂಬಂತೆ ಪ್ರತಿಯೊಂದು ವ್ಯಾಪಾರೀಕರಣ ಆಗಿರುವುದರಿಂದ ನೈಜ ಸ್ನೇಹಕ್ಕೆ ಬೆಲೆಯಿಲ್ಲದಂತೆ ಆಗಿದೆ. ಆದರೂ ಕೆಲವೊಮ್ಮೆ ಕಾಲಕ್ಕೆ ತಕ್ಕಂತೆ ಬದಲಾಗಬೇಕಾಗುವುದು ಅನಿವಾರ್ಯ. ನಿಮಗೆ ಇಷ್ಟವಿಲ್ಲದಿದ್ದರೂ ಕೆಲವು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಬೇಕಿದೆ

Exit mobile version