ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 16, 2019- ಸೋಮವಾರ

ಮೇಷ:- ಅನಿರೀಕ್ಷಿತ ಚುಚ್ಚುಮಾತುಗಳನ್ನು ಹತ್ತಿರದವರೇ ಆಡುವುದರಿಂದ ಮನಸ್ಸಿಗೆ ಕಿರಿಕಿರಿ ಆಗುವುದು. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದಿರಿ. ಕೊನೆಗೆ ಅವರೇ ಶರಣಾಗತರಾಗುವರು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ವೃಷಭ:– ‘ಸಂಶಯಾತ್ಮ ವಿನಶಂತಿ’ ಎನ್ನುವಂತೆ ಸಂಗಾತಿಯನ್ನು ಅನುಮಾನ ದೃಷ್ಟಿಯಿಂದ ನೋಡುವುದನ್ನು ಬಿಡಿ. ಇದರಿಂದ ಸಂಸಾರದಲ್ಲಿ ಬಿರುಕು ಬಿಡುವ ಸಾಧ್ಯತೆ ಇರುವುದು. ಹಿರಿಯರ ಸಲಹೆಯನ್ನು ಸ್ವೀಕರಿಸಿ ಹೆಜ್ಜೆ ಇಡುವುದು ಒಳ್ಳೆಯದು.

ಮಿಥುನ:- ನಿಮ್ಮದೇ ಆದ ವರ್ಚಸ್ಸಿಗೆ ಧಕ್ಕೆ ಬರುವ ಸಾಧ್ಯತೆ ಹೇರಳವಾಗಿರುವುದು. ಮಾತಿನ ಮೇಲೆ ನಿಯಂತ್ರಣವಿರಲಿ. ಗುರುಧ್ಯಾನದಿಂದ ಮನೋಕಾಮನೆಗಳು ಪೂರ್ಣಗೊಳ್ಳುವುವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಕಟಕ:– ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಫುಲ ಅವಕಾಶಗಳು ದೊರೆಯುವುವು. ಮಂಗಳ ಕಾರ್ಯದ ಈವೆಂಟ್‌ ಮ್ಯಾನೇಜ್‌ ಮಾಡುವ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಹೇರಳ ಹಣ ಬರುವುದು. ಮತ್ತು ಅವರ ಕೌಶಲ್ಯ ಜನ ಮೆಚ್ಚುಗೆಗೆ ಪಾತ್ರವಾಗುವುದು.

ಸಿಂಹ:- ಮರಕ್ಕಿಂತ ಮರ ದೊಡ್ಡದು ಎನ್ನುವಂತೆ ನಿಮ್ಮ ಜ್ಞಾನವೇ ದೊಡ್ಡದು ಎಂದು ಭಾವಿಸದಿರಿ. ನಿಮ್ಮ ಜ್ಞಾನಕ್ಕಿಂತಲೂ ಹೆಚ್ಚು ಜ್ಞಾನವಂತ ಜನರ ಸಂಪರ್ಕ ನಿಮಗಾಗುವುದು. ಹಾಗಾಗಿ ವಿನಯಶಾಲಿಗಳಾಗಿ. ಇದರಿಂದ ನೀವು ವಿಜಯಶಾಲಿಗಳಾಗುವಿರಿ.

ಕನ್ಯಾ:- ಕೆಲಸದ ಒತ್ತಡಗಳು ನಿಮ್ಮ ತಾಳ್ಮೆಯನ್ನು ಕಸಿದುಕೊಳ್ಳುವುದರಿಂದ ಸಣ್ಣಪುಟ್ಟ ವಿಷಯಗಳಿಗೂ ರೇಗುವಂತೆ ಆಗುವುದು. ಸಾರ್ವಜನಿಕ ಕ್ಷೇತ್ರದಲ್ಲಿರುವ ನೀವು ಆದಷ್ಟು ತಾಳ್ಮೆಯನ್ನು ಪ್ರದರ್ಶಿಸುವುದು ಒಳ್ಳೆಯದು. ಕೋಪ ಅನರ್ಥಕ್ಕೆ ದಾರಿ ಆಗುವುದು.

