ಐಕ್ಯತಾ ದಿನದಂದು ಸೈಕಲ್‌ ಜಾಥ

ಬೆಂಗಳೂರು, ಅ. 28: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾಭಿವೃದ್ಧಿ ಮಂಡಲಿ ಇವರ ಸಂಯಯಕ್ತ ಆಶ್ರಯದಲ್ಲಿ  “ರಾಷ್ಟ್ರೀಯ ಐಕ್ಯತಾ ದಿನಾಚರಣೆ” ಅಂಗವಾಗಿ ಸದೃಢ ಹಾಗೂ ಆರೋಗ್ಯಕರ ಬೆಂಗಳೂರಿಗಾಗಿ ಸೈಕಲ್ ಜಾಥಾವನ್ನು ಅಕ್ಟೋಬರ್ 31 ರಂದು ಬೆಳಿಗ್ಗೆ 7 ಗಂಟೆಗೆ ವಿಧನಸೌಧದ ಮೆಟ್ಟಿಲುಗಳ ಮುಂಭಾಗ ಹಮ್ಮಿಕೊಳ್ಳಲಾಗಿದೆ.

ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಸೈಕಲ್ ಜಾಥಾಕ್ಕೆ ಚಾಲನೆ ನೀಡಲಿದ್ದು, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್,  ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕ ಪ್ರವೀಣ್ ಸೂದ್ ಉಪಸ್ಥಿತರಿರುವರು.

ಜಾಥಾವು ವಿಧಾನಸೌಧದ ಮುಂಭಾಗದಿಂದ ಪ್ರಾರಂಭವಾಗಿ ಕೆ.ಆರ್.ಸರ್ಕಲ್, ಕಬ್ಬನ್ ಪಾರ್ಕ್, ವಿಠ್ಠಲ್ ಮಲ್ಯ ರಸ್ತೆ ಮುಖಾಂತರ ಟ್ರಿನಿಟಿ ಸರ್ಕಲ್, ದೊಮ್ಮಲೂರು ಜಂಕ್ಷನ್‍ನಿಂದ ಮರಳಿ ಅದೇ ಮಾರ್ಗದಿಂದ ಒಟ್ಟು 16.5 ಕಿ.ಮೀ. ಕ್ರಮಿಸಿ ವಿಧಾನಸೌಧಕ್ಕೆ  ವಾಪಸ್ಸು ಬಂದು ಮುಕ್ತಾಯವಾಗುವುದು.

Exit mobile version