ತುಲಾ:– ವೃತ್ತಿಯಲ್ಲಿ ಸ್ಥಳ ಬದಲಾವಣೆ ಸಾಧ್ಯತೆ ಕಂಡು ಬರುವುದು. ವಿಶೇಷ ಕೆಲಸಗಳಲ್ಲಿ ಯಶಸ್ಸು ದೊರೆಯುವುದು. ಬರಬೇಕಾಗಿದ್ದ ಹಣಕಾಸು ಕೈಸೇರುವ ಸಾಧ್ಯತೆ ಇದೆ. ಖರ್ಚಿಗೆ ಕಡಿವಾಣ ಇರಲಿ.

ವೃಶ್ಚಿಕ:- ವೃಥಾ ನಿಂದನೆಗಳನ್ನು ಎದುರಿಸಬೇಕಾಗಿ ಬರಬಹುದು. ನಿಮ್ಮನ್ನು ನೀವು ವಿಮರ್ಶಿಸಿಕೊಳ್ಳಿ. ಕುಲದೇವರ ಆರಾಧನೆಯೊಂದಿಗೆ ಶನಿ ಮಹಾರಾಜರ ಪ್ರಾರ್ಥನೆ ಮಾಡುವುದು ಒಳ್ಳೆಯದು. ಸಂಜೆ ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ಧನುಸ್ಸು:– ಆಫೀಸಿನಲ್ಲಿಆಗದವರು ನಿಮ್ಮನ್ನು ಕೆಣಕುವ ಸಿದ್ಧತೆಯಲ್ಲಿದ್ದಾರೆ. ಮುಳ್ಳಿನ ಮೇಲೆ ಹರಡಿದ ಬಟ್ಟೆಯನ್ನು ಜಾಣ್ಮೆಯಿಂದ ತೆಗೆಯುವಂತೆ ಅವರನ್ನು ಜಾಣ್ಮೆಯಿಂದ ಎದುರಿಸಿರಿ. ಯಶಸ್ಸು ನಿಮ್ಮದಾಗುವುದು.

ಮಕರ:- ನಿಮ್ಮದೇ ಆದ ಅಂತಿಮ ನಿರ್ಣಯದಿಂದ ಎಲ್ಲವೂ ಸುಗಮವಾಗಲಿದೆ. ನಿಮ್ಮ ಒಳ್ಳೆಯ ಕಾರ್ಯಗಳಿಗೆ ಭಗವಂತ ಸಹಾಯ ಮಾಡುವುದರಿಂದ ನಿಮ್ಮ ಕೆಲಸಗಳು ಯಾವ ಅಡೆತಡೆಯಿಲ್ಲದೆ ಸಾಂಗವಾಗಿ ನೆರವೇರುವುವು.

ಕುಂಭ:– ಸರಿಯಾಗಿ ಸಾಗುತ್ತಿರುವ ಕಾರ್ಯ ವಿಧಾನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಬೇಡ. ನಿಮ್ಮ ಕಾರ್ಯಯೋಜನೆಗಳಿಗೆ ಹಿರಿಯ ಅಧಿಕಾರಿಗಳಿಂದ ಮಾನ್ಯತೆ ಸಿಗುವುದು. ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವುದು.

ಮೀನ:- ಕುಟುಂಬದ ಸದಸ್ಯರು ನಿಮಗೆ ಒರಟಾಗಿ ಮಾತನಾಡುವರು. ಅವರನ್ನು ನಗುಮುಖದಿಂದಲೇ ಎದುರಿಸಿ. ಅವರಿಗೆ ಅವರ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸುವರು. ಶ್ರೀ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ.

Exit mobile